Sunday, 29 October 2017

Gandhi a gunginalli -3 (ಗಾಂಧಿಯ ಗುಂಗಿನಲ್ಲಿ-೩)

ವಾರ್ದಾದ ಆಶ್ರಮದ ಸುತ್ತೆಲ್ಲ ತಿರುಗುವಾಗ ಹೆಮ್ಮೆಯಾಗುತ್ತಿತ್ತು...ಇದೂ ನಮ್ಮ ದೇಶದ ಸಂಸ್ಕೃತಿಯ ಅಂಗ ಅಂತ... ಇನ್ನೂ ಇಪತ್ತು ವರ್ಷದ ಹುಡುಗಿ ಆಕೆ ಸವಿಸ್ತಾರವಾಗಿ ಗಾಂಧಿಯನ್ನ ವಿವರಿಸುತ್ತಾಳೆ.... ಕಣ್ಣಲ್ಲಿ ಮಿನುಗುವ ಹೆಮ್ಮೆ.. ಸ್ವರದಲ್ಲಿ ಆತ್ಮೀಯತೆ... ಗಂಟಲುಬ್ಬಿ ಬರುತ್ತದೆ ಆಕೆಗೆ.. ನನಗೋ ಆಶ್ಚರ್ಯ ಗಾಂಧಿಯ ಬಗ್ಗೆ ಆಕೆಗೇಕೆ ಅಕ್ಕರೆ??? ತಾನೆಂದೂ ಕಾಣದ ವ್ಯಕ್ತಿ ವ್ಯವಸ್ಥೆ ಬಗ್ಗೆ ಇಷ್ಟೊಂದು ಸಂವೇದನೆ?? ಅದು ಅರ್ಥ ಆದವಳಂತೆ ಅಂದಳು ಅವಳು... ಇಲ್ಲೇ ಹುಟ್ಟಿ ಆಡಿದ ನನಗೆ ಗಾಂಧಿ ಮನಸ್ಸು ತುಂಬಾ ಎಂದಳು... ನಿಜ ಆಶ್ರಮದಲ್ಲಿ ಗಾಂಧಿ ಪ್ರತಿ ಉಸಿರಿನಲ್ಲಿದ್ದಾರೇನೋ ಅನ್ನುವಷ್ಟು ಶಾಂತತೆ, ಸರಳತೆ... ಅದು ನಿಜವೆನೆಸಿದ್ದು...ಅಲ್ಲೆಲ್ಲಾ ನಡೆದಾಡುವಾಗ... ಕಾಡಿದ್ದು ಮನುಷ್ಯ ಸಹಜವಾದ ಲೋಭಗಳಿಂದ ಸ್ವಯಂ ಪರಿಕಲ್ಪನೆಯಲ್ಲಿ ತಡೆಗಟ್ಟಬೇಕಾದರ ವ್ಯಕ್ಕಿಗಿರಬಹುದಾದ .... ಸ್ವಂತಿಕೆ, ಹಾಗೆಯೇ ಬದ್ದತೆ...
   ಗಾಂಧಿಯಲ್ಲಿ ಕೆಲವೊಮ್ಮೆ ಕಾಣಿಸುವುದು ಬರೀ ಜಿದ್ದು... ಸಾಧಿಸಬೇಕೆಂಬ ಜಿದ್ದು. ನಿಜ ಕೆಲೊಮ್ಮೆ ಅತೀ ಅನಿಸುವ ಈ ಜಿದ್ದು ಸ್ವಂತದ್ದೇನೋ ಅನ್ನಿಸಿ ಬಹಳ ಜನ ಕಟುವಾಗಿ ಟೀಕಿಸುತ್ತಾರೆ.. ಆದರೆ ಇದೇ ಜಿದ್ದನಿಂದಲ್ಲವೇ ದಂಡಿ ನಡುಗೆ ಆದದ್ದು... ಆ ಸಮಯದಲ್ಲಿ ಬ್ರಿಷರಿಗೆ ಭಯ ಹುಟ್ಟಿಸಿದ್ದು ಇದೇ ಜಿದ್ದು... ಬೇರಾರಿಗೂ ಭಯ ಪಡದ ಫಿರಂಗಿಗಳಿಗೆ ಭಯ ಇದ್ದದ್ದು ಈ ಸಂತನ ಜೊದ್ದಿನ ಮೇಲೆ ತಾನೇ!!!..
     ತನಗೆ ಬೇಕ್ಕಾದ್ದು ಏನು ಎನ್ನುವಷ್ಟು ಸ್ಪಟಿತ ಮನಸ್ಥಿತಿ...ಸಾಧಾರಣವರಿಂದ ಸಾದ್ಯವಿಲ್ಲ.. ಸ್ಪಷ್ಟತೆ ಯಾವುದೇ ಒಂದು ಹೋರಾಟಕ್ಕೆ ತುದಿ ಮುಟ್ಟಲು ಪ್ರೇರಣೆ ನೀಡುತ್ತದೆ... ಅಂತಹ ಸ್ಪಷ್ಟತೆ ಎಲ್ಲರಿಂದ ಸಾಧ್ಯವಾಗುವಂತಹದಲ್ಲ...ಅದು ಕೇವಲ , ದೂರದೃಷ್ಟಿ,ಯ ನಾಯಕನಿಂದ ಮಾತ್ರ ಸಾಧ್ಯ.. ನಾಯಕತನ ಎನ್ನುವುದು ಒಬ್ಬ ತನ್ನೊಳಗೆ  ಹುಟ್ಟಿಸಿಕೊಂಡ ಧ್ಯೇಯವನ್ನ ಗೌರವಿಸಲು ನಡೆದುಕೊಳ್ಳುವ ರೀತಿಯೂ ಮುಖ್ಯವಾದ್ದ ‌ದ್ದು... ಅಂತಹ ಕೊಡುಗೆ ಗಾಂಧಿ ಈ
 ದೇಶದಲ್ಲಿ ತರಸಿಬಿಟ್ಟರಲ್ಲ..ವಿಚಿತ್ರ ಆದರೂ ಸತ್ಯ.
    ಒಂದು ಕಾಲಗಟ್ಟದಲ್ಲಿ ಸರಿ ಅನ್ನಿಸುವ ನಂತರ ಕಾಣ ಸಿಗುವ ನೂರಾರು ತಪ್ಪುಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳವ ಸಿನಿಕರಿಗೆ..ಗಾಂಧಿಯ ಈ ಎಲ್ಲಾ ‍ಜಿದ್ದುಗಳು..ಹೊಸ ಚೈತನ್ಯ ನೀಡಿದ್ದು ಸುಳ್ಳಲ್ಲ ತಾನೇ...
     
  ಇರಬಹುದು...ತಾತನಲ್ಲಿನ ಎಲ್ಲಾ ಜಿದ್ದುಗಳಿಂದ ನಮಗೆನಿಸ್ಸಿದ್ದು ನಾವು ಪಡೆಯಲು ಸಾಧ್ಯವಾಯಿತು ಎಂಬುದಂತೂ ಸುಳ್ಳಲ್ಲ..
     

No comments:

Post a Comment

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...