ಇಂದೂ ದೀಪಾವಳಿಗೆ... ಭಾಷ್ಯ ಬರೆಯಹೊರಟ್ಟದ್ದೇ ಕವಿತೆಯಾದಾಗ.....
ಶಿವರಾಮಕೃಷ್ಣ ನಾನು ....ಬೆಳಕು ಮಾತ್ರ ಕಂಡೆನಾದರೆ ಬೆಳಕು ನನ್ನದಾಗುವುದೋ ಗಂಡಿನ ಮಾತು
ಬೆಳಕಿಗೆ ಹೆಸರಿಲ್ಲ... ಅದು ಯಾರದ್ದೂ ಆಗಬಹುದು.. ನನ್ನದು ಎಂಬ ಮೀಸಲು ಕೇಳಲು ನೀನ್ಯಾರು ರಾಮ??..ಈಕೆಯೋ ಕಾಡ ಹೆಣ್ಣು, ಕೈಅಂಚಿಗೆ ಸಿಗದ ಜಿಂಕೆ
ಅದು ಬರಿ ಬೆಳಗಲ್ಲೋ ಹೆಣ್ಣೇ... ಕಾಡುವ ಕನಸ ಬೆಳಗು.. ನನ್ನದಾಗಬಾರದೆಂಬ ಹಠ ನಿನಗ್ಯಾಕೋ ಅನ್ನುತ್ತಾನೆ ಆತ ಸುಸಂಸ್ಕೃತ...
ಬೆಳಕಿನೊಳಗೇ ಬದುಕು ಕಟ್ಟಿಕೊಂಡ ನಿನ್ನ ತಪ್ಪಿಗೆ ನಾನ್ಯಾಕೆ ನಲುಗಲಿ... ನನಗೆ ಬೂದಿಯಲ್ಲೂ ಕತ್ತಲಲ್ಲೂ ಬದುಕಿದೆ.... ಕಠಿಣತೆಗೆ ಇನ್ನೊಂದು ಹೆಸರು ಕಾಳಿ... ಅದು ಆಕೆ..
ನೀನು ಬೆಳಗನ್ನು ನನ್ನಲ್ಲೇ ಬಿಟ್ಟು ಕತ್ತಲೆಯ ದಾರಿ ಹಿಡಿದಿರುವೆ
ನೀನು ಈಗ ಬದುಕ್ಕುತ್ತೇನೆ ಎಂದು ಕೊಂಡಿರುವುದು ನನ್ನನ್ನೇ ಸುಟ್ಟ ನಿನ್ನ ಬೆಳಕಿನ ಬೂದಿಯಲ್ಲಿ
ನಿನ್ನ ಬೆಳಕು ನನ್ನ ಸಂಪೂರ್ಣ ಭಸ್ಮವಾಗಿಸುವ ಮುನ್ನ ತಂಪೆರೆಯ ಬಾ ...
ಕತ್ತಲೆ ದಾರಿ ದೂರ.... ಹೋಗಬೇಡ ಅಲ್ಲಿಗೆ ತಿರುಗಿದರೆ ಕಾಣುವುದು ನನ್ನ ಕೈ ಚಾಚುವಿಕೆ... ಅಲ್ಲಿದ್ದದ್ದು ಗಂಡಸಿನ ಅಹಂ ಅಲ್ಲ.. ಜಗತ್ತನ್ನ ಜಗದೊಡತಿಯನ್ನ ಪ್ರೀತಿಸುವ ಪರಿ...
ಬೆಳಕು ಕರಕಲಾಗಿಸುವ ಶಿವನು ನನ್ನ ಸದಾ ಕಾಯುವಂತೆ ಮಾಡಿದ ರಾಮ ನೀನಲ್ಲವೇ..
ಶಿವನು ನನ್ನೊಳಗೆ ಹೊಕ್ಕು ಮೂರನೆಯ ಕಣ್ಣಿನ ಬೆಳಕ ಹೊರಹೊಮ್ಮಿಸಿದರೆ..
ಗೊತ್ತು ನೀನು ಭಸ್ಮ ಎಂದು..ಆದರೆ ತಂಪೆರೆಯಲು..ನಾನೆಲ್ಲಿಂದ ಹುಟ್ಟಲಿ..
ಗಂಗೆ ನಡೆದಾಯ್ತು ಭುವಿಗೆ..
ಓಡಿ ಹೋದ ಕೃಷ್ಣ ಬರಲಿ ತಾಳು..
ಅವನ ತಂಪು ನನ್ನ ಜೀವಿತದ ಜೊತೆ ನಿನ್ನ ಭಸ್ಮವ ತಂಪರೆದೀತು..
ರಾಮಾsssss... ಮೂರನೆಯ ಕಣ್ಣಿನ ಬೆಳಕ ಹೊತಸೂಸುವ ಶಿವ ಹೊಕ್ಕ ಮನೆ ಸ್ಮಶಾನ...
ಆದರೆ ಅಲ್ಲೂ ಬದುಕಿದೆ... ಈಕೆ ಕಾಡ ಹೆಣ್ಣಲ್ಲ.. ಹಠದ ಕಾಳಿಯೂ ಅಲ್ಲ, ಅದಕ್ಕೂ ಮೀರಿ ಜಗದೋದ್ಧಾರಕನ ಪಡೆದ ತಾಯಿ ಈಗ...
ದೀಪದ ಸುತ್ತಲೇ ಕತ್ತಲು ..
ನಿನ್ನ ನೀನರಿಯದೆ ರಾಮ , ಕೃಷ್ಣ , ಗಂಗೆಯರ ಸುತ್ತ ಬದುಕ ಕಟ್ಟಬೇಡ ಹೆಣ್ಣೇ
ನಿನ್ನ ಸ್ಪೂರ್ತಿಯ ಛಾಯೆ ವಿಸ್ತರಿಸೆ
ನಿನಗ್ಯಾರು ಸಾಟಿ
ವಿಶ್ವವೇ ಎದ್ದು ನರ್ತಿಸೀತು ನಿನ್ನ ಮುಂದೆ... ಆತ ವಿಶ್ವ ಮಾನವ...ಜಗದ ಜವಾಬ್ದಾರಿ ಹೊತ್ತ ದೇವರಲ್ಲ ಬದಲಿಗೆ ತಾಯಿಯ ಒಡಲಿನಿಂದ ಹೊರಬರಲಾರದ ಕನಸಿನ ಒಡೆಯ...
ದೀಪವಲ್ಲ ರಾಮ..
ನಾನು ಬೆಳಕು...ದೀಪ ತರುವ ಬೆಳಕು
ನಿನ್ನ ಅಯೋಧ್ಯೆಯ ಬೆಳಗುವ ಬೆಳಕು...
ನನಗಿಲ್ಲ ಛಾಯೆ...
ಪ್ರಕರತೆ ಮಾತ್ರ ನನ್ನ ಸತ್ಯ...
ರಾಮನಿಲ್ಲದೆ ಅಯೋಧ್ಯೆಯಲ್ಲಿ ದಿಪವಿಲ್ಲ ಬೆಳಕೂ ಇಲ್ಲ...
ಶಿವನಿಲ್ಲದ ಸ್ಮಶಾನಕ್ಕೆ ದಿವ್ಯ ಮೌನ...
ಕೃಷ್ಣನಂತಹ ಕಚಕುಳಿ ಇಲ್ಲದೆ ನನ್ನ ನಗುವಾದರೂ ಚಲ್ಲೀತೆ???
ಬೆಳಕಿಗೆ ಬೇಕು ನೀವೆಲ್ಲಾ...
ನೀವು ನನ್ನವರಾದಾಗ ವಿಶ್ವಮಾನ್ಯೆ ನಾನು.... ಕಾಡ ಹೆಣ್ಣಾದರೂ, ತಾಯಿ..ಅದಕ್ಕೂ ಮಿಗಿಲಾಗಿ ಹೆಣ್ಣಾಕೆ.. ಗಂಡಸನ್ನ ದ್ವೇಶಿಸಲು ಸಾಧ್ಯವೇ... ಸಿಟ್ಟಾಕೆಗೆ ಅಷ್ಟೇ...
ಗುಟ್ಟೊಂದ ಹೇಳುವೆ ಕೇಳು
ನನ್ನೊಳಗಿನ ರಾಮ ಕಾಣೆಯಾದದ್ದು
ಸೀತೆಯ ಬೂದಿಯಲ್ಲಿ
ನೀನೋ ಶಿವನ ಮೂರನೆ ಕಣ್ಣಿನ ಗೆಳತಿ
ಭಸ್ಮವಾಗದಿದ್ದೀತೆ ಅದಕ್ಕೂ
ಕೃಷ್ಣನ ಚಾಳಿ
ಕೊನೆಗೂ ಹರಿದಿದ್ದೇ ನೀನು
ಬೆಳಕಿನ ಗಂಗೆಯಾಗಿ
ದಟ್ಟ ಕಾನನದಲ್ಲೆಲ್ಲಾ
ಎಲ್ಲೆಲ್ಲೂ ಹಸಿರಿನ ಸ್ಪರ್ಶ
ಹೊಸ ಚಿಗುರು...
ಕವಿಯಾದ ಗಂಡಿಗೆ ಹೆಣ್ಣು ಸ್ಪರ್ತಿಯ ಜೊತೆಗೆ ಆಪ್ತಳೂ ಹೌದು.. ಹೆಣ್ಣಿಲ್ಲದ ವ್ಯಕ್ತಿ ಕವಿಯಾದನೇ????...ಕವಿ ಆತ
ಕೃಷ್ಣ ನನ್ನಲ್ಲಿ ಲೀನಾವಾದಾರೆ
ಶಿವನ ಮೂರನೆಯ ಕಣ್ಣೂ ಮುಚ್ಚಿತು..
ನಾನಾಗುವೆ ಆಗ ಹೊಸ ಚಿಗುರು..
ಕೃಷ್ಣ ನನ್ನೊಳಗಿನ ಲವಲವಿಕೆ ಆದಾಗ...
ಬೂದಿಯಾದ ರಾಮನ ಕನಸಿಗೇ ಹೊಸ ಬೆಳಕು ನಾನು
ಬೆಳಕಿನ ಗಂಗೆ ...ಶಿವನ ಗಂಗೆಯಾದಾಗ...
ಸ್ಮಶಾನದಲ್ಲೂ ಹೊಸ ಜೀವ..
ಇನ್ನು ಸಾವಿಲ್ಲ...ಬದುಕಿಗಿದೆ ಗಂಗೆಯ ಸುರಪಾನ....
ಬರುತ್ತಿದೆ ಹೊಸ ದೀಪಾವಳಿ.... ಆಕೆಗೆ ದೀಪಾವಳಿಯ ಕನಸು...
ಗಂಡಿನ ಜೊತೆಗಿನ ಕನಸು ಹೊಸತನದ ಬಿಸುಪು ಇವಿಲ್ಲದೆ ಹೆಣ್ಣು ಹೆಣ್ಣದಾಳೇ...ಸಿಟ್ಟಾದ ಹೆಣ್ಣೂ ಗಂಡಿನ ಪ್ರೀತಿಗೇ ಕರಗುವುದು...
ಸೂಚನೆ- ನನ್ನ "ಇಂದೂ ದೀಪಾವಳಿ", ಮೆಚ್ಚಿ..ಉಪಸಂಹಾರದ ಮಾತು ಮುಂದುವರೆಸಿದ್ದು...ನನ್ನ ಆತ್ಮೀಯ ಶಿಕ್ಷಕರಾದ..ನನ್ನ ಕನ್ಬಡ ಪ್ರೀತಿಗೆ ಗುರುಗಳಾದ ಮೋಹನ್ ಭಂಕೇಶ್ವರರು.. ಅವರು ಸಂವೇದನೆಯ ಗಂಡಾಗಿ ಬರೆದಾಗ... ಉಚ್ಚತನದ ಹಂಬಲದಲ್ಲಿ.. ಕಾಡುವ ಹೆಣ್ಣಾಗಿದ್ದು ನನ್ನ ಸೌಭಾಗ್ಯ..
ಇದು ಮೋಹನ್ ಭಂಕೇಶ್ವರರು ಮತ್ತು ರಶ್ಮಿ ಕುಂದಾಪುರರ ಉಪಸಂಹಾರ.. ಇಂದೂ ದೀಪಾವಳಿ ಕವಿತೆಗೆ...
ಶಿವರಾಮಕೃಷ್ಣ ನಾನು ....ಬೆಳಕು ಮಾತ್ರ ಕಂಡೆನಾದರೆ ಬೆಳಕು ನನ್ನದಾಗುವುದೋ ಗಂಡಿನ ಮಾತು
ಬೆಳಕಿಗೆ ಹೆಸರಿಲ್ಲ... ಅದು ಯಾರದ್ದೂ ಆಗಬಹುದು.. ನನ್ನದು ಎಂಬ ಮೀಸಲು ಕೇಳಲು ನೀನ್ಯಾರು ರಾಮ??..ಈಕೆಯೋ ಕಾಡ ಹೆಣ್ಣು, ಕೈಅಂಚಿಗೆ ಸಿಗದ ಜಿಂಕೆ
ಅದು ಬರಿ ಬೆಳಗಲ್ಲೋ ಹೆಣ್ಣೇ... ಕಾಡುವ ಕನಸ ಬೆಳಗು.. ನನ್ನದಾಗಬಾರದೆಂಬ ಹಠ ನಿನಗ್ಯಾಕೋ ಅನ್ನುತ್ತಾನೆ ಆತ ಸುಸಂಸ್ಕೃತ...
ಬೆಳಕಿನೊಳಗೇ ಬದುಕು ಕಟ್ಟಿಕೊಂಡ ನಿನ್ನ ತಪ್ಪಿಗೆ ನಾನ್ಯಾಕೆ ನಲುಗಲಿ... ನನಗೆ ಬೂದಿಯಲ್ಲೂ ಕತ್ತಲಲ್ಲೂ ಬದುಕಿದೆ.... ಕಠಿಣತೆಗೆ ಇನ್ನೊಂದು ಹೆಸರು ಕಾಳಿ... ಅದು ಆಕೆ..
ನೀನು ಬೆಳಗನ್ನು ನನ್ನಲ್ಲೇ ಬಿಟ್ಟು ಕತ್ತಲೆಯ ದಾರಿ ಹಿಡಿದಿರುವೆ
ನೀನು ಈಗ ಬದುಕ್ಕುತ್ತೇನೆ ಎಂದು ಕೊಂಡಿರುವುದು ನನ್ನನ್ನೇ ಸುಟ್ಟ ನಿನ್ನ ಬೆಳಕಿನ ಬೂದಿಯಲ್ಲಿ
ನಿನ್ನ ಬೆಳಕು ನನ್ನ ಸಂಪೂರ್ಣ ಭಸ್ಮವಾಗಿಸುವ ಮುನ್ನ ತಂಪೆರೆಯ ಬಾ ...
ಕತ್ತಲೆ ದಾರಿ ದೂರ.... ಹೋಗಬೇಡ ಅಲ್ಲಿಗೆ ತಿರುಗಿದರೆ ಕಾಣುವುದು ನನ್ನ ಕೈ ಚಾಚುವಿಕೆ... ಅಲ್ಲಿದ್ದದ್ದು ಗಂಡಸಿನ ಅಹಂ ಅಲ್ಲ.. ಜಗತ್ತನ್ನ ಜಗದೊಡತಿಯನ್ನ ಪ್ರೀತಿಸುವ ಪರಿ...
ಬೆಳಕು ಕರಕಲಾಗಿಸುವ ಶಿವನು ನನ್ನ ಸದಾ ಕಾಯುವಂತೆ ಮಾಡಿದ ರಾಮ ನೀನಲ್ಲವೇ..
ಶಿವನು ನನ್ನೊಳಗೆ ಹೊಕ್ಕು ಮೂರನೆಯ ಕಣ್ಣಿನ ಬೆಳಕ ಹೊರಹೊಮ್ಮಿಸಿದರೆ..
ಗೊತ್ತು ನೀನು ಭಸ್ಮ ಎಂದು..ಆದರೆ ತಂಪೆರೆಯಲು..ನಾನೆಲ್ಲಿಂದ ಹುಟ್ಟಲಿ..
ಗಂಗೆ ನಡೆದಾಯ್ತು ಭುವಿಗೆ..
ಓಡಿ ಹೋದ ಕೃಷ್ಣ ಬರಲಿ ತಾಳು..
ಅವನ ತಂಪು ನನ್ನ ಜೀವಿತದ ಜೊತೆ ನಿನ್ನ ಭಸ್ಮವ ತಂಪರೆದೀತು..
ರಾಮಾsssss... ಮೂರನೆಯ ಕಣ್ಣಿನ ಬೆಳಕ ಹೊತಸೂಸುವ ಶಿವ ಹೊಕ್ಕ ಮನೆ ಸ್ಮಶಾನ...
ಆದರೆ ಅಲ್ಲೂ ಬದುಕಿದೆ... ಈಕೆ ಕಾಡ ಹೆಣ್ಣಲ್ಲ.. ಹಠದ ಕಾಳಿಯೂ ಅಲ್ಲ, ಅದಕ್ಕೂ ಮೀರಿ ಜಗದೋದ್ಧಾರಕನ ಪಡೆದ ತಾಯಿ ಈಗ...
ದೀಪದ ಸುತ್ತಲೇ ಕತ್ತಲು ..
ನಿನ್ನ ನೀನರಿಯದೆ ರಾಮ , ಕೃಷ್ಣ , ಗಂಗೆಯರ ಸುತ್ತ ಬದುಕ ಕಟ್ಟಬೇಡ ಹೆಣ್ಣೇ
ನಿನ್ನ ಸ್ಪೂರ್ತಿಯ ಛಾಯೆ ವಿಸ್ತರಿಸೆ
ನಿನಗ್ಯಾರು ಸಾಟಿ
ವಿಶ್ವವೇ ಎದ್ದು ನರ್ತಿಸೀತು ನಿನ್ನ ಮುಂದೆ... ಆತ ವಿಶ್ವ ಮಾನವ...ಜಗದ ಜವಾಬ್ದಾರಿ ಹೊತ್ತ ದೇವರಲ್ಲ ಬದಲಿಗೆ ತಾಯಿಯ ಒಡಲಿನಿಂದ ಹೊರಬರಲಾರದ ಕನಸಿನ ಒಡೆಯ...
ದೀಪವಲ್ಲ ರಾಮ..
ನಾನು ಬೆಳಕು...ದೀಪ ತರುವ ಬೆಳಕು
ನಿನ್ನ ಅಯೋಧ್ಯೆಯ ಬೆಳಗುವ ಬೆಳಕು...
ನನಗಿಲ್ಲ ಛಾಯೆ...
ಪ್ರಕರತೆ ಮಾತ್ರ ನನ್ನ ಸತ್ಯ...
ರಾಮನಿಲ್ಲದೆ ಅಯೋಧ್ಯೆಯಲ್ಲಿ ದಿಪವಿಲ್ಲ ಬೆಳಕೂ ಇಲ್ಲ...
ಶಿವನಿಲ್ಲದ ಸ್ಮಶಾನಕ್ಕೆ ದಿವ್ಯ ಮೌನ...
ಕೃಷ್ಣನಂತಹ ಕಚಕುಳಿ ಇಲ್ಲದೆ ನನ್ನ ನಗುವಾದರೂ ಚಲ್ಲೀತೆ???
ಬೆಳಕಿಗೆ ಬೇಕು ನೀವೆಲ್ಲಾ...
ನೀವು ನನ್ನವರಾದಾಗ ವಿಶ್ವಮಾನ್ಯೆ ನಾನು.... ಕಾಡ ಹೆಣ್ಣಾದರೂ, ತಾಯಿ..ಅದಕ್ಕೂ ಮಿಗಿಲಾಗಿ ಹೆಣ್ಣಾಕೆ.. ಗಂಡಸನ್ನ ದ್ವೇಶಿಸಲು ಸಾಧ್ಯವೇ... ಸಿಟ್ಟಾಕೆಗೆ ಅಷ್ಟೇ...
ಗುಟ್ಟೊಂದ ಹೇಳುವೆ ಕೇಳು
ನನ್ನೊಳಗಿನ ರಾಮ ಕಾಣೆಯಾದದ್ದು
ಸೀತೆಯ ಬೂದಿಯಲ್ಲಿ
ನೀನೋ ಶಿವನ ಮೂರನೆ ಕಣ್ಣಿನ ಗೆಳತಿ
ಭಸ್ಮವಾಗದಿದ್ದೀತೆ ಅದಕ್ಕೂ
ಕೃಷ್ಣನ ಚಾಳಿ
ಕೊನೆಗೂ ಹರಿದಿದ್ದೇ ನೀನು
ಬೆಳಕಿನ ಗಂಗೆಯಾಗಿ
ದಟ್ಟ ಕಾನನದಲ್ಲೆಲ್ಲಾ
ಎಲ್ಲೆಲ್ಲೂ ಹಸಿರಿನ ಸ್ಪರ್ಶ
ಹೊಸ ಚಿಗುರು...
ಕವಿಯಾದ ಗಂಡಿಗೆ ಹೆಣ್ಣು ಸ್ಪರ್ತಿಯ ಜೊತೆಗೆ ಆಪ್ತಳೂ ಹೌದು.. ಹೆಣ್ಣಿಲ್ಲದ ವ್ಯಕ್ತಿ ಕವಿಯಾದನೇ????...ಕವಿ ಆತ
ಕೃಷ್ಣ ನನ್ನಲ್ಲಿ ಲೀನಾವಾದಾರೆ
ಶಿವನ ಮೂರನೆಯ ಕಣ್ಣೂ ಮುಚ್ಚಿತು..
ನಾನಾಗುವೆ ಆಗ ಹೊಸ ಚಿಗುರು..
ಕೃಷ್ಣ ನನ್ನೊಳಗಿನ ಲವಲವಿಕೆ ಆದಾಗ...
ಬೂದಿಯಾದ ರಾಮನ ಕನಸಿಗೇ ಹೊಸ ಬೆಳಕು ನಾನು
ಬೆಳಕಿನ ಗಂಗೆ ...ಶಿವನ ಗಂಗೆಯಾದಾಗ...
ಸ್ಮಶಾನದಲ್ಲೂ ಹೊಸ ಜೀವ..
ಇನ್ನು ಸಾವಿಲ್ಲ...ಬದುಕಿಗಿದೆ ಗಂಗೆಯ ಸುರಪಾನ....
ಬರುತ್ತಿದೆ ಹೊಸ ದೀಪಾವಳಿ.... ಆಕೆಗೆ ದೀಪಾವಳಿಯ ಕನಸು...
ಗಂಡಿನ ಜೊತೆಗಿನ ಕನಸು ಹೊಸತನದ ಬಿಸುಪು ಇವಿಲ್ಲದೆ ಹೆಣ್ಣು ಹೆಣ್ಣದಾಳೇ...ಸಿಟ್ಟಾದ ಹೆಣ್ಣೂ ಗಂಡಿನ ಪ್ರೀತಿಗೇ ಕರಗುವುದು...
ಸೂಚನೆ- ನನ್ನ "ಇಂದೂ ದೀಪಾವಳಿ", ಮೆಚ್ಚಿ..ಉಪಸಂಹಾರದ ಮಾತು ಮುಂದುವರೆಸಿದ್ದು...ನನ್ನ ಆತ್ಮೀಯ ಶಿಕ್ಷಕರಾದ..ನನ್ನ ಕನ್ಬಡ ಪ್ರೀತಿಗೆ ಗುರುಗಳಾದ ಮೋಹನ್ ಭಂಕೇಶ್ವರರು.. ಅವರು ಸಂವೇದನೆಯ ಗಂಡಾಗಿ ಬರೆದಾಗ... ಉಚ್ಚತನದ ಹಂಬಲದಲ್ಲಿ.. ಕಾಡುವ ಹೆಣ್ಣಾಗಿದ್ದು ನನ್ನ ಸೌಭಾಗ್ಯ..
ಇದು ಮೋಹನ್ ಭಂಕೇಶ್ವರರು ಮತ್ತು ರಶ್ಮಿ ಕುಂದಾಪುರರ ಉಪಸಂಹಾರ.. ಇಂದೂ ದೀಪಾವಳಿ ಕವಿತೆಗೆ...
No comments:
Post a Comment