ಎರಡು ವರ್ಷ ಅದೇನೋ ಹುಚ್ಚು ಕನಸು, "ಬರಿ ಮೈ ಫಕೀರ ತಾತ, ಅದ್ಹೇಗೆ ಇಡೀ ಜಗತ್ತನ್ನ ತನ್ನ ಬರೀ ಮಾತಿಗೆ ಹೆದರಿಸಿದ ಅಂತ".... ಕನಸು ಶುರುವಾದದ್ದು, ಗುಜರಾತಿನ ಗಾಂಧಿನಗರದ ದಂಡಿ ಕುಟೀರದಲ್ಲಿ.......
ಗಾಂಧಿ ಬೆಳೆದ ರೀತಿ ಅವನ ಯೋಚನೆಗಳು, ಎಂತಹವರನ್ನೂ ಅಲಗಾಡಿಸುತ್ತೆ...... ಉಪವಾಸ, ಸತ್ಯ ನಿಷ್ಠೆ, ವೃತಗಳನ್ನ ಒಂದು ಸಿದ್ದಾಂತದ ಮೇರೆಗೆ ತನ್ನ ಇಡೀ ಜೀವನವನ್ನ ತೆರಿದಿಟ್ಟುಕೊಂಡ ರೀತಿ ಎಲ್ಲಾ ಕನಸಿನಂತೆ ಅನ್ನಿಸಿಬಿಡುತ್ತದೆ. ಸಾಯದೇ ಇವತ್ತೀಗೂ ಚರ್ಚೆ ಆಗುವ ಫಕೀರನಿಗೆ ಕನಸುಗಳಿದ್ದವೋ ಇಲ್ಲ ದೃಢ ನಿರ್ಧಾರಗಳಿತ್ತೋ ಅಂತೂ ಯುಗಪುರುಷನಾದ....
ನಾನು ದಂಡಿ ಕುಟೀರದಲ್ಲಿ ಕಂಡ ಆತನ ಬಾಲ್ಯ ಎಷ್ಟೂ ಸಾಮಾನ್ಯ ಅನ್ನಿಸಿದರೂ ಅಲ್ಲೆಲ್ಲೋ ಒಂದು ಬಂಡೆಯಂತಹ ಧ್ಯೇಯಗಳು ಎದ್ದು ನಿಂತು ಬಿಡುತ್ತದೆ. ಪ್ರತೀ ಧ್ಯೇಯಕ್ಕೂ ಅಷ್ಟೊಂದು ಚಿಂತನೆ ಮಾಡುವ ಸಣ್ಣ ಹುಡುಗ ಆಕ್ಷಣ ನಾಯಕನಾಗದೆಯೇ ತನ್ನೊಳಗಿನ ತುಮುಲಕ್ಕೆ ಹೊಸ ದಾರಿ ಕೊಡುವ ಯೋಗಿಯಾಗುತ್ತಾನೆ.....
ಹರಿಶ್ಚಂದ್ರ ನಾಟಕವನ್ನ ತನ್ನೊಳಗೆ ಪ್ರಯೋಗ ಗೊಳಿಸಬೇಕೆಂಬ ಗೀಳು... ಸರಿಯಿಲ್ಲದರ ವಿರುದ್ಧ ಹೋರಾಡಬೇಕೆಂಬ ಕನಸಿಗಾಗಿ ತನ್ನನ್ನ ಮಾಂಸಾಹಾರಿಯಾಗಿಸುವ ಪ್ರಯೋಗ ಹಾಗೂ ಆ ಪ್ರಯೋಗವೇ ತಪ್ಪೆಂದು ಪ್ರಾಯಶ್ಚಿತ್ತಕ್ಕೆ ಹೊರಡುವ ಹುಡುಗನಲ್ಲಿ ಸಹಜ ನಾಯಕತ್ವದ ಗುಣಗಳಿಗಿಂತ ಸಾಮಾಜಿಕ ವಿಜ್ಞಾನಿಯ ಕುತೂಹಲಗಳು ಅಚ್ಚರಿ ಹುಟ್ಟಿಸುವಷ್ಟು ಮೆಚ್ಚುಗೆ ಪಡೆಯುತ್ತವೆ. ಏನೂ ಮಾಡಲಾಗದವನು ಎಂದು ಹಲಬುವ, ಅದಕ್ಕಾಗಿ ಸಾವಿಗೂ ಹೊರಡುವ ಈತನಲ್ಲಿಯ ದೈವತ್ವ ಗುಣಗಳು ಚಿಕ್ಕ ಹುಡುಗನಲ್ಲೇ ಹುಟ್ಟಿ ಬಂದವು ಅನ್ನಿಸುತ್ತೆ.
ನಾವು ಕಾಣದ್ದನ್ನ ಅನುಭವಿಸದ್ದನ್ನ ನಂಬುವುದು ಅದು ನಿಮ್ಮೆದುರಿಲ್ಲದಾಗ ಯಾರಿಗೂ ಸಾಧ್ಯವಾಗುವುದಿಲ್ಲ ಅಲ್ಲವೇ,.....ಅದಕ್ಕೇ ಏನೋ ಇವತ್ತು ಆತನ ಬಗ್ಗೆ ಅಷ್ಟೊಂದು ಚರ್ಚೆಗಳು..ಅಪನಂಬಿಕೆಗಳು...... ಆದರೆ ತನ್ನ ಸಾಧ್ಯವಾಗದಿರುವಿಕೆಯನ್ನ ಸಾಧ್ಯವಾಗಿಸುವ ಆತನ ಪಯಣಕ್ಕೆ ಆತ ದಣಿದದ್ದಂತೂ ಸತ್ಯವಲ್ಲವೇ..ಅದನ್ನ ನಾವೇಕೆ ಮರೆತು ಬಿಡುತ್ತೇವೆ???!! ಹಾಗೆ ತನ್ನನ್ನ ಪ್ರಯೋಗಕ್ಕೆ ಒಡ್ಡುವ ಆತನೊಳಗಿನ ಆ ಹುಟ್ಟು ಯೋಗಿಗೆ... ನಮ್ಮ ಸಲಾಮಗಳನ್ನು ನೀಡುವುದರ ಬದಲು, ಮುಂದೆಲ್ಲೋ...... ಯಾವುದೋ ಸಂಧರ್ಭದಲ್ಲಿ..ಮಾಡಿದನು ಎನ್ನಲಾದ ತಪ್ಪಿಗೇ ಕಂದಾಯ ಸಲ್ಲಿಸುವಂತೆ ಮಾಡುವುದು ಮಾನವತೆಗೇ ನಾವು ಮಾಡುವ ಅನ್ಯಾಯವಲ್ಲವೇ???!
ಈ ಬೃಹತ್ ವ್ಯಕ್ತಿ ನನ್ನನ್ನ ಕಾಡಲಾರಂಭಿಸಿದ್ದು ಆಗಲೇ.... ಗುಜರಾತಿನ ಗಾಂಧಿನಗರದ ತುಂಬೆಲ್ಲ ಆತನ ಹೆಜ್ಜೆಗಳನ್ನು ಹುಡುಕುತ್ತಾ ನಡೆದಾಡಿದೆ... ಒಂದು ಹಂತದ ಗಾಂಧಿ ಸ್ವಲ್ಪ ದಂಡಿ ಕುಟೀರದಲ್ಲಿ, ಸ್ವಲ್ಪ ಗಾಂಧಿನಗರ ಆಶ್ರಮದಲ್ಲಿ ಅನಾವರಣ ಗೊಂಡರೆ.... ಅದಕ್ಕೂ ಮೀರಿದ ಗಾಂಧಿಯು ಪೋರಬಂದರಿನ ಆಶ್ರಮ ಹಾಗೂ ವಾರ್ದಾದ ಆಶ್ರಮದಲ್ಲಿ ವಿಸ್ತಾರವಾಗುತ್ತಾ ಹೋಯಿತು..
ಸಾಮಾಜಿಕ ವಿಜ್ಞಾನಿ, ಯೋಗಿಗಳ ಜೀವನವನ್ನ ತನ್ನಲ್ಲೇ ಹೋರಾಡಿ ತಂದ ತಾತನ ಬಾಲ್ಯ ಸಾಮಾನ್ಯವೆನಿಸಿದರೂ ಸಾಮಾನ್ಯವಾಗಿರಲು ಸಾಧ್ಯವೇ??????
ಒಂದಿಷ್ಟು ಗಾಂಧಿಯನ್ನ ಓದಿಕೊಳ್ಳಣವೇ ಎಂದು ಕೇಳುತ್ತಾ ಮುಂದಿನ ಬ್ಲಾಗಿನಲ್ಲಿ ಮತ್ತೊಂದಷ್ಟು ತೆರೆದುಕೊಳ್ಳವ....
ಗಾಂಧಿ ಬೆಳೆದ ರೀತಿ ಅವನ ಯೋಚನೆಗಳು, ಎಂತಹವರನ್ನೂ ಅಲಗಾಡಿಸುತ್ತೆ...... ಉಪವಾಸ, ಸತ್ಯ ನಿಷ್ಠೆ, ವೃತಗಳನ್ನ ಒಂದು ಸಿದ್ದಾಂತದ ಮೇರೆಗೆ ತನ್ನ ಇಡೀ ಜೀವನವನ್ನ ತೆರಿದಿಟ್ಟುಕೊಂಡ ರೀತಿ ಎಲ್ಲಾ ಕನಸಿನಂತೆ ಅನ್ನಿಸಿಬಿಡುತ್ತದೆ. ಸಾಯದೇ ಇವತ್ತೀಗೂ ಚರ್ಚೆ ಆಗುವ ಫಕೀರನಿಗೆ ಕನಸುಗಳಿದ್ದವೋ ಇಲ್ಲ ದೃಢ ನಿರ್ಧಾರಗಳಿತ್ತೋ ಅಂತೂ ಯುಗಪುರುಷನಾದ....
ನಾನು ದಂಡಿ ಕುಟೀರದಲ್ಲಿ ಕಂಡ ಆತನ ಬಾಲ್ಯ ಎಷ್ಟೂ ಸಾಮಾನ್ಯ ಅನ್ನಿಸಿದರೂ ಅಲ್ಲೆಲ್ಲೋ ಒಂದು ಬಂಡೆಯಂತಹ ಧ್ಯೇಯಗಳು ಎದ್ದು ನಿಂತು ಬಿಡುತ್ತದೆ. ಪ್ರತೀ ಧ್ಯೇಯಕ್ಕೂ ಅಷ್ಟೊಂದು ಚಿಂತನೆ ಮಾಡುವ ಸಣ್ಣ ಹುಡುಗ ಆಕ್ಷಣ ನಾಯಕನಾಗದೆಯೇ ತನ್ನೊಳಗಿನ ತುಮುಲಕ್ಕೆ ಹೊಸ ದಾರಿ ಕೊಡುವ ಯೋಗಿಯಾಗುತ್ತಾನೆ.....
ಹರಿಶ್ಚಂದ್ರ ನಾಟಕವನ್ನ ತನ್ನೊಳಗೆ ಪ್ರಯೋಗ ಗೊಳಿಸಬೇಕೆಂಬ ಗೀಳು... ಸರಿಯಿಲ್ಲದರ ವಿರುದ್ಧ ಹೋರಾಡಬೇಕೆಂಬ ಕನಸಿಗಾಗಿ ತನ್ನನ್ನ ಮಾಂಸಾಹಾರಿಯಾಗಿಸುವ ಪ್ರಯೋಗ ಹಾಗೂ ಆ ಪ್ರಯೋಗವೇ ತಪ್ಪೆಂದು ಪ್ರಾಯಶ್ಚಿತ್ತಕ್ಕೆ ಹೊರಡುವ ಹುಡುಗನಲ್ಲಿ ಸಹಜ ನಾಯಕತ್ವದ ಗುಣಗಳಿಗಿಂತ ಸಾಮಾಜಿಕ ವಿಜ್ಞಾನಿಯ ಕುತೂಹಲಗಳು ಅಚ್ಚರಿ ಹುಟ್ಟಿಸುವಷ್ಟು ಮೆಚ್ಚುಗೆ ಪಡೆಯುತ್ತವೆ. ಏನೂ ಮಾಡಲಾಗದವನು ಎಂದು ಹಲಬುವ, ಅದಕ್ಕಾಗಿ ಸಾವಿಗೂ ಹೊರಡುವ ಈತನಲ್ಲಿಯ ದೈವತ್ವ ಗುಣಗಳು ಚಿಕ್ಕ ಹುಡುಗನಲ್ಲೇ ಹುಟ್ಟಿ ಬಂದವು ಅನ್ನಿಸುತ್ತೆ.
ನಾವು ಕಾಣದ್ದನ್ನ ಅನುಭವಿಸದ್ದನ್ನ ನಂಬುವುದು ಅದು ನಿಮ್ಮೆದುರಿಲ್ಲದಾಗ ಯಾರಿಗೂ ಸಾಧ್ಯವಾಗುವುದಿಲ್ಲ ಅಲ್ಲವೇ,.....ಅದಕ್ಕೇ ಏನೋ ಇವತ್ತು ಆತನ ಬಗ್ಗೆ ಅಷ್ಟೊಂದು ಚರ್ಚೆಗಳು..ಅಪನಂಬಿಕೆಗಳು...... ಆದರೆ ತನ್ನ ಸಾಧ್ಯವಾಗದಿರುವಿಕೆಯನ್ನ ಸಾಧ್ಯವಾಗಿಸುವ ಆತನ ಪಯಣಕ್ಕೆ ಆತ ದಣಿದದ್ದಂತೂ ಸತ್ಯವಲ್ಲವೇ..ಅದನ್ನ ನಾವೇಕೆ ಮರೆತು ಬಿಡುತ್ತೇವೆ???!! ಹಾಗೆ ತನ್ನನ್ನ ಪ್ರಯೋಗಕ್ಕೆ ಒಡ್ಡುವ ಆತನೊಳಗಿನ ಆ ಹುಟ್ಟು ಯೋಗಿಗೆ... ನಮ್ಮ ಸಲಾಮಗಳನ್ನು ನೀಡುವುದರ ಬದಲು, ಮುಂದೆಲ್ಲೋ...... ಯಾವುದೋ ಸಂಧರ್ಭದಲ್ಲಿ..ಮಾಡಿದನು ಎನ್ನಲಾದ ತಪ್ಪಿಗೇ ಕಂದಾಯ ಸಲ್ಲಿಸುವಂತೆ ಮಾಡುವುದು ಮಾನವತೆಗೇ ನಾವು ಮಾಡುವ ಅನ್ಯಾಯವಲ್ಲವೇ???!
ಈ ಬೃಹತ್ ವ್ಯಕ್ತಿ ನನ್ನನ್ನ ಕಾಡಲಾರಂಭಿಸಿದ್ದು ಆಗಲೇ.... ಗುಜರಾತಿನ ಗಾಂಧಿನಗರದ ತುಂಬೆಲ್ಲ ಆತನ ಹೆಜ್ಜೆಗಳನ್ನು ಹುಡುಕುತ್ತಾ ನಡೆದಾಡಿದೆ... ಒಂದು ಹಂತದ ಗಾಂಧಿ ಸ್ವಲ್ಪ ದಂಡಿ ಕುಟೀರದಲ್ಲಿ, ಸ್ವಲ್ಪ ಗಾಂಧಿನಗರ ಆಶ್ರಮದಲ್ಲಿ ಅನಾವರಣ ಗೊಂಡರೆ.... ಅದಕ್ಕೂ ಮೀರಿದ ಗಾಂಧಿಯು ಪೋರಬಂದರಿನ ಆಶ್ರಮ ಹಾಗೂ ವಾರ್ದಾದ ಆಶ್ರಮದಲ್ಲಿ ವಿಸ್ತಾರವಾಗುತ್ತಾ ಹೋಯಿತು..
ಸಾಮಾಜಿಕ ವಿಜ್ಞಾನಿ, ಯೋಗಿಗಳ ಜೀವನವನ್ನ ತನ್ನಲ್ಲೇ ಹೋರಾಡಿ ತಂದ ತಾತನ ಬಾಲ್ಯ ಸಾಮಾನ್ಯವೆನಿಸಿದರೂ ಸಾಮಾನ್ಯವಾಗಿರಲು ಸಾಧ್ಯವೇ??????
ಒಂದಿಷ್ಟು ಗಾಂಧಿಯನ್ನ ಓದಿಕೊಳ್ಳಣವೇ ಎಂದು ಕೇಳುತ್ತಾ ಮುಂದಿನ ಬ್ಲಾಗಿನಲ್ಲಿ ಮತ್ತೊಂದಷ್ಟು ತೆರೆದುಕೊಳ್ಳವ....