ಕನಸಿನ ನಂತರ ಇನ್ನು ನಾನು ಬದುಕಿನ ನೋಟದಿಂದ ಮಾತನಾಡಲು ಶರುವಿಟ್ಟು ಕೊಳ್ಳುವ ಅಂತ.... ಇದೀಗ ವಿವಾಹ ಕಾಲ... ಅದನ್ನೇ ಮಾತನಾಡೋಣವೇ
ಸರಳ ವಿವಾಹ ಅದ್ದೂರಿ ವಿವಾಹ...ಇದೆರಡೂ ಇವತ್ತಿನ fashion.... ಬುದ್ದಿಜೀವಿ ಅನ್ನಿಸಿಕೊಂಡವರದು ಸರಳ ವಿವಾಹ.. . ಸಮಾಜದ ಪ್ರಮುಖ ವ್ಯಕ್ತಿ ಅನ್ನಿಸಿಕೊಂಡವರದು ಅದ್ದೂರಿ ವಿವಾಹ...
ವಿವಾಹದ ಸಂಪ್ರದಾಯದಲ್ಲೇನಾದರೂ ಬದಲಾವಣೆ? ಊಹಂ.. ಎರಡೂ ಪದ್ದತಿ ಒಂದೇ, ಹೆಣ್ಣಿಗೆ ತಾಳಿ ಕಟ್ಟು, ಆಕೆಯನ್ನ ತನ್ನ ಒಡೆತನಕ್ಕೆ ಒಪ್ಪಿಸಿಕೋ.. ಮನುಷ್ಯನ ಒಡೆತನಕ್ಕೆ ಅಂತ ಇರುವುದು...ಮನೆ,ದುಡ್ಡು, ಹೆಂಡತಿ, ಮಕ್ಕಳು...
ಅಲ್ಲಾ ಒಡೆತನ ಹೊಂದುವಿಕೆ ಇವುಗಳಿಲ್ಲದೇ ಪ್ರೀತಿ, ಬದುಕು ಸಾಧ್ಯವಿಲ್ಲವೇ??.. ನಾನು ನೀವು ಎಲ್ಲಾ ಒಪ್ಪುತ್ತೇವೆ, ಪ್ರೀತಿಗೆ ಚೌಕಟ್ಟಿಲ್ಲ ಅಂತ, ಹಾಗೆಂದಮೇಲೆ ಅದಕ್ಕೆ ಒಡೆತನವೂ ಇರಬಾರದಲ್ಲ... ವಿವಾಹ ಅನ್ನೋದು ಪ್ರೀತಿಯೆಂಬ ಕನಸಿನ ತೇರು ತಾನೇ, ಇಲ್ಲೇಕೆ ಒಡೆತನ? ಇಲ್ಲೇಕೆ ತಾಳಿ?? ತಾನು ಒಡೆತನಕ್ಕೆ ಒಪ್ಪಿಸಲ್ಪಟ್ಟವಳು ಅನ್ನೋ ಕುರುಹು??ಕೈಯ ಹಿಡಿದು ಜೊತೆ ನಡೆಯುವ ಪ್ರೀತಿಗೆಂತಹ ಪ್ರಮಾಣ?
ಹಣೆಯ ಕುಂಕುಮ, ಕಾಲಂದುಗೆ,ಕತ್ತಿನ ಸರ... ಅಲಂಕಾರಕ್ಕಲ್ವೇ... ಕೃಷ್ಣ ಹಾಕಿ ನಡೆದಾಗ, ಓಡಿ ಬಂದ ಗೋಪಿಯರಿಗೆ, ಕೃಷ್ಣ ಮುಖ್ಯವಾದ ಅವನ ಅಂದ ಮೋಡಿ ಆಯಿತು.... ಅದೇ ರುಕ್ಮಿಣಿಯ ಹಣೆಯ ಕುಂಕುಮ, ಕಾಲಂದುಗೆ, ಕತ್ತಲ್ಲಿನ ತಾಳಿಗೆ ಕೃಷ್ಣನ ಒಡೆತನ ಯಾಕೆ??.. ಅವಳಂದಕ್ಕದು ಮೋಡಿ ಅನಿಸಬಾರದೇಕೆ??
ಪ್ರೀತಿಯ ಕನಸು, ವಿವಾಹದ ಬಂಧ..ಇಲ್ಲೆಲ್ಲ ಮನಸ್ಸು ಖಷಿ ಅನ್ನಿಸುವ ಒಬ್ಬರಿಗೊಬ್ಬರು ಅನ್ನೋ ಸಮಾನತೆಯ ಸಮನ್ವಯದ ಮಾತು..... ಜಗತ್ತಿಗೆ ಪರಿಚಯಿಸುವಾಗ ಹೆಣ್ಣಿಗೆ ಮಾತ್ರ ಒಡೆತನದ ಕುರುಹಗಳು.. ತಾಳಿ, ಕಾಲುಂಗುರ, ಹಣೆಯ ಕುಂಕುಮ...
ಬಂಧ..ಎಂದು ಬಂಧನವಾಯ್ತೋ ತಿಳಿಯಲಿಲ್ಲ. ಹೆಂಡತಿ ಒದೆಯಬೇಕಾಗಿರುವುದು ಹೊಸ್ತಿಲ ಸೇರಕ್ಕಿಯನ್ನಲ್ಲ: ಪರಂಪರೆ, ಸಂಪ್ರದಾಯಗಳ 'ಸುರಕ್ಷಿತ ಗುರಾಣಿ'ಯ ಹಿಂದಿರುವ ಪುರುಷಾಹಂಕಾರಕ್ಕೆ... ಒಡೆತನದ ಸಂಕುಚಿತೆಯ ಆಚೆಯೂ ಬದುಕಿದೆ..ಕನಸಿದೆ..
ಅಯ್ಯೋ ಈ ಸ್ತ್ರೀವಾದಿಗಳ ಗೋಳು ಅಂತ ಮೂಗು ಮುರಿಬೇಡಿ, ಎಡಪಂಥೀಯ ಅಂದುಕೊಂಡವರೆ ಒಮ್ಮೆ ನಿಮ್ಮೊಳಗೆ ಇಣುಕಿ ನೋಡಿ...ಪದ್ದತಿ ಏನಾದರೂ ಬದಲಾಯಿಸಿದ್ದೀರಾ??.. ಬುದ್ದಿಜೀವಿಗಳೇ... ವಿವಾಹ ಪದ್ದತಿಗಳಿಗೆ ಕಾರಣ ಕೊಡುವುದರ ಬಿಟ್ಟು ಬೇರೇನಾದರೂ ನಡೆದಿದೆಯಾ??.ಪ್ರತಿಷ್ಟರೇ... ಹೊಸತನ ಸಂಪ್ರದಾಯದಲ್ಲಿ ಬರಬೇಕು.. ತೋರಣಗಳಲ್ಲ...
ಜಾತಿ ಮತಗಳ ಕಟ್ಟೆ ಒಡೆದು ನಡೆವ ನಾವು ಒಡೆತನದ ಬಂಧನವನ್ನೂ ಒಡೆದು ನಡೆಯಬೇಕಲ್ಲವೇ??
ಸರಳ ವಿವಾಹ ಅದ್ದೂರಿ ವಿವಾಹ...ಇದೆರಡೂ ಇವತ್ತಿನ fashion.... ಬುದ್ದಿಜೀವಿ ಅನ್ನಿಸಿಕೊಂಡವರದು ಸರಳ ವಿವಾಹ.. . ಸಮಾಜದ ಪ್ರಮುಖ ವ್ಯಕ್ತಿ ಅನ್ನಿಸಿಕೊಂಡವರದು ಅದ್ದೂರಿ ವಿವಾಹ...
ವಿವಾಹದ ಸಂಪ್ರದಾಯದಲ್ಲೇನಾದರೂ ಬದಲಾವಣೆ? ಊಹಂ.. ಎರಡೂ ಪದ್ದತಿ ಒಂದೇ, ಹೆಣ್ಣಿಗೆ ತಾಳಿ ಕಟ್ಟು, ಆಕೆಯನ್ನ ತನ್ನ ಒಡೆತನಕ್ಕೆ ಒಪ್ಪಿಸಿಕೋ.. ಮನುಷ್ಯನ ಒಡೆತನಕ್ಕೆ ಅಂತ ಇರುವುದು...ಮನೆ,ದುಡ್ಡು, ಹೆಂಡತಿ, ಮಕ್ಕಳು...
ಅಲ್ಲಾ ಒಡೆತನ ಹೊಂದುವಿಕೆ ಇವುಗಳಿಲ್ಲದೇ ಪ್ರೀತಿ, ಬದುಕು ಸಾಧ್ಯವಿಲ್ಲವೇ??.. ನಾನು ನೀವು ಎಲ್ಲಾ ಒಪ್ಪುತ್ತೇವೆ, ಪ್ರೀತಿಗೆ ಚೌಕಟ್ಟಿಲ್ಲ ಅಂತ, ಹಾಗೆಂದಮೇಲೆ ಅದಕ್ಕೆ ಒಡೆತನವೂ ಇರಬಾರದಲ್ಲ... ವಿವಾಹ ಅನ್ನೋದು ಪ್ರೀತಿಯೆಂಬ ಕನಸಿನ ತೇರು ತಾನೇ, ಇಲ್ಲೇಕೆ ಒಡೆತನ? ಇಲ್ಲೇಕೆ ತಾಳಿ?? ತಾನು ಒಡೆತನಕ್ಕೆ ಒಪ್ಪಿಸಲ್ಪಟ್ಟವಳು ಅನ್ನೋ ಕುರುಹು??ಕೈಯ ಹಿಡಿದು ಜೊತೆ ನಡೆಯುವ ಪ್ರೀತಿಗೆಂತಹ ಪ್ರಮಾಣ?
ಹಣೆಯ ಕುಂಕುಮ, ಕಾಲಂದುಗೆ,ಕತ್ತಿನ ಸರ... ಅಲಂಕಾರಕ್ಕಲ್ವೇ... ಕೃಷ್ಣ ಹಾಕಿ ನಡೆದಾಗ, ಓಡಿ ಬಂದ ಗೋಪಿಯರಿಗೆ, ಕೃಷ್ಣ ಮುಖ್ಯವಾದ ಅವನ ಅಂದ ಮೋಡಿ ಆಯಿತು.... ಅದೇ ರುಕ್ಮಿಣಿಯ ಹಣೆಯ ಕುಂಕುಮ, ಕಾಲಂದುಗೆ, ಕತ್ತಲ್ಲಿನ ತಾಳಿಗೆ ಕೃಷ್ಣನ ಒಡೆತನ ಯಾಕೆ??.. ಅವಳಂದಕ್ಕದು ಮೋಡಿ ಅನಿಸಬಾರದೇಕೆ??
ಪ್ರೀತಿಯ ಕನಸು, ವಿವಾಹದ ಬಂಧ..ಇಲ್ಲೆಲ್ಲ ಮನಸ್ಸು ಖಷಿ ಅನ್ನಿಸುವ ಒಬ್ಬರಿಗೊಬ್ಬರು ಅನ್ನೋ ಸಮಾನತೆಯ ಸಮನ್ವಯದ ಮಾತು..... ಜಗತ್ತಿಗೆ ಪರಿಚಯಿಸುವಾಗ ಹೆಣ್ಣಿಗೆ ಮಾತ್ರ ಒಡೆತನದ ಕುರುಹಗಳು.. ತಾಳಿ, ಕಾಲುಂಗುರ, ಹಣೆಯ ಕುಂಕುಮ...
ಬಂಧ..ಎಂದು ಬಂಧನವಾಯ್ತೋ ತಿಳಿಯಲಿಲ್ಲ. ಹೆಂಡತಿ ಒದೆಯಬೇಕಾಗಿರುವುದು ಹೊಸ್ತಿಲ ಸೇರಕ್ಕಿಯನ್ನಲ್ಲ: ಪರಂಪರೆ, ಸಂಪ್ರದಾಯಗಳ 'ಸುರಕ್ಷಿತ ಗುರಾಣಿ'ಯ ಹಿಂದಿರುವ ಪುರುಷಾಹಂಕಾರಕ್ಕೆ... ಒಡೆತನದ ಸಂಕುಚಿತೆಯ ಆಚೆಯೂ ಬದುಕಿದೆ..ಕನಸಿದೆ..
ಅಯ್ಯೋ ಈ ಸ್ತ್ರೀವಾದಿಗಳ ಗೋಳು ಅಂತ ಮೂಗು ಮುರಿಬೇಡಿ, ಎಡಪಂಥೀಯ ಅಂದುಕೊಂಡವರೆ ಒಮ್ಮೆ ನಿಮ್ಮೊಳಗೆ ಇಣುಕಿ ನೋಡಿ...ಪದ್ದತಿ ಏನಾದರೂ ಬದಲಾಯಿಸಿದ್ದೀರಾ??.. ಬುದ್ದಿಜೀವಿಗಳೇ... ವಿವಾಹ ಪದ್ದತಿಗಳಿಗೆ ಕಾರಣ ಕೊಡುವುದರ ಬಿಟ್ಟು ಬೇರೇನಾದರೂ ನಡೆದಿದೆಯಾ??.ಪ್ರತಿಷ್ಟರೇ... ಹೊಸತನ ಸಂಪ್ರದಾಯದಲ್ಲಿ ಬರಬೇಕು.. ತೋರಣಗಳಲ್ಲ...
ಜಾತಿ ಮತಗಳ ಕಟ್ಟೆ ಒಡೆದು ನಡೆವ ನಾವು ಒಡೆತನದ ಬಂಧನವನ್ನೂ ಒಡೆದು ನಡೆಯಬೇಕಲ್ಲವೇ??
No comments:
Post a Comment