Tuesday, 20 November 2018

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ..
ಎದೆಯ ಕನಸು ಬತ್ತಿ ಹೋಗಿದೆ...
ಮನೆಯ ತುಂಬಾ ದೀಪಗಳ ಸಾಲು...
ದೀಪಾವಳಿಯ ಸಂಭ್ರಮ ಜಗಕ್ಕೆ
ನನ್ನ ಕಳೆದು ಕೊಂಡ ದುಃಖದ ಮೊಗೆ ಆಕೆಗೆ

ಬದುಕಿನ ದೀವಿಟಿಗೆ ದೀಪ ಹಚ್ಚುವುದ...
ಕಾಯಕದಲ್ಲೇ ಆಕೆಗೆ ಸಂಭ್ರಮ...
ಸುತ್ತೆಲ್ಲ ದೀಪ ಹಚ್ಚಿ... ಮನೆ ಬೆಳಗಿಸುವವರೇ...
ಆಕೆಗೆ ಕತ್ತಲೆಯಲ್ಲಾದರೂ ಹೊಸ ಕನಸು
ಕಾಣುವ ಹುಮ್ಮಸ್ಸು...
ಕತ್ತೆಲೆಯನ್ನ ಓಡಿಸುವ ಹುಮ್ಮಸ್ಸು ಜಗತ್ತಿಗೆ..
ಜಗಜಗಮಿಸುವ ಸುತ್ತೆಲ್ಲದರ ಮಧ್ಯೆ ಮರೆಯುತ್ತದೆ...
ನಾನು ಎಂಬ ಅಹಂಕಾರ...
ಮಧ್ಯೆ ಇದೆ ದುಡ್ಡೆಂಬ ದೊಡ್ಡಣ್ಣ...
ಕುಣಿಯುತ್ತಾಳೆ ಕತ್ತಲ್ಲಲ್ಲಿ ಆಕೆ
ಮನಸ್ಸಿನ ದುಗುಡ ಕಳೆಯಲು...
ಕತ್ತಲನ್ನ ನಿವಾರಿಸಿ, ಹೊಸತನ್ನ ...
ಬೆಳೆಸುವ ಹಪಹಪಿ ಬೆಳಕಿನ ಪ್ರಪಂಚಕ್ಕೆ...

'ಕತ್ತಲಿಂದ ಬೆಳಕಿನವರೆಗೆ' ನಮ್ಮ ನೆಡೆ ..
ವಿದ್ಯೆ ಅದಕ್ಕೆ ಪೂರಕ...
ಕಳೆದು ಹೋಗುತ್ತಿದೆ ಕತ್ತಲು....
ಕತ್ತಲಲ್ಲಿ ಕಾಡುವ ಭಾವ, ಕನಸುಗಳೂ...
ಬೆಳಕಿಗೆ ಮಾತ್ರ ಸ್ಥಾನವಾದರೆ ...
ನಿರಾಳವಾಗುವ ಕತ್ತಲೇ ಇಲ್ಲವಾದರೆ...
ಮನುಷ್ಯ...ಮನುಷ್ಯತ್ವಗಳನ್ನ ಎಲ್ಲಿ ಹುಡುಕಲಿ...
ವರ್ಷಕ್ಕೊಮ್ಮೆ ಬರುವ ದೀಪಾವಳಿಯ
ಸಂಭ್ರಮಕ್ಕಾದರೂ ಕತ್ತಲನ್ನ ನಮ್ಮಲ್ಲಿ ಬೆಳೆಯಕೊಡಣವೇ????

ರಶ್ಮಿ ಕುಂದಾಪುರ

Thursday, 1 November 2018

ಕನ್ನಡ ರಾಜ್ಯೋತ್ಸವ 2018 ಭಾಗ-೧

ಕನ್ನಡ ರಾಜ್ಯೋತ್ಸವದ ಆರಂಭದಲ್ಲೇ ಒಂದಷ್ಟು ಬರೀಬೇಕು ಅಂತ ಅನ್ನಿಸಿದ್ದು...
ಒಂದು ಪುಟ್ಟ ಕನ್ನಡದ ಹುಡುಗಿ ತನ್ನ ಅಪ್ಪ ಅಮ್ಮನೊಡನೆ ಇಂಗ್ಲಿಷ್ ನಲ್ಲೇ ವ್ಯವಹರಿಸಿದ್ದ ಕಂಡು...
ಕನ್ನಡದ್ದೇ ಕಂಪು ಅಂದುಕೊಂಡ ನನ್ನೂರಿನ ಇನ್ನೊಂದು 20 ವರ್ಷದ ಹುಡುಗಿ ಇವತ್ತು ಪೇಟೆಯವಳಾಗಿ, ಮನೆಯ ಒಳೆಗೆ ಇಂಗ್ಲಿಷ್ ತಂದ ಬಗೆಯನ್ನ ಕಂಡು...
ನಾನು ಕೆಲಸ ಮಾಡುವ ಕಡೆ ಕನ್ನಡದವರೇ ಅಂದುಕೊಂಡವರೂ, ಕನ್ನಡ ಹೆಮ್ಮೆ ಎಂದುಕೊಂಡವರೂ ಒಂದು ಪೂರ್ತ ವಾಕ್ಯವನ್ನ ಇಂಗ್ಲಿಷ್ ಇಲ್ಲದೆ ಮಾತನಾಡಲಾಗದೇ ಹೋದದ್ದನ್ನ ಕಂಡು....
ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕನ್ನಡ ಗುತ್ತಿಗೆ ಪಡೆದ ಕನ್ನಡ ಶಾಲೆ ಮಾಷ್ಟ್ರಗಳನ್ನ ಬಿಟ್ಟು ಬೇರಾರಿಗೂ ಒಂದಷ್ಟು ಹೊತ್ತು ಶುದ್ಧ ಕನ್ನಡ ಮಾತನಾಡಲಾಗದ್ದು ಕಂಡಾಗ‌...

ಬೇಸರವಾಗುತ್ತೆ.....ಮಣ್ಣಿನ ಸಂಸ್ಕೃತಿ ಉಳಿಯಬೆಕಾದರೆ ಮಣ್ಣಿನ ಭಾಷೆ ಉಳಿಯಬೇಕಲ್ಲ.. ಸಂಹನೆಯ ಮಾಧ್ಯಮವೇ ಬದಲಾದರೆ ಯೋಚಿಸುವ ಆಂತರ್ಯದಲ್ಲಿ ಕನ್ನಡತನ...ಮಣ್ಣಿನ ಸಂಸ್ಕೃತಿ ಉಳಿದೀತೇ?? ಯಾಕೆ ಉಳಿಸಬೇಕು?? ನಿಜ....ನಾನೇನು ಶುಧ್ಧ ಸಂಸ್ಕೃತಿ ಹರಿಕಾರಳಲ್ಲ... ಗೌರಮ್ಮನಂತೆ ಹಿಂದಿನದ್ದನ್ನೇಲ್ಲಾ ಪಾಲಿಸುತ್ತಾ ಸೀರೆ, ಭರತನಾಟ್ಯ ಸನಾತನ ಧರ್ಮ ಅಂತೆಲ್ಲ ಪಟ್ಟಾಗಿ ಪಾಲಿಸುವವಳಲ್ಲ... ಬದಲಾವಣೆ ನೆಲದ ಯಾವತ್ತೂ ಸತ್ಯ ಅಂತ ತಿಳಿದವಳು... ಆದರೆ, ಭಾಷೆಯ ಜೊತೆ ನಮ್ಮೊಳಗಿನ ನಮ್ಮತನವನ್ನ ಪೂರ್ತಿಯಾಗಿ ಮಾರಿಬಿಟ್ಟರೆ...ನಮ್ಮ ಮುಂದಿನ ಜನಾಂಗವಿಡೀ ಗೊಂದಲದಲ್ಲಿ ತಬ್ಬಲಿತನದಲ್ಲಿ...ತನ್ನನ್ನ ತಾನು ಕಳೆದುಕೊಂಡದ್ದರಲ್ಲಿ ಕಳೆಯುವುದಿಲ್ಲವೇ??? ಇದು ನನಗೆ ಸಂಕಟ ಉಂಟುಮಾಡುತ್ತದೆ... ಸಂಸ್ಕೃತಿ...ತನ್ನತನ ಇವೆಲ್ಲಾ ಮನುಷ್ಯನಿಗೆ ತಾನು ತನ್ನದು ಅನ್ನುವ ಸುಖ ಕೊಡುವುದಂತೂ ನಿಜ ತಾನೇ!!... ಅದೇ ಇಲ್ಲ ನಾವು ಯಡಬಿಡಂಗಿಗಳಾದೆವು ಎಂದರೆ ಮಕ್ಕಳು ನಾಳೆ ಅಸಾಯಕತೆಯಿಂದ...ತಳಮಳದಿಂದ ಇಡೀ ಜೀವನ ಕಳೆಯುವ ಪರಿಸ್ಥಿತಿಗೆ ನಾವೇ ದೂಡುತ್ತಿದ್ದೇವೆ ಎಂದೆಣಿಸುತ್ತಿಲ್ಲವೇ????
ಇನ್ನೂ ಬರೆಲಿದೆ... ಇದು trailor ಅಷ್ಟೇ....

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...