ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ..
ಎದೆಯ ಕನಸು ಬತ್ತಿ ಹೋಗಿದೆ...
ಮನೆಯ ತುಂಬಾ ದೀಪಗಳ ಸಾಲು...
ದೀಪಾವಳಿಯ ಸಂಭ್ರಮ ಜಗಕ್ಕೆ
ನನ್ನ ಕಳೆದು ಕೊಂಡ ದುಃಖದ ಮೊಗೆ ಆಕೆಗೆ
ಬದುಕಿನ ದೀವಿಟಿಗೆ ದೀಪ ಹಚ್ಚುವುದ...
ಕಾಯಕದಲ್ಲೇ ಆಕೆಗೆ ಸಂಭ್ರಮ...
ಸುತ್ತೆಲ್ಲ ದೀಪ ಹಚ್ಚಿ... ಮನೆ ಬೆಳಗಿಸುವವರೇ...
ಆಕೆಗೆ ಕತ್ತಲೆಯಲ್ಲಾದರೂ ಹೊಸ ಕನಸು
ಕಾಣುವ ಹುಮ್ಮಸ್ಸು...
ಕತ್ತೆಲೆಯನ್ನ ಓಡಿಸುವ ಹುಮ್ಮಸ್ಸು ಜಗತ್ತಿಗೆ..
ಜಗಜಗಮಿಸುವ ಸುತ್ತೆಲ್ಲದರ ಮಧ್ಯೆ ಮರೆಯುತ್ತದೆ...
ನಾನು ಎಂಬ ಅಹಂಕಾರ...
ಮಧ್ಯೆ ಇದೆ ದುಡ್ಡೆಂಬ ದೊಡ್ಡಣ್ಣ...
ಕುಣಿಯುತ್ತಾಳೆ ಕತ್ತಲ್ಲಲ್ಲಿ ಆಕೆ
ಮನಸ್ಸಿನ ದುಗುಡ ಕಳೆಯಲು...
ಕತ್ತಲನ್ನ ನಿವಾರಿಸಿ, ಹೊಸತನ್ನ ...
ಬೆಳೆಸುವ ಹಪಹಪಿ ಬೆಳಕಿನ ಪ್ರಪಂಚಕ್ಕೆ...
'ಕತ್ತಲಿಂದ ಬೆಳಕಿನವರೆಗೆ' ನಮ್ಮ ನೆಡೆ ..
ವಿದ್ಯೆ ಅದಕ್ಕೆ ಪೂರಕ...
ಕಳೆದು ಹೋಗುತ್ತಿದೆ ಕತ್ತಲು....
ಕತ್ತಲಲ್ಲಿ ಕಾಡುವ ಭಾವ, ಕನಸುಗಳೂ...
ಬೆಳಕಿಗೆ ಮಾತ್ರ ಸ್ಥಾನವಾದರೆ ...
ನಿರಾಳವಾಗುವ ಕತ್ತಲೇ ಇಲ್ಲವಾದರೆ...
ಮನುಷ್ಯ...ಮನುಷ್ಯತ್ವಗಳನ್ನ ಎಲ್ಲಿ ಹುಡುಕಲಿ...
ವರ್ಷಕ್ಕೊಮ್ಮೆ ಬರುವ ದೀಪಾವಳಿಯ
ಸಂಭ್ರಮಕ್ಕಾದರೂ ಕತ್ತಲನ್ನ ನಮ್ಮಲ್ಲಿ ಬೆಳೆಯಕೊಡಣವೇ????
ರಶ್ಮಿ ಕುಂದಾಪುರ
ಎದೆಯ ಕನಸು ಬತ್ತಿ ಹೋಗಿದೆ...
ಮನೆಯ ತುಂಬಾ ದೀಪಗಳ ಸಾಲು...
ದೀಪಾವಳಿಯ ಸಂಭ್ರಮ ಜಗಕ್ಕೆ
ನನ್ನ ಕಳೆದು ಕೊಂಡ ದುಃಖದ ಮೊಗೆ ಆಕೆಗೆ
ಬದುಕಿನ ದೀವಿಟಿಗೆ ದೀಪ ಹಚ್ಚುವುದ...
ಕಾಯಕದಲ್ಲೇ ಆಕೆಗೆ ಸಂಭ್ರಮ...
ಸುತ್ತೆಲ್ಲ ದೀಪ ಹಚ್ಚಿ... ಮನೆ ಬೆಳಗಿಸುವವರೇ...
ಆಕೆಗೆ ಕತ್ತಲೆಯಲ್ಲಾದರೂ ಹೊಸ ಕನಸು
ಕಾಣುವ ಹುಮ್ಮಸ್ಸು...
ಕತ್ತೆಲೆಯನ್ನ ಓಡಿಸುವ ಹುಮ್ಮಸ್ಸು ಜಗತ್ತಿಗೆ..
ಜಗಜಗಮಿಸುವ ಸುತ್ತೆಲ್ಲದರ ಮಧ್ಯೆ ಮರೆಯುತ್ತದೆ...
ನಾನು ಎಂಬ ಅಹಂಕಾರ...
ಮಧ್ಯೆ ಇದೆ ದುಡ್ಡೆಂಬ ದೊಡ್ಡಣ್ಣ...
ಕುಣಿಯುತ್ತಾಳೆ ಕತ್ತಲ್ಲಲ್ಲಿ ಆಕೆ
ಮನಸ್ಸಿನ ದುಗುಡ ಕಳೆಯಲು...
ಕತ್ತಲನ್ನ ನಿವಾರಿಸಿ, ಹೊಸತನ್ನ ...
ಬೆಳೆಸುವ ಹಪಹಪಿ ಬೆಳಕಿನ ಪ್ರಪಂಚಕ್ಕೆ...
'ಕತ್ತಲಿಂದ ಬೆಳಕಿನವರೆಗೆ' ನಮ್ಮ ನೆಡೆ ..
ವಿದ್ಯೆ ಅದಕ್ಕೆ ಪೂರಕ...
ಕಳೆದು ಹೋಗುತ್ತಿದೆ ಕತ್ತಲು....
ಕತ್ತಲಲ್ಲಿ ಕಾಡುವ ಭಾವ, ಕನಸುಗಳೂ...
ಬೆಳಕಿಗೆ ಮಾತ್ರ ಸ್ಥಾನವಾದರೆ ...
ನಿರಾಳವಾಗುವ ಕತ್ತಲೇ ಇಲ್ಲವಾದರೆ...
ಮನುಷ್ಯ...ಮನುಷ್ಯತ್ವಗಳನ್ನ ಎಲ್ಲಿ ಹುಡುಕಲಿ...
ವರ್ಷಕ್ಕೊಮ್ಮೆ ಬರುವ ದೀಪಾವಳಿಯ
ಸಂಭ್ರಮಕ್ಕಾದರೂ ಕತ್ತಲನ್ನ ನಮ್ಮಲ್ಲಿ ಬೆಳೆಯಕೊಡಣವೇ????
ರಶ್ಮಿ ಕುಂದಾಪುರ
No comments:
Post a Comment