Sunday, 10 December 2017

Kanada mayamrugha ಕಾಣದ ಮಾಯಾಮೃಗ

ನಾನು ಕಂಡದ್ದು ನಿನ್ನನ್ನೋ ನಿನ್ನೊಳಗಿನ ಕನಸನ್ನೊ...
ನನ್ನ ಮೋಡಿ ಮಾಡಿದ್ದು ನಿನ್ನ ನೆನಪೋ ಇಲ್ಲ ನಿನ್ನ ಬಿಸುಪೋ...

ಕಣ್ಣಂಚಿನಲ್ಲಿ ಮೂಡಿದ್ದು ಆ ನಿನ್ನ ನಗುಮುಖದ ನೆರಳೋ..ಇಲ್ಲ ನನ್ನ ಕಾಡುವ ಬಯಕೆಯ ಹೊರಮುಖವೋ ...

ಕಾಣದ ಆಸೆಯ ತಳಕ್ಕೆ ನನ್ನ ಕೊಂಡ್ಯೊದ್ದದ್ದು ನಿನ್ನ ಹುಮ್ಮಸ್ಸೋ.. ಇಲ್ಲ ನನ್ನ ಹೃದಯದಲ್ಲಿ ತುಳುಕುತ್ತಿದ್ದ ಬುಗ್ಗೆ ಬುಗ್ಗೆಯಾದ ಪ್ರೀತಿಯೋ...

ಮುಗ್ಗಲು ಮುರಿದಾಗ ಕಾಡುವ ನೆನಪು ನಿನ್ನ ಬಳಿಬೇಕೆಂಬ  ಆಶಯದ್ದೋ... ಇಲ್ಲ ನನ್ನ ಕಾಡುತ್ತಿರುವ ಒಂಟಿತನದ್ದೋ....

ಬೆಳ್ಳಂಮಬೆಳ್ಳಿಗ್ಗೆ ನನ್ನ ಸುತ್ತೆಲ್ಲ ಕಾಡುವ ನಿನ್ನಿರುವು... ನೀನು ಕೊಟ್ಟು ಹೋದ ಮನಸಿನ ಸುಖದ್ದೋ ಇಲ್ಲ .....ನನ್ನ ನಾನು ಪ್ರೀತಿಸಬೇಕೆಂಬ ಹಠದ್ದೋ...

ಬೇಕೆನಿಸುವುದು ಸಹಜವಾದಂತೆ ಬೇಡವೆನಿಸುವುದೂ ಸಹಜತೆ ಆದರೆ... ನಾನುಭವಿಸುವ ಈ ಧೀಕಾರ...ನಿನ್ನ ಬಗ್ಗೆ   ನನ್ನ ಕೋಪದ್ದೋ.....ಇಲ್ಲ ನನ್ನ ಬಗ್ಗೆ ನನಗೇ ಮೂಡಿದ ಹತಾಷೆಯದೋ....

Friday, 24 November 2017

ಸಾವು ಬದುಕಿನ ನಡುವೆ ( Savu Badukina naduve)

ಸಾವು ಬದುಕಿನ ನಡುವೆ...ಕನಸು ವಾಸ್ತವದೊಂದಿಗೆ ಹೊಯ್ಯದಾಡುವ ಮನಗಳು ಗಂಡು ಹೆಣ್ಣಿನದೇ?

ಸಾವಿನಲ್ಲೂ ಸುಖವಿದೆ
ಸತ್ತು ಬದುಕುವ ಪ್ರೀತಿಗೆ ಅದರದೇ ಕಂಪು
ಸಾವಿನ ಸುಖ... ಹೃದಯದಲ್ಲಿ ಉಳಿದು ಹೋಗುವ ಸುಖ... ಇದು ಸತ್ಯವಾಗುವುದು ಹೆಣ್ಣಿಗೋ ಹೆಣ್ಣಿನೊಳಗಿನ ತಾಯಿಗೋ.. ಅಂತೂ ಸಾವೂ ಸುಖವಾಗುವ ಕನಸು ಮಾತ್ರ ಆಕೆಗೆ ಸದಾ

 ನೀನು ಸಾವಿನಾಚೆಯ ಮೌನ
ಬೆಳಕಿಯಾಚೆಯ ಆ ಬೆಳಕು
ದಟ್ಟ ಉಸಿರಿಗೆ ಪುಟಿದೇಳುವ
ಕೂದಲಿನ ನವಿರು ನೀನು..ಎಂದು ಕನಸುಗಳನ್ನ ಹೆಣ್ಣಿಗೆ ಕೊಡುವ ಉತ್ತಮ ಜೀವಿಗೆ ಸಾವಿನ ಸುಖದ ಅರಿವಾದರೂ ಇದೆಯೇ????

ಬದುಕಿನುದ್ದಕ್ಕೂ ಸಾವಿನ ಚಿಂತೆಯಲ್ಲಿ ಕಳೆಯುವುದು ಗಂಡಿಗೆ ಅನಿವಾರ್ಯವೋ.. ಅಥವಾ ಸಾವಿನಲ್ಲೂ ಬದುಕ ಕಲಿಸಿ ಅಂತರ್ಗಂಗೆಯಾಗುವ ಕಲೆ ಬರೀ ಹೆಣ್ಣಿಗೋ.. ಅಂತೂ ಸಾವಿನ ಚಿಂತೆ ಗಂಡಿಗಾದರೆ...ಸಾವಿನ ಕನಸು ಹೆಣ್ಣಿಗೆ..
ಬದುಕಿನಲ್ಲಿ ಸಾವ ಕಾಣುವುದು ಗಂಡಸಿನ ಅಹಂ..
ಸಾವಿನಲ್ಲಿ ಬದುಕು ಹುಡುಕುವುದು ಹೆಣ್ಣಿನ ಅಂತಃಕರಣ

ಅಷ್ಟು ಕನಸು ಕಂಡರೂ ಎಲ್ಲಾ ಕನಸಿನ ಮಾತು ಕಟು ವಾಸ್ತವದಲ್ಲಿ ಕೊನೆಯಾಗುವುದರ ಹಿಂದೆ ಬದುಕಿನ ಮರ್ಮ ಅಡಗಿದೆಯೇ

 ಬದುಕಿನ ವಾಸ್ತವ ಇರುವುದೇ ಕನಸು ಕಾಣುವ ವಾಸ್ತವದಲ್ಲಿ...
ಹೆಣ್ಣು ಬಯಸುವ ಪ್ರೀತಿ ಕೃಷ್ಣನ ಕನವರಿಕೆಯಂತಾದರೆ..
ಗಂಡು ಬದುಕುವ ನೀತಿ ರಾಮನಂತೆ..ವಾಸ್ತವತೆಯ ಪ್ರತೀಕ..... ಅದಕ್ಕೆಲ್ಲಾ ಒಂದು ಚೌಕಟ್ಟು...
 ಯುಗಗಳಿಂದ ಹೆಣ್ಣು ಕಾಯುತ್ತಾಳೆ ಭವಿಷ್ಯವನ್ನು
 ಸಾವಿನಾಚೆ ಮೌನವಿಲ್ಲದ.. ಬದುಕಿಗೆ
 ಬೆಳಕು ಕಾಣದ ಜಗವೇ ಇಲ್ಲ‌..ಅಂತೆಯೇ ಎಲ್ಲರೊಳಗೂ
ಉಸಿರು ಸದಾ ಹೊಮ್ಮುತ್ತಿರುತ್ತದೆ...
ಕೈಬೆರಳುಗಳ ಮಧ್ಯೆಯ ನವಿರಿನಂತೆ....
ಹೆಣ್ಣು ಬದುಕೆಂದು ತಿಳಿವ ಗಂಡಿಗೆ ಸಾವಿಲ್ಲ

Sunday, 12 November 2017

Indoo‌ Deepavali- upasamharada mathu.. ( ಇಂದೂ ದೀಪಾವಳಿ ಉಪಸಂಹಾರದ ಮಾತು)

ಇಂದೂ ದೀಪಾವಳಿಗೆ... ಭಾಷ್ಯ ಬರೆಯಹೊರಟ್ಟದ್ದೇ ಕವಿತೆಯಾದಾಗ.....

ಶಿವರಾಮಕೃಷ್ಣ ನಾನು ....ಬೆಳಕು ಮಾತ್ರ ಕಂಡೆನಾದರೆ ಬೆಳಕು ನನ್ನದಾಗುವುದೋ ಗಂಡಿನ ಮಾತು

 ಬೆಳಕಿಗೆ ಹೆಸರಿಲ್ಲ... ಅದು ಯಾರದ್ದೂ ಆಗಬಹುದು.. ನನ್ನದು ಎಂಬ ಮೀಸಲು ಕೇಳಲು ನೀನ್ಯಾರು ರಾಮ??..ಈಕೆಯೋ ಕಾಡ ಹೆಣ್ಣು, ಕೈಅಂಚಿಗೆ ಸಿಗದ ಜಿಂಕೆ

 ಅದು ಬರಿ ಬೆಳಗಲ್ಲೋ ಹೆಣ್ಣೇ... ಕಾಡುವ ಕನಸ ಬೆಳಗು.. ನನ್ನದಾಗಬಾರದೆಂಬ ಹಠ ನಿನಗ್ಯಾಕೋ ಅನ್ನುತ್ತಾನೆ ಆತ ಸುಸಂಸ್ಕೃತ...

 ಬೆಳಕಿನೊಳಗೇ ಬದುಕು ಕಟ್ಟಿಕೊಂಡ ನಿನ್ನ ತಪ್ಪಿಗೆ ನಾನ್ಯಾಕೆ ನಲುಗಲಿ... ನನಗೆ ಬೂದಿಯಲ್ಲೂ ಕತ್ತಲಲ್ಲೂ ಬದುಕಿದೆ.... ಕಠಿಣತೆಗೆ ಇನ್ನೊಂದು ಹೆಸರು ಕಾಳಿ... ಅದು ಆಕೆ..

 ನೀನು ಬೆಳಗನ್ನು ನನ್ನಲ್ಲೇ ಬಿಟ್ಟು ಕತ್ತಲೆಯ ದಾರಿ ಹಿಡಿದಿರುವೆ
ನೀನು ಈಗ ಬದುಕ್ಕುತ್ತೇನೆ ಎಂದು ಕೊಂಡಿರುವುದು ನನ್ನನ್ನೇ ಸುಟ್ಟ ನಿನ್ನ ಬೆಳಕಿನ ಬೂದಿಯಲ್ಲಿ
ನಿನ್ನ  ಬೆಳಕು ನನ್ನ ಸಂಪೂರ್ಣ ಭಸ್ಮವಾಗಿಸುವ  ಮುನ್ನ ತಂಪೆರೆಯ ಬಾ ...
ಕತ್ತಲೆ ದಾರಿ ದೂರ.... ಹೋಗಬೇಡ ಅಲ್ಲಿಗೆ ತಿರುಗಿದರೆ ಕಾಣುವುದು ನನ್ನ ಕೈ ಚಾಚುವಿಕೆ... ಅಲ್ಲಿದ್ದದ್ದು ಗಂಡಸಿನ ಅಹಂ ಅಲ್ಲ.. ಜಗತ್ತನ್ನ ಜಗದೊಡತಿಯನ್ನ ಪ್ರೀತಿಸುವ ಪರಿ...

ಬೆಳಕು ಕರಕಲಾಗಿಸುವ ಶಿವನು ನನ್ನ ಸದಾ ಕಾಯುವಂತೆ ಮಾಡಿದ ರಾಮ ನೀನಲ್ಲವೇ..
ಶಿವನು ನನ್ನೊಳಗೆ ಹೊಕ್ಕು ಮೂರನೆಯ ಕಣ್ಣಿನ ಬೆಳಕ ಹೊರಹೊಮ್ಮಿಸಿದರೆ..
ಗೊತ್ತು ನೀನು ಭಸ್ಮ ಎಂದು..ಆದರೆ ತಂಪೆರೆಯಲು..ನಾನೆಲ್ಲಿಂದ ಹುಟ್ಟಲಿ..
ಗಂಗೆ ನಡೆದಾಯ್ತು ಭುವಿಗೆ..
ಓಡಿ ಹೋದ ಕೃಷ್ಣ ಬರಲಿ ತಾಳು..
ಅವನ ತಂಪು ನನ್ನ ಜೀವಿತದ ಜೊತೆ ನಿನ್ನ ಭಸ್ಮವ ತಂಪರೆದೀತು..
ರಾಮಾsssss... ಮೂರನೆಯ ಕಣ್ಣಿನ ಬೆಳಕ ಹೊತಸೂಸುವ ಶಿವ ಹೊಕ್ಕ ಮನೆ ಸ್ಮಶಾನ...
ಆದರೆ  ಅಲ್ಲೂ ಬದುಕಿದೆ... ಈಕೆ ಕಾಡ ಹೆಣ್ಣಲ್ಲ.. ಹಠದ ಕಾಳಿಯೂ ಅಲ್ಲ, ಅದಕ್ಕೂ ಮೀರಿ ಜಗದೋದ್ಧಾರಕನ ಪಡೆದ ತಾಯಿ ಈಗ...

 ದೀಪದ ಸುತ್ತಲೇ ಕತ್ತಲು ..
ನಿನ್ನ ನೀನರಿಯದೆ ರಾಮ , ಕೃಷ್ಣ , ಗಂಗೆಯರ ಸುತ್ತ ಬದುಕ ಕಟ್ಟಬೇಡ ಹೆಣ್ಣೇ
ನಿನ್ನ ಸ್ಪೂರ್ತಿಯ ಛಾಯೆ ವಿಸ್ತರಿಸೆ
ನಿನಗ್ಯಾರು ಸಾಟಿ
ವಿಶ್ವವೇ ಎದ್ದು ನರ್ತಿಸೀತು ನಿನ್ನ ಮುಂದೆ... ಆತ ವಿಶ್ವ ಮಾನವ...ಜಗದ ಜವಾಬ್ದಾರಿ ಹೊತ್ತ ದೇವರಲ್ಲ ಬದಲಿಗೆ ತಾಯಿಯ ಒಡಲಿನಿಂದ ಹೊರಬರಲಾರದ ಕನಸಿನ ಒಡೆಯ...

 ದೀಪವಲ್ಲ ರಾಮ..
ನಾನು ಬೆಳಕು...ದೀಪ ತರುವ ಬೆಳಕು
ನಿನ್ನ ಅಯೋಧ್ಯೆಯ ಬೆಳಗುವ ಬೆಳಕು...
ನನಗಿಲ್ಲ ಛಾಯೆ...
ಪ್ರಕರತೆ ಮಾತ್ರ ನನ್ನ ಸತ್ಯ...
ರಾಮನಿಲ್ಲದೆ ಅಯೋಧ್ಯೆಯಲ್ಲಿ ದಿಪವಿಲ್ಲ ಬೆಳಕೂ ಇಲ್ಲ‌‌...
ಶಿವನಿಲ್ಲದ ಸ್ಮಶಾನಕ್ಕೆ ದಿವ್ಯ ಮೌನ...
ಕೃಷ್ಣನಂತಹ ಕಚಕುಳಿ ಇಲ್ಲದೆ ನನ್ನ ನಗುವಾದರೂ ಚಲ್ಲೀತೆ???
ಬೆಳಕಿಗೆ ಬೇಕು ನೀವೆಲ್ಲಾ...
ನೀವು ನನ್ನವರಾದಾಗ ವಿಶ್ವಮಾನ್ಯೆ ನಾನು.... ಕಾಡ ಹೆಣ್ಣಾದರೂ, ತಾಯಿ..ಅದಕ್ಕೂ ಮಿಗಿಲಾಗಿ ಹೆಣ್ಣಾಕೆ.. ಗಂಡಸನ್ನ ದ್ವೇಶಿಸಲು ಸಾಧ್ಯವೇ... ಸಿಟ್ಟಾಕೆಗೆ ಅಷ್ಟೇ...

ಗುಟ್ಟೊಂದ ಹೇಳುವೆ ಕೇಳು
ನನ್ನೊಳಗಿನ ರಾಮ ಕಾಣೆಯಾದದ್ದು
ಸೀತೆಯ ಬೂದಿಯಲ್ಲಿ
ನೀನೋ ಶಿವನ ಮೂರನೆ ಕಣ್ಣಿನ ಗೆಳತಿ
ಭಸ್ಮವಾಗದಿದ್ದೀತೆ ಅದಕ್ಕೂ
ಕೃಷ್ಣನ ಚಾಳಿ
ಕೊನೆಗೂ ಹರಿದಿದ್ದೇ ನೀನು
ಬೆಳಕಿನ ಗಂಗೆಯಾಗಿ
ದಟ್ಟ ಕಾನನದಲ್ಲೆಲ್ಲಾ
ಎಲ್ಲೆಲ್ಲೂ ಹಸಿರಿನ ಸ್ಪರ್ಶ
ಹೊಸ ಚಿಗುರು...
ಕವಿಯಾದ ಗಂಡಿಗೆ ಹೆಣ್ಣು ಸ್ಪರ್ತಿಯ ಜೊತೆಗೆ ಆಪ್ತಳೂ ಹೌದು.. ಹೆಣ್ಣಿಲ್ಲದ ವ್ಯಕ್ತಿ ಕವಿಯಾದನೇ????...ಕವಿ ಆತ

ಕೃಷ್ಣ ನನ್ನಲ್ಲಿ ಲೀನಾವಾದಾರೆ
ಶಿವನ ಮೂರನೆಯ ಕಣ್ಣೂ ಮುಚ್ಚಿತು..
ನಾನಾಗುವೆ ಆಗ ಹೊಸ ಚಿಗುರು..
ಕೃಷ್ಣ ನನ್ನೊಳಗಿನ ಲವಲವಿಕೆ ಆದಾಗ...
ಬೂದಿಯಾದ ರಾಮನ ಕನಸಿಗೇ ಹೊಸ ಬೆಳಕು ನಾನು
ಬೆಳಕಿನ ಗಂಗೆ ...ಶಿವನ ಗಂಗೆಯಾದಾಗ...
ಸ್ಮಶಾನದಲ್ಲೂ ಹೊಸ ಜೀವ..
ಇನ್ನು ಸಾವಿಲ್ಲ...ಬದುಕಿಗಿದೆ ಗಂಗೆಯ ಸುರಪಾನ....
ಬರುತ್ತಿದೆ ಹೊಸ ದೀಪಾವಳಿ.... ಆಕೆಗೆ ದೀಪಾವಳಿಯ ಕನಸು...

ಗಂಡಿನ ಜೊತೆಗಿನ ಕನಸು ಹೊಸತನದ ಬಿಸುಪು ಇವಿಲ್ಲದೆ ಹೆಣ್ಣು ಹೆಣ್ಣದಾಳೇ...ಸಿಟ್ಟಾದ ಹೆಣ್ಣೂ ಗಂಡಿನ ಪ್ರೀತಿಗೇ ಕರಗುವುದು...

ಸೂಚನೆ- ನನ್ನ "ಇಂದೂ ದೀಪಾವಳಿ", ಮೆಚ್ಚಿ..ಉಪಸಂಹಾರದ ಮಾತು ಮುಂದುವರೆಸಿದ್ದು...ನನ್ನ ಆತ್ಮೀಯ ಶಿಕ್ಷಕರಾದ..ನನ್ನ ಕನ್ಬಡ ಪ್ರೀತಿಗೆ ಗುರುಗಳಾದ ಮೋಹನ್ ಭಂಕೇಶ್ವರರು.. ಅವರು ಸಂವೇದನೆಯ ಗಂಡಾಗಿ ಬರೆದಾಗ... ಉಚ್ಚತನದ ಹಂಬಲದಲ್ಲಿ.. ಕಾಡುವ ಹೆಣ್ಣಾಗಿದ್ದು ನನ್ನ ಸೌಭಾಗ್ಯ..
ಇದು ಮೋಹನ್ ಭಂಕೇಶ್ವರರು ಮತ್ತು ರಶ್ಮಿ ಕುಂದಾಪುರರ ಉಪಸಂಹಾರ.. ಇಂದೂ ದೀಪಾವಳಿ ಕವಿತೆಗೆ...

Wednesday, 1 November 2017

Kanasa Mathu....Manasa Nadige (ಕನಸ ಮಾತು...ಮನಸ ನಡಿಗೆ...)

ಕನಸು ಮಾತಾಡ ಬಯಸಿತ್ತು ಮನಸ್ಸಿನೊಂದಿಗೆ...
ಮನಸ್ಸಿನ ಹತಾಷೆ ಕನಸ್ಸನ್ನ ಬಡಿದೆಚ್ಚರಿಸಿತ್ತೋ ಇಲ್ಲ ಮನಸ್ಸೇ ಬದಲಾಯಿತೋ....

ಮನಸ್ಸು ಮುಚ್ಚಿಡಬಹುದು ಮನದ ಭಾವವನ್ನು
ಕಣ್ಣು ಮುಚ್ಚಿಟ್ಟೀತೇ .....
ಹಾಗೆ ಅಡಗಿಸಿ ರೆಪ್ಪೆ ಮುಚ್ಚಿದರು ಕಣ್ಣೀರ ಹನಿಯೊಂದು ಜಾರದಿದ್ದೀತೇ ....
ಹಾಗೆ ಕೆನ್ನೆ ಮೇಲೆ ಇಳಿಯುವ ಒಂದೊಂದು ಹನಿಯು ನೀರಲ್ಲ
ಎದೆಯೊಳೆಗಿನ ಭಾವವದು .....
ಹಗುರಾಗು ಅನ್ನುತ್ತಿದೆ ಕನಸು..

 ಮನದ ಬಾವವೀಗ ಎಷ್ಟು ಜಡಗಟ್ಟಿದೆಗೊತ್ತಾ..‌
ಕಣ್ಣುಗಳಲ್ಲಿನ ಜೀವಂತಿಕೆಯೇ ಕಣ್ಮರೆಯಾಗಿದೆ...
ಕಣ್ಣೀರ ಸಲೆ ಬತ್ತಿ ವರ್ಷಗಳೇ ಆದವು..
ಎದೆ ಬಡಿತ ಈಗಿರುವುದು ಪ್ರಾಣವಾಯುವಿಗೆ
 ಜೀವಿಸುವ ಆಶಯವೇ ಬತ್ತಿಹೋಗಿದೆ...
ಅವನಿಲ್ಲದ ಉಸಿರಿಗೆ ಬಿಸುಪಿದೆಯೇ
ಕನಸುಗಳಲ್ಲೆ ಬಣ್ಣ ಕಳೆದುಕೊಂಡು ಮಲಗಿದೆ...
ಯಾಂತ್ರಿಕತೆ ನನ್ನ ಹೊತ್ತು ನಡೆದದ್ದು ಅವನು ನನ್ನೊಳೆಗೆ ಸತ್ತ ಮರುಕ್ಷಣದಿಂದ...
ಮನಸ್ಸು ನಿಟ್ಟುಸಿರಿಡುತ್ತಿದೆ...

ಅವನೆಂಬ ಕನಸ್ಸಿಗೆ ಇಲ್ಲದ ಚಿಂತೆ..ನಿನಗ್ಯಾಕೆ ಮನವೇ
ನಾನು ಬಂದಿದ್ದೇನೆ....ಹೊಸತನದ ಅಲೆಯಲ್ಲಿ..
ಆತನ ನೆನಪು ನಿನ್ನ ನುಣುಪಿನ ಕಂಬನಿ ಆಗಿ...
ನಿನ್ನೊಳಗಿನ ಮಿತಿಗೆ ಅಂತ್ಯ ಕಾಣಲಿ...
ಮನದ ಭಾವವನ್ನ ಹೊಳೆಯುವ ಕಣ್ಣು ಹೊರಹಾಕಿದರೆ...
ಜೀವಂತಿಕೆಗೆ ಕೊರತೆಯೇ???
ಎದೆಯ ಬಡಿತದ ಯಾಂತ್ರಿಕತೆಗೆ ನನ್ನನ್ನ ಜೋಡಿಸು ಗೆಳತಿ...
ಅಲ್ಲೋಲ ಕಲ್ಲೋಲವಾದೀತು...
ರಾತ್ರಿಯ ನೀರವತೆಯೂ ಹೊಸ ಹುರುಪು ತಂದೀತು...
ಕನಸ್ಸಿಗೆ ತುಂಬಾ ಆಶಯ...ಬದಲಾವಣೆಯ ಬಯಕೆ

 .... ನೀನು ಜೀವಸಲೆ ಆದರೆ ನಾನು ಹತಾಷೆ...ನನ್ನ ಹತಾಷೆಗೆ ಕನಸುಗಳ ಬಯಕೆ...ಇದೇ ಅಲ್ಲವೆ ಬದುಕಿನ ವೈಪರೀತ್ಯಗಳು???
ಮನಸ್ಸಿಗೆ ಇನ್ನೂ ಕಾಣದ ಸಂಶಯ...

ನಿನ್ನ ನಿದ್ದೆಗೆಟ್ಟ ಕಣ್ಣುಗಳಲ್ಲಿ ಬಯಕೆಯ ಕಾಮನೆ...
ಹತಾಷೆ ನೀನುಲಿದಿಟ್ಟ ಕರಾಳತನ...
ಕೆಂಪಾದ ಕೆನ್ನೆಗಳಲ್ಲಿ ನಾನು...
ನಿನ್ನ ಸುಕ್ಕಾದ ತುಟಿಗಳಲ್ಲಿ ಹೊಸ ಭಾವ...
ಇವೆಲ್ಲಾ ಸುಳ್ಳೆಂದರೂ ಆಗಾಗ ಪಳ್ಳೆಂದು ಹೊರಬರುವ..
ಮನಸ್ಸಿನ ಕನ್ನಡಿ...ಕಂಬನಿ..ಹತಾಷೆಯನ್ನ ಮರೆತು ನಕ್ಕಿದ್ದು ಸುಳ್ಳೇ.......
ಬದುಕಿನ ವೈಪರೀತ್ಯಗಳನ್ನ ಬಿಡೇ ಗೆಳತಿ...
ಕುಂಟೆಬಿಲ್ಲೆ ಆಡಲು ವಯಸ್ಸೇಕೆ...
ಮೂರನೆಯ ಮನೆಯ ನನ್ನೆಡೆಗೆ ಹಾರಿ ಬಾ...

ನಿನ್ನ ಸೆಳತಕ್ಕಿಂತ ಹೆಚ್ಚಾದದ್ದು ಕುಂಟೆ ಬಿಲ್ಲೆ...
ಮೆರೆತ ಸಳೆತಗಳನ್ನ ವಯಸ್ಸಿನ ಏರಿತಗಳಲ್ಲಿ ಮರೆತೇ..
ನೀನು..ಕಾಡಿದ ಹೊಸ ಬದುಕಿಗಿಂತ..
ನೀನು..ನೆನಪಿಸಿದ ಹಳೆ ನೆನಪುಗಳಿಗೆ ಜೀವ ಉಂಟು..
ಹಾರುವ ಕನಸಿನಲ್ಲಿ ಹೊಳೆಯುವ ನೆನಪುಗಳು...
ನಾನು ಮರೆತದ್ದು‌...ನನ್ನನ್ನೋ (ಮನಸ್ಸನ್ನೊ) ಇಲ್ಲ
ನಿನ್ನನ್ನೋ (ಕನಸನ್ನೋ)...
ನೀನು ತಂದಿಟ್ಟ ನೆನಪಿನಲ್ಲಿ... ನಾನು ನೀನು ಒಂದಾದದ್ದು
ಹೊಸ ಹುರುಪೋ ಇಲ್ಲ ಹೊಸ ಕನಸೋ...

           ರಶ್ಮಿ ಕುಂದಾಪುರ ಮತ್ತು ಅಶ್ವಥಾ ಶೆಟ್ಟಿ
       (ಇಬ್ಬರು ಸ್ನೇಹಿತೆಯರ ಮಾತುಗಳು ಕವನವಾದ ಮನಸ್ಥಿತಿ)



Sunday, 29 October 2017

Gandhi a gunginalli -3 (ಗಾಂಧಿಯ ಗುಂಗಿನಲ್ಲಿ-೩)

ವಾರ್ದಾದ ಆಶ್ರಮದ ಸುತ್ತೆಲ್ಲ ತಿರುಗುವಾಗ ಹೆಮ್ಮೆಯಾಗುತ್ತಿತ್ತು...ಇದೂ ನಮ್ಮ ದೇಶದ ಸಂಸ್ಕೃತಿಯ ಅಂಗ ಅಂತ... ಇನ್ನೂ ಇಪತ್ತು ವರ್ಷದ ಹುಡುಗಿ ಆಕೆ ಸವಿಸ್ತಾರವಾಗಿ ಗಾಂಧಿಯನ್ನ ವಿವರಿಸುತ್ತಾಳೆ.... ಕಣ್ಣಲ್ಲಿ ಮಿನುಗುವ ಹೆಮ್ಮೆ.. ಸ್ವರದಲ್ಲಿ ಆತ್ಮೀಯತೆ... ಗಂಟಲುಬ್ಬಿ ಬರುತ್ತದೆ ಆಕೆಗೆ.. ನನಗೋ ಆಶ್ಚರ್ಯ ಗಾಂಧಿಯ ಬಗ್ಗೆ ಆಕೆಗೇಕೆ ಅಕ್ಕರೆ??? ತಾನೆಂದೂ ಕಾಣದ ವ್ಯಕ್ತಿ ವ್ಯವಸ್ಥೆ ಬಗ್ಗೆ ಇಷ್ಟೊಂದು ಸಂವೇದನೆ?? ಅದು ಅರ್ಥ ಆದವಳಂತೆ ಅಂದಳು ಅವಳು... ಇಲ್ಲೇ ಹುಟ್ಟಿ ಆಡಿದ ನನಗೆ ಗಾಂಧಿ ಮನಸ್ಸು ತುಂಬಾ ಎಂದಳು... ನಿಜ ಆಶ್ರಮದಲ್ಲಿ ಗಾಂಧಿ ಪ್ರತಿ ಉಸಿರಿನಲ್ಲಿದ್ದಾರೇನೋ ಅನ್ನುವಷ್ಟು ಶಾಂತತೆ, ಸರಳತೆ... ಅದು ನಿಜವೆನೆಸಿದ್ದು...ಅಲ್ಲೆಲ್ಲಾ ನಡೆದಾಡುವಾಗ... ಕಾಡಿದ್ದು ಮನುಷ್ಯ ಸಹಜವಾದ ಲೋಭಗಳಿಂದ ಸ್ವಯಂ ಪರಿಕಲ್ಪನೆಯಲ್ಲಿ ತಡೆಗಟ್ಟಬೇಕಾದರ ವ್ಯಕ್ಕಿಗಿರಬಹುದಾದ .... ಸ್ವಂತಿಕೆ, ಹಾಗೆಯೇ ಬದ್ದತೆ...
   ಗಾಂಧಿಯಲ್ಲಿ ಕೆಲವೊಮ್ಮೆ ಕಾಣಿಸುವುದು ಬರೀ ಜಿದ್ದು... ಸಾಧಿಸಬೇಕೆಂಬ ಜಿದ್ದು. ನಿಜ ಕೆಲೊಮ್ಮೆ ಅತೀ ಅನಿಸುವ ಈ ಜಿದ್ದು ಸ್ವಂತದ್ದೇನೋ ಅನ್ನಿಸಿ ಬಹಳ ಜನ ಕಟುವಾಗಿ ಟೀಕಿಸುತ್ತಾರೆ.. ಆದರೆ ಇದೇ ಜಿದ್ದನಿಂದಲ್ಲವೇ ದಂಡಿ ನಡುಗೆ ಆದದ್ದು... ಆ ಸಮಯದಲ್ಲಿ ಬ್ರಿಷರಿಗೆ ಭಯ ಹುಟ್ಟಿಸಿದ್ದು ಇದೇ ಜಿದ್ದು... ಬೇರಾರಿಗೂ ಭಯ ಪಡದ ಫಿರಂಗಿಗಳಿಗೆ ಭಯ ಇದ್ದದ್ದು ಈ ಸಂತನ ಜೊದ್ದಿನ ಮೇಲೆ ತಾನೇ!!!..
     ತನಗೆ ಬೇಕ್ಕಾದ್ದು ಏನು ಎನ್ನುವಷ್ಟು ಸ್ಪಟಿತ ಮನಸ್ಥಿತಿ...ಸಾಧಾರಣವರಿಂದ ಸಾದ್ಯವಿಲ್ಲ.. ಸ್ಪಷ್ಟತೆ ಯಾವುದೇ ಒಂದು ಹೋರಾಟಕ್ಕೆ ತುದಿ ಮುಟ್ಟಲು ಪ್ರೇರಣೆ ನೀಡುತ್ತದೆ... ಅಂತಹ ಸ್ಪಷ್ಟತೆ ಎಲ್ಲರಿಂದ ಸಾಧ್ಯವಾಗುವಂತಹದಲ್ಲ...ಅದು ಕೇವಲ , ದೂರದೃಷ್ಟಿ,ಯ ನಾಯಕನಿಂದ ಮಾತ್ರ ಸಾಧ್ಯ.. ನಾಯಕತನ ಎನ್ನುವುದು ಒಬ್ಬ ತನ್ನೊಳಗೆ  ಹುಟ್ಟಿಸಿಕೊಂಡ ಧ್ಯೇಯವನ್ನ ಗೌರವಿಸಲು ನಡೆದುಕೊಳ್ಳುವ ರೀತಿಯೂ ಮುಖ್ಯವಾದ್ದ ‌ದ್ದು... ಅಂತಹ ಕೊಡುಗೆ ಗಾಂಧಿ ಈ
 ದೇಶದಲ್ಲಿ ತರಸಿಬಿಟ್ಟರಲ್ಲ..ವಿಚಿತ್ರ ಆದರೂ ಸತ್ಯ.
    ಒಂದು ಕಾಲಗಟ್ಟದಲ್ಲಿ ಸರಿ ಅನ್ನಿಸುವ ನಂತರ ಕಾಣ ಸಿಗುವ ನೂರಾರು ತಪ್ಪುಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳವ ಸಿನಿಕರಿಗೆ..ಗಾಂಧಿಯ ಈ ಎಲ್ಲಾ ‍ಜಿದ್ದುಗಳು..ಹೊಸ ಚೈತನ್ಯ ನೀಡಿದ್ದು ಸುಳ್ಳಲ್ಲ ತಾನೇ...
     
  ಇರಬಹುದು...ತಾತನಲ್ಲಿನ ಎಲ್ಲಾ ಜಿದ್ದುಗಳಿಂದ ನಮಗೆನಿಸ್ಸಿದ್ದು ನಾವು ಪಡೆಯಲು ಸಾಧ್ಯವಾಯಿತು ಎಂಬುದಂತೂ ಸುಳ್ಳಲ್ಲ..
     

Wednesday, 25 October 2017

Indoo Deepavali (ಇಂದೂ ದೀಪಾವಳಿ)


ಇವತ್ಯಾಕೋ ಕನಸು ಗೂಡು ಕಟ್ಟಿದೆ....
ಮನದ ಮೌನದಲ್ಲಿ ನಿನ್ನ ನಗೆಯ ಕಾಂತಿ...
ಕಾಡಿದ್ದು ನಾನೋ...ನೀನೋ..
ಕಾಡಿಸಿದ್ದು ಮಾತ್ರ ಪ್ರೀತಿ....
ಗೂಡು ಕಟ್ಟಿದ ಕನಸಿನಲ್ಲಿ ಹೊಸ ಮೊರೆತ
ಬದುಕಿನ ರಾಮನಿಗೆ ನಾನು ಕಟ್ಟಿಟ್ಟವಳು
ಹೃದಯದ ಶಿವನಿಗೆ ನನ್ನ ಮನಸ್ಸ ಅರ್ಪಿಸಿದರೆ
ಕಾಣದ ಕತ್ತಲ್ಲಲ್ಲಿ ನಿಟ್ಟುಸಿರು ಯಾಕೆ???

ಹುಟ್ಟು ನೂರಾದೀತು... ಕನಸು ಪುನಃ ಒಡೆದೀತು...
ಚೆಲುವ,ಚೆನ್ನಿಗ ಕೃಷ್ಣ: ಹೊಸ ಕನಸ ಕೊಡುತ್ತಾನೆ
ಕೊಟ್ಟವನೇ ಅಲ್ಲಿಂದ ಮಾಯ ಆತ...
ನಾನೂ ನನ್ನ ಶಿವ... ಗಣಗಳ ಮಧ್ಯೆ ಹುಡುಕುತ್ತೇವೆ...
ಬೂದಿಯಲ್ಲೂ ಬದುಕನ್ನ...
ರಾಮ ಬಂದಾಗ ದೀಪಾವಳಿ..ಸಡಗರ ನೂರು ತರಹ
ಬೂದಿಗೆ, ಶಿವನಿಗೆ ಕತ್ತಲೆಯೇ ಪ್ರೀತಿ...

ನಾನು ಕಾಣುವ ಜಗತ್ತು ...
ರಾಮನ ದೀಪಾವಳಿಗೆ ಮೀಸಲಲ್ಲ...
ಶಿವನ ಮೂರನೆಯ ಕಣ್ಣಿನ ಬೆಳಕು ಸದಾ ನನ್ನೊಂದಿಗೆ
ಹೇಗೆ ಹೇಳಲಿ..ನಾನು
ಮೀಸಲು ನಾ  ನಿನಗೆ ರಾಮ..
ಮನಸ್ಸ ಶಿವನಿಗೆ ನಾನೆಂದರೆ ಪಂಚ ಪ್ರಾಣ
ಅವನಿಲ್ಲದೆ ನಾನಿಲ್ಲ‌‌..‌.‌

ಇವಲ್ಲದರ ಮಧ್ಯೆ ಆತ ಕಾಡುತ್ತಾನೆ..
ಕಾಡಿ ಮಾಯವಾಗುತ್ತಾನೆ...‌
ಪ್ರೀತಿಸಲಾರೆ... ಕಾರಣ ರಾಮನಿಗೆ ನಾನು ಮೀಸಲು
ಶಿವನು ನನ್ನ ಕಾಯತ್ತಾನೆ....
ಆದರೆ ಆತನ ಕಾಟ ಖುಷಿ ಕೊಡುವುದು ಸುಳ್ಳೇ..‌.??
ಕೃಷ್ಣನ ಕಾಟವಿಲ್ಲದೆ ಬದುಕಿದ ಸ್ತ್ರೀ ಉಂಟೇ...
ಕೃಷ್ಣನಲ್ಲವೇ ಪ್ರೀತಿಯನ್ನ ಸಂಪೂರ್ಣವಾಗಿಸಿದಾತ...!!

ಮೂರನೇ ಜಾವಕ್ಕೇ ಇಂದು ಬೆಳಕು...
ದೀಪಾವಳಿಯ ಸಂಭ್ರಮ...
ಅಯೋಧ್ಯೆಯಲ್ಲಿ ರಾಮ...
ನರಕಾಸುರನ ಕೊಂದ ಕೃಷ್ಣನ ನೆನಪಿಗಾಗಿ...
ಮನಸಿನ ಗೂಡುದೀಪದ ತುಂಬಾ ಶಿವನ ಮೂರನೆಯ ಕಣ್ಣು...
ಇಂದೂ ದೀಪಾವ

Wednesday, 11 October 2017

ಗಾಂಧಿಯ ಗುಂಗಿನಲ್ಲಿ -೨( Gandhiya gunginalli -2)

ಅವತ್ತು ಉರಿ ಬಿಸಿಲು.... ಸಾಬರಮತಿ ಆಶ್ರಮಕ್ಕೆ ಕಾಲಿಟ್ಟಾಗ..‌ ಆಶ್ರಮದ ಒಳಗೆ ಕಾಲಿಡುತ್ತಿದ್ದಂತೆ ಮನದಲ್ಲಿ ಏನೋ ತುಂಬಿ ಬಂದ ಭಾವ... ಬ್ಯಾರಿಷ್ಟರ್ ಗಾಂಧಿಯ ಕಥೆ...ದಂಡಿ ಕುಟೀರದಲ್ಲಿ ಕಂಡಾಗ ಉಂಟಾದ ಕೆಚ್ಚು ಇಲ್ಲಿ ತಣಿದು ಸಾತ್ವಿಕ ಹೋರಾಟಕ್ಕೆ ಎಡೆ ಮಾಡಿಕೊಡುವ ಆ ಗಟ್ಟಿತನವನ್ನ ನೆನಪಿಸಿಕೊಂಡರೆ "ವ್ಹಾವ್" ಅನ್ನೋ ಉದ್ಗಾರ ತಾನೇ ತಾನಾಗಿ ಮೂಡಿ ಬರುವುದು...
  ಗಾಂಧಿಗಿದ್ದದ್ದು ಕನಸಲ್ಲ.‌.ಕೇವಲ ಛಲ, ಜಿದ್ದು ಅನ್ನಿಸುತ್ತೆ ನಿಜ... ಆದರೆ ಛಲ ಜಿದ್ದು ಕನಸಿಗಿಂತಲೂ ಮುಖ್ಯವಾಗಿ ಒಂದು ಹೋರಾಟ ಆಗಬೇಕಾದರೆ ಆ ಛಲಕ್ಕೆ ಜಿದ್ದಿಗೆ ಒಂದು ಪ್ರಮಾಣದಲ್ಲಿ ವ್ಯವಸ್ಥಿತ ಕೆಲಸಗಳನ್ನು ಮಾಡುವ ಬುದ್ದಿವಂತಿಕೆಯೂ ಬೇಕು...ಇಲ್ಲವಾದರೆ ಅದು ಕೇವಲ ಕೆಲವು ಉಗ್ರರಂತೆ ಕ್ಷಣ ಮಾತ್ರದ ದಂಗೆಯಾಗಿ ಉಳಿಯುತ್ತಿತ್ತು...
   ಬ್ಯಾರಿಷ್ಟರ್ ಗಾಂಧಿ...ನಮ್ಮ ನಿಮ್ಮಂತೆ ತನ್ನನ್ನ ಪ್ರೀತಿಸಿದ್ದು ನಿಜ.... ಆದರೆ ಆ ಸ್ವಪ್ರೀತಿ..ಸ್ವಾಭಿಮಾನ ಕೇವಲ ಸ್ವಂತದ್ದಾಗಿಸದೆ...ಅದು ಪ್ರತಿಯೊಬ್ಬರ ಹಕ್ಕು ಆ ಹಕ್ಕು ಸಿಗದವರಿಗಾಗಿ ಪ್ರತಿಭಟಿಸಬೇಕೆಂದು ಹೊರಟನಲ್ಲ ಅಲ್ಲಿ ಫಕೀರಪ್ಪನ ಉದಯವಾಯಿತು... ನಾನೊಬ್ಬನೇ ಮುಖ್ಯವಾಗದೆ...ನನಗಾದ ದುಃಖ,     ಅವಮಾನ..ತನ್ನಂತಿರುವ ಇತರರಿಗೂ ಆಗಬಾರದು ಅಂತ ಹೊರಡುವವ ನಾಯಕ..‌ತನ್ನ ಮಾನ ಅವಮಾನಗಳನ್ನ ಬೇರೆಯವರದಷ್ಟೇ ಸಮನಾಗಿ ಕಾಣುವವ ಫಕೀರ... ಕೇವಲ ಆ ಕ್ಷಣದ ಗೆಲುವನ್ನ ನಂಬದೇ ದೊಡ್ಡ ಗೆಲುವಿಗೆ ಸೋಲನ್ನ ನಗುತ್ತಾ ಸ್ವೀಕರಿಸುವ ಗಾಂಧಿ "ಸತ್ಯಾಗ್ರಹ" ಎಂಬಂತ ಹೊಸ ಯುದ್ಧ ಉಪಕರಣ ಸೃಷ್ಟಿಸಿದ್ದು ಸಾಧಾರಣ ಮಾತಸಗಿರಲಿಲ್ಲ...
    ದಕ್ಷಿಣ ಆಫ್ರಿಕಾದಲ್ಲಿ ಕರಿಯರ ಮೇಲಿನ ದಬ್ಬಳಿಕೆಗೆ ಯಾವುದೇ ಉದ್ರೇಕಗಳಿಲ್ಲದೆ...ನಗುತ್ತಾ ಎದುರಿಸಿದ ವ್ಯಕ್ತಿ ಜಗತ್ತಿಗೆ ಶಾಂತಿಯೂ ಯುದ್ಧ ಗೆಲ್ಲುವ ತಂತ್ರ ಅನ್ನುವ ಹೊಸ ಪರಿಕಲ್ಪನೆ ನೀಡುತ್ತಾನೆ...ಅಲ್ಲಿಯವರಿಂದ ಬೇಡವೆನಿಸಿಕೊಂಡೂ... ಅಪೇಕ್ಷೆ ಇಲ್ಲದೆ ತನ್ನ ಅಹಂ ಅನ್ನ ಮಧ್ಯೆ ತರಿಸದೆ.‌...ಕೇವಲ ಒಂದು ಸಾಮಾಜಿಕ ನ್ಯಾಯಕ್ಕಾಗಿ ಹೊಸ ಹೊಸ ಪ್ರಯೋಗ ಮಾಡುವ ಈತ ಸಾಮಾಜಿಕ ವಿಜ್ಞಾನಿ ಆಗಿ ಬೆಳೆಯುತ್ತಾನೆ... ಯಾರೂ ಯೋಚಿಸದ ಆಶ್ರಮಗಳಿಂದ ಹೊರ ಹೊಮ್ಮಬಹುದಾದ ಶಾಂತಿ, ಯುದ್ಧ ಕಹಳೆ ಎರಡನ್ನೂ ಒಳಗೊಂಡು ಮಾಡುವ ಪ್ರಯೋಗ ಇವತ್ತಿಗೆ ಬಹಳ ಸಣ್ಣದು ಅನ್ನಿಸಬಹುದು... ಆದರೆ ಆ ಯೋಚನೆಯ ತಳ ಬುಡವಿಲ್ಲದ ಆ ಕಾಲಕ್ಕೆ ಅದು ಹೊಸ ಆವಿಶ್ಕಾರವೇ...
    ತಂತ್ರಗಾರಿಕೆಯಿಂದ ಮಾತ್ರ ಯುದ್ಧ ಎಂದುಕೊಂಡ ಕಾಲದಲ್ಲಿ ಮಾತು ಕತೆ... ಜಿದ್ದು..ಛಲ ಇವೂ ಕೂಡ ಯುದ್ಧ ಕೌಶಲ್ಯಗಳಾಗಬಹುದು ಎಂದು ತೋರಿಸಿದ ಮಹತ್ಮನನ್ನ... ಬೇರೆಯವರಿಗೆ ಹೋಲಿಸುವುದು ಎಷ್ಟು ಸರಿ..???
     ಸ್ವಾತಂತ್ರ್ಯ ಹೋರಾಟಕ್ಕೆ ಸಣ್ಣ ವಯಸ್ಸಿನಲ್ಲಿ ಪ್ರಾಣ ಕೊಟ್ಟವರ ಸಂಖ್ಯೆ ಬಹಳ ಇದೆ... ಸ್ವಾತಂತ್ರ್ಯ ಚಳುವಳಿಯನ್ನ ಸಾವಿರಾರು ಯೋಧರು ನಡೆಸಿದರು..‌..ಗಾಂಧಿ ಮಾತ್ರವೇ ಸ್ವಾತಂತ್ರ್ಯ ತರಲಿಲ್ಲ ನಿಜ ಆದರೆ ಗಾಂಧಿ..‌ ತಂದಿದ್ದು ಹೊಸ ಯುದ್ಧ ಕೌಶಲ್ಯಗಳನ್ನ... ಹೊಸ ಜೀವನ ರೀತಿಗಳನ್ನ "ಅಹಿಂಸೆ", "ಸತ್ಯಾಗ್ರಹ" ಎಂಬ ಗೆಲುವಿನ ಮಂತ್ರಗಳನ್ನ...
    ಸ್ವಾತಂತ್ರ್ಯ ಕೇವಲ ಸಾವನ್ನ ಬೇಡುತ್ತೆ ಅಂದಾಗ ಒಂದಾಗದ ಯಾರೂ... ಬದುಕಿಯೂ ಸ್ವಾತಂತ್ರ್ಯ ಹೊರಾಟ ಮಾಡಬಹುದೆಂದಾಗ ಒಟ್ಟಾಗ ತೊಡಗಿದರು...ಪ್ರತಿ ಮನೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸ ತೊಡಗಿತು... ಇದು ಗಾಂಧಿಯ ವಿಶೇಷತೆ...
  ಗಾಂಧಿಯ ಬಗ್ಗೆ ಸಾವಿರಾರು ಟೀಕೆ ಟಿಪ್ಪಣಿಗಳನ್ನು ಕೇಳಬಹುದು...ಅದೇ ಆ ವ್ಯಕ್ತಿಯ ವಿಶೇಷತೆ...ಎಲ್ಲದಕ್ಕೂ ತೆರೆದುಕೊಳ್ಳುವ ಮುಕ್ತತೆ... ಇದು ದೇಶದ ಯಾವ ನಾಯಕನೂ ತನ್ನೊಳಗೆ  ಪಡೆಯದ ಮುಕ್ತತೆ... ತನ್ನನ್ನ ಎಲ್ಲರೆದುರು...ತನ್ನ ನ್ಯೂನತೆಯೊಂದಿಗೇ ಬತ್ತಲಾಗಿಸುವುದು ಮಹತ್ಮರಿಂದ ಮಾತ್ರ ಸಾಧ್ಯ... ಎಲ್ಲರೂ ತಮ್ಮ ಒಳ್ಳೆಯತನವನ್ನ ಬಿಚ್ಚಿಡಬಹುದು... ಕೆಟ್ಡದ್ದು ಅಲ್ಲಲ್ಲಿ ಇಣುಕಿದರೂ ಮುಚ್ಚಲು ಪ್ರಯತ್ನ ಮಾಡುತ್ತಾರೆ ಎಲ್ಲರೂ... ಈ ವ್ಯಕ್ತಿ ಬತ್ತಲಾಗಿ ನಿಂತ..ಮುಕ್ತತೆ ಎಲ್ಲರೊಡನೆ ಹಂಚಿ...ಟೀಕೆಗಳಿಗೆ ಗುರಿಯಾದ.... ಅದು ನಮ್ಮ ಗಾಂಧಿ...

ಇನ್ನೂ ಇದೆ..ಮಾಹತ್ಮನ ಮಾತು ಇಷ್ಟಕ್ಕೇ ಆದೀತೆ??.. ಇನ್ನಷ್ಟು ಆತನ ಬಗ್ಗೆ ತಿಳಿದುಕೊಳ್ಳೋಣ‌..ಪುನಃ ಓದೋಣ...
      
   

Friday, 29 September 2017

ಗಾಂಧಿಯ ಗುಂಗಿನಲ್ಲಿ-೧ Gandhi Gunginalli -1

ಎರಡು ವರ್ಷ ಅದೇನೋ ಹುಚ್ಚು ಕನಸು, "ಬರಿ ಮೈ ಫಕೀರ ತಾತ, ಅದ್ಹೇಗೆ ಇಡೀ ಜಗತ್ತನ್ನ ತನ್ನ ಬರೀ ಮಾತಿಗೆ ಹೆದರಿಸಿದ ಅಂತ".... ಕನಸು ಶುರುವಾದದ್ದು, ಗುಜರಾತಿನ ಗಾಂಧಿನಗರದ ದಂಡಿ ಕುಟೀರದಲ್ಲಿ.......
      ಗಾಂಧಿ ಬೆಳೆದ ರೀತಿ ಅವನ ಯೋಚನೆಗಳು, ಎಂತಹವರನ್ನೂ ಅಲಗಾಡಿಸುತ್ತೆ...... ಉಪವಾಸ,  ಸತ್ಯ ನಿಷ್ಠೆ, ವೃತಗಳನ್ನ ಒಂದು ಸಿದ್ದಾಂತದ ಮೇರೆಗೆ ತನ್ನ ಇಡೀ ಜೀವನವನ್ನ ತೆರಿದಿಟ್ಟುಕೊಂಡ ರೀತಿ ಎಲ್ಲಾ ಕನಸಿನಂತೆ ಅನ್ನಿಸಿಬಿಡುತ್ತದೆ. ಸಾಯದೇ ಇವತ್ತೀಗೂ ಚರ್ಚೆ ಆಗುವ ಫಕೀರನಿಗೆ ಕನಸುಗಳಿದ್ದವೋ ಇಲ್ಲ ದೃಢ ನಿರ್ಧಾರಗಳಿತ್ತೋ ಅಂತೂ ಯುಗಪುರುಷನಾದ....
   ನಾನು ದಂಡಿ ಕುಟೀರದಲ್ಲಿ ಕಂಡ ಆತನ ಬಾಲ್ಯ ಎಷ್ಟೂ ಸಾಮಾನ್ಯ ಅನ್ನಿಸಿದರೂ ಅಲ್ಲೆಲ್ಲೋ ಒಂದು ಬಂಡೆಯಂತಹ ಧ್ಯೇಯಗಳು ಎದ್ದು ನಿಂತು ಬಿಡುತ್ತದೆ. ಪ್ರತೀ ಧ್ಯೇಯಕ್ಕೂ ಅಷ್ಟೊಂದು ಚಿಂತನೆ ಮಾಡುವ ಸಣ್ಣ ಹುಡುಗ ಆಕ್ಷಣ ನಾಯಕನಾಗದೆಯೇ ತನ್ನೊಳಗಿನ ತುಮುಲಕ್ಕೆ ಹೊಸ ದಾರಿ ಕೊಡುವ ಯೋಗಿಯಾಗುತ್ತಾನೆ.....
      ಹರಿಶ್ಚಂದ್ರ ನಾಟಕವನ್ನ ತನ್ನೊಳಗೆ ಪ್ರಯೋಗ ಗೊಳಿಸಬೇಕೆಂಬ ಗೀಳು... ಸರಿಯಿಲ್ಲದರ ವಿರುದ್ಧ ಹೋರಾಡಬೇಕೆಂಬ ಕನಸಿಗಾಗಿ ತನ್ನನ್ನ ಮಾಂಸಾಹಾರಿಯಾಗಿಸುವ ಪ್ರಯೋಗ ಹಾಗೂ ಆ ಪ್ರಯೋಗವೇ ತಪ್ಪೆಂದು ಪ್ರಾಯಶ್ಚಿತ್ತಕ್ಕೆ ಹೊರಡುವ ಹುಡುಗನಲ್ಲಿ ಸಹಜ ನಾಯಕತ್ವದ ಗುಣಗಳಿಗಿಂತ ಸಾಮಾಜಿಕ ವಿಜ್ಞಾನಿಯ ಕುತೂಹಲಗಳು ಅಚ್ಚರಿ ಹುಟ್ಟಿಸುವಷ್ಟು ಮೆಚ್ಚುಗೆ ಪಡೆಯುತ್ತವೆ. ಏನೂ ಮಾಡಲಾಗದವನು ಎಂದು ಹಲಬುವ, ಅದಕ್ಕಾಗಿ ಸಾವಿಗೂ ಹೊರಡುವ ಈತನಲ್ಲಿಯ ದೈವತ್ವ ಗುಣಗಳು ಚಿಕ್ಕ ಹುಡುಗನಲ್ಲೇ ಹುಟ್ಟಿ ಬಂದವು ಅನ್ನಿಸುತ್ತೆ.
        ನಾವು ಕಾಣದ್ದನ್ನ ಅನುಭವಿಸದ್ದನ್ನ ನಂಬುವುದು ಅದು ನಿಮ್ಮೆದುರಿಲ್ಲದಾಗ ಯಾರಿಗೂ ಸಾಧ್ಯವಾಗುವುದಿಲ್ಲ ಅಲ್ಲವೇ,.....ಅದಕ್ಕೇ ಏನೋ ಇವತ್ತು ಆತನ ಬಗ್ಗೆ ಅಷ್ಟೊಂದು ಚರ್ಚೆಗಳು..ಅಪನಂಬಿಕೆಗಳು...... ಆದರೆ ತನ್ನ ಸಾಧ್ಯವಾಗದಿರುವಿಕೆಯನ್ನ ಸಾಧ್ಯವಾಗಿಸುವ ಆತನ ಪಯಣಕ್ಕೆ ಆತ ದಣಿದದ್ದಂತೂ ಸತ್ಯವಲ್ಲವೇ..ಅದನ್ನ  ನಾವೇಕೆ ಮರೆತು ಬಿಡುತ್ತೇವೆ???!!  ಹಾಗೆ ತನ್ನನ್ನ ಪ್ರಯೋಗಕ್ಕೆ ಒಡ್ಡುವ ಆತನೊಳಗಿನ ಆ ಹುಟ್ಟು ಯೋಗಿಗೆ... ನಮ್ಮ ಸಲಾಮಗಳನ್ನು ನೀಡುವುದರ ಬದಲು,  ಮುಂದೆಲ್ಲೋ...... ಯಾವುದೋ ಸಂಧರ್ಭದಲ್ಲಿ..ಮಾಡಿದನು ಎನ್ನಲಾದ ತಪ್ಪಿಗೇ ಕಂದಾಯ ಸಲ್ಲಿಸುವಂತೆ ಮಾಡುವುದು ಮಾನವತೆಗೇ ನಾವು ಮಾಡುವ ಅನ್ಯಾಯವಲ್ಲವೇ???!
     ಈ ಬೃಹತ್ ವ್ಯಕ್ತಿ ನನ್ನನ್ನ ಕಾಡಲಾರಂಭಿಸಿದ್ದು ಆಗಲೇ.... ಗುಜರಾತಿನ ಗಾಂಧಿನಗರದ ತುಂಬೆಲ್ಲ ಆತನ ಹೆಜ್ಜೆಗಳನ್ನು ಹುಡುಕುತ್ತಾ ನಡೆದಾಡಿದೆ...‌ ಒಂದು ಹಂತದ ಗಾಂಧಿ ಸ್ವಲ್ಪ ದಂಡಿ ಕುಟೀರದಲ್ಲಿ, ಸ್ವಲ್ಪ ಗಾಂಧಿನಗರ ಆಶ್ರಮದಲ್ಲಿ ಅನಾವರಣ ಗೊಂಡರೆ.... ಅದಕ್ಕೂ ಮೀರಿದ ಗಾಂಧಿಯು ಪೋರಬಂದರಿನ ಆಶ್ರಮ ಹಾಗೂ ವಾರ್ದಾದ ಆಶ್ರಮದಲ್ಲಿ ವಿಸ್ತಾರವಾಗುತ್ತಾ ಹೋಯಿತು.‌.
    ಸಾಮಾಜಿಕ ವಿಜ್ಞಾನಿ, ಯೋಗಿಗಳ ಜೀವನವನ್ನ ತನ್ನಲ್ಲೇ ಹೋರಾಡಿ ತಂದ ತಾತನ ಬಾಲ್ಯ ಸಾಮಾನ್ಯವೆನಿಸಿದರೂ ಸಾಮಾನ್ಯವಾಗಿರಲು ಸಾಧ್ಯವೇ??????

ಒಂದಿಷ್ಟು ಗಾಂಧಿಯನ್ನ ಓದಿಕೊಳ್ಳಣವೇ ಎಂದು ಕೇಳುತ್ತಾ ಮುಂದಿನ ಬ್ಲಾಗಿನಲ್ಲಿ ಮತ್ತೊಂದಷ್ಟು ತೆರೆದುಕೊಳ್ಳವ....

Sunday, 10 September 2017

Uttarada Neeriksheyalli (ಉತ್ತರದ ನಿರೀಕ್ಷೆಯಲ್ಲಿ)

ಆತನ ಕನಸಿಗೆ ಆಕೆಯ ಆಗಮನವೇ ಇಲ್ಲ.....

         ಆಕೆಗೆ ಅದ್ಯಾವುದೋ ಗುಹ್ಯದೊಳಗಿನ ಬದುಕಿನ ಬಗ್ಗೆ ಕನಸು... ಒಂದೊಳ್ಳೆ ನಿದ್ರೆ... ಏಳುತ್ತಿರವಂತೆ ತನ್ನ ಸುತ್ತೆಲ್ಲ ಆತನ ಘಮ..... ಆತನ ಆ ಘಮವೇ ತನ್ನ ಇಡೀ ದಿನ ಬೆಳಕಾಗಿಸುವ ಆಶಯ....ಸೂರ್ಯನ ಉದಯದಲ್ಲೊಂದು ಸುಖ, ಕೈಯ ಕಾಫಿಗೆ ಅವನ ಬಿರುಸಿನ ಮುಗುಳ್ನಗೆ.... ಬೆನ್ನ ಹಿಂದೆ ಆತನೇ ಅನ್ನುವಷ್ಟು ತನ್ನನ್ನ ಆವರಿಸುವ ಆ ಸುಖದ ನೆನಪು.... ಆತ ಸಾಯಂಕಾಲ ಬರುವವರೆಗೂ ಆತನದೇ ಗುಂಗು... ಇದವಳ ಕನಸಿನ ಬದುಕು...
        ತನ್ನತನವನ್ನ ಏನೆಂದೂ ಪ್ರಶ್ನಿಸದೆ ತನ್ನ ಪೂರ್ತಿ ಬದುಕನ್ನ ಪ್ರೀತಿಯ ಕಡಲಿನಲ್ಲಿ ಮುಳುಗಿಸುವ..... ತನ್ನ ಪ್ರೀತಿಯ ರಥ ಆತನೊಂದಿಗೆ ಏರಿ ಕಡಲ ತುಂಬೆಲ್ಲ ತನ್ನೊಳಗಿನ ಬೆಳಕ ಪಸರಿಸುವ ಒಂದು ಹುಚ್ಚು ಆಸೆ.... ನೀನು ನಾನೆಂಬುದು ಉಳಿಯದೇ ಹೆಣ್ಣೊಳಗಿನ ಗಂಡಾಗಿ... ಗಂಡೊಳಗೆ ಬೆರತ ಹೆಣ್ಣಾಗಿ ಹೊಸ ಕನಸ ಕಾಣುವ ಹೆಬ್ಬಯಕೆ....... ಕೈಗೆ ಆತ ಸಿಗದೇ ಹೋದರೂ ಹೃದಯಲ್ಲೇ ಪ್ರತಿಷ್ಟಾಪನೆಗೊಂಡು.... ಉಸಿರಲ್ಲೆಲ್ಲಾ ಆತನನ್ನ ಅನುಭವಿಸುವ ಅಧ್ಯಮ್ಯ ಬಯಕೆ ಆಕೆಗೆ......
          ಬದುಕು ಆಕೆಗೋ ನಿತ್ಯದ ನಡೆ. ಹಗಲೆಲ್ಲ ಆತನ ಎಚ್ಚರವಾದಾಗಿನ ನಿರಾಳತೆಯಿಂದ ಶುರುವಿಟ್ಟುಕೊಂಡು ರಾತ್ರಿ ಮುಚ್ಚಿಹೋಗುವ ಕಣ್ಣಿನೊಳಗೊಂದು ತನಗೆ ಜಾಗ ಇದೆ ಎಂದುಕೊಳ್ಳುತ್ತಾ ಸುಖ ನಿದ್ದೆಗೆ ಜಾರುವ ಆ ಕ್ಷಣಗಳನ್ನ ಕಾಯುವ ಕನಸು ರಾತ್ರಿಯೆಲ್ಲ..... ತನ್ನನ್ನೂ ಮರೆತು ಆತನ ಬೆರಳೊಳಗೆ ತನ್ನ ಇಡೀತನವನ್ನ ಕರಗಿಸುವ ಹುಚ್ಚು ಆವೇಶಗಳು ಮಧ್ಯಾಹ್ನನದ ಉರಿ ಬಿಸಿನಲ್ಲಿದ್ದರೆ, ಸಾಯಂಕಾಲದ ತಂಪಿನಲ್ಲಿ ಆತನ ಎದೆಯಲ್ಲಿ ಕಳೆದುಹೋಗುವ..ಕಣ್ಮಚ್ಚಿನಲ್ಲೇ ಆತನೊಡನೆ ಸುಮ್ಮನೆ ಮಾತನಾಡುವ ತಣ್ಣನೆಯ ಬಯಕೆ... ರಾತ್ರಿ ವೇಳೆಯಲ್ಲಿ ಸುಸ್ತಾದ ಆತನನ್ನ ತನ್ನ ಎದೆಯೊಳಗೆ ಹುದುಗಿಸಿ..ಹೊಸ ಜೀವವಾಗಿಸುವ ಚಿಗುರುತನ....
     ಕೈಗೆ ಸಿಗದ ಹುಚ್ಚು ಕುದುರೆ ಆತನ ಓಟಗಳೋ ಅವಳಿಗೆ ಸೋಜಿಗ..ಯಾಕೆ ಓಡುತ್ತಾನೆ ಎಲ್ಲಿ ನಿಲ್ಲುತ್ತಾನೆ!!... ಆತನಿಗೇಕೆ ತನ್ನಂತಹ ಹಸಿ ಬಿಸಿ ಕನಸುಗಳಿಲ್ಲ!!!... ಸಣ್ಣಪುಟ್ಟ ಕನಸುಗಳು ಸಾಲದೆ ಬದುಕಿಗೆ??!?... ನೂರು ಜನ ಓಹೋ ಅಂದರಷ್ಟೇ ಬದುಕೇ!!!?? ಮಗುವಾಗಿದ್ದಾಗ ತಾನು ನಕ್ಕರೆ ಸಾಕು ಇಡೀ ಮನೆ ನಗುತ್ತಿತ್ತು...‌‌ ಈಗ ಇವನಿಗೆ ತನ್ನ ಮುಗುಳ್ನಗುವಿನಲ್ಲೂ ಯಾಕೆ ಬೇರೆ, ಬೇರೆ ಅರ್ಥ ಕಾಣಿಸುತ್ತೆ??!? ಆತನ ಸುತ್ತ ತನ್ನ ಕನಸುಗಳಿದ್ದರೆ ಆತನಿಗೇಕೆ ಸೋಜಿಗ‌‌‌...???? ಇತರರ ಹೊಟ್ಟೆ ಉರಿಸಿದರಷ್ಟೇ ತಾ ಗೆದ್ದೆನೆಂಬ ಭಾವ ಅವನಿಗ್ಯಾಕೆ??? ಆತನ ಕಣ್ಣಿನಲ್ಲಿ ಕಂಡ ಬೆಳಕನ್ನೇ ಜಯ ಎಂದು ತಾನು ಭಾವಿಸುವುದಿಲ್ಲವೇ!!?? .....
      ಯಾಕೋ ಪ್ರಶ್ನೆ ಆಗಿಬಿಟ್ಟಿದೆ ಜೀವನ ..ಇವನ್ನನ್ನ ಕನಸಾಗಿಸಿಕೊಂಡ ಮೇಲೆ. ಇದಕ್ಕೂ ಮುಂಚೆ ತನ್ನ ಬದುಕು ನಗುವಾಗಿತ್ತು, ಕನಸಾಗಿತ್ತು.... ಕನಸು ಈತನಾದ... ಎಲ್ಲಾ ಪ್ರಶ್ನೆಯಾಯಿತು. ಉತ್ತರವೆಂದು ತನ್ನದಾಗುವುದೋ !!!! ಕಾಯುವ ಕಾಯಕ....ಕನಸ ಹೊತ್ತವಳಿಗೆ
ಆತನ ಕನಸಿಗೆಂದು ಆಕೆಯ ಆಗಮನ??!!!! ಅರಿಯದ ಪ್ರಶ್ನೆ!!
         

Saturday, 19 August 2017

Guruthina bikkattu.... Kanasugala kadiyuvikeyu...... (ಗುರಿತಿನ ಬಿಕ್ಕಟ್ಟು...ಕನಸುಗಳ ಕದಿಯುವಿಕೆಯೂ..).

"ಕೇರಳದಲ್ಲಿ ನಾಲ್ಕು ಮಕ್ಕಳ ಸಾವು -ಬ್ಲೂ ವೇಲ್ ಆಟದ ಜಾಲದಲ್ಲಿ". ಶೀರ್ಷಿಕೆ ನೋಡಿ, "ಇದ್ಯಾಕೆ ಹೀಗೆ?, ನಾವು ಕಂಡ ಕನಸುಗಳಿಗೆ ಮಕ್ಕಳು ಕೊಡುವ ಉತ್ತರ ಇದೋ!!" ಅಂತ ಎಸ್ ಎಮ್ ಎಸ್ ಮಾಡಿದರು ಸ್ನೇಹಿತರೊಬ್ಬರು.
          ನನಗೇನು ಬೇಕು?? ಅರ್ಥವೇ ಆಗದ ಮನಸ್ಸು ನಮ್ಮದೆಲ್ಲರದ್ದೂ.... ಕನಸು ಕನಸಾಗೇ ಇರಲಿ ಇಲ್ಲ ನನಸಾಗಲಿ ಅದಕ್ಕೊಂದು ಘನತೆ ಬೇಕಲ್ಲವೇ? ಆದರೆ ಇತ್ತೀಚಿಗೆ ಕದಿಯುವುದೇ ಮುಖ್ಯವಾಗಿದೆ. ಹೆಚ್ಚಿನವರಿಗೆ ಒಂದು ಕನಸನ್ನ ತನ್ನದಾಗಿಸಿಕೊಳ್ಳಲೂ ಕೂಡ..... ಇನ್ನೊಬ್ಬರ ಕನಸನ್ನ ಕದಿಯುವ ಕೆಲಸ. ಅಯ್ಯೋ ಇದು ಪ್ರೇಮ ಪ್ರೀತಿಗೆ ಸಂಭಂದಿಸಿದ ಕದಿಯುವಿಕೆ ಅಲ್ಲಾರಿ.... ನಾನು ಹೇಳ ಹೊರಟಿರುವುದು- ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಉನ್ನತಿಗಾಗಿ ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ತಮ್ಮ ನಾಳೆಗಾಗಿ ಕಟ್ಟುವ ಕನಸನ್ನ ಕದಿಯುವ ಬಗ್ಗೆ.
   ತಮ್ಮ ತಮ್ಮ ಕ್ಷಮತೆಗಳಿಗನುಸಾರವಾಗಿ ಪ್ರತಿಯೊಬ್ಬರೂ ಒಂದು ಯೊಜನೆ, ಕನಸನ್ನ ತಾವು ಮಾಡುವ ಕೆಲಸಕ್ಕೆ ಕಟ್ಟಿರುತ್ತಾರೆ...ಕನಸುಗಳು, ಯೊಜನೆಗಳು ಅವರವರ ಶಕ್ತ್ಯಾನುಸಾರವೇ ಇದ್ದೀತು. ಇನ್ನೊಬ್ಬರ ಕನಸುಗಳನ್ನ ಕದ್ದರೆ ಅದರ ಅನುಷ್ಠಾನ ಇವರಿಂದ  ಹೇಗಾದೀತು???!!
   ಮನುಷ್ಯರೆಲ್ಲರಿಗೂ ತಾನು ದೊಡ್ಡವನಾಗಬೆಕೆಂಬ ಹಂಬಲ ಸಹಜ, ಆದರೆ  ಇನ್ನೊಬ್ಬರಿಗೆ ಕಣ್ಣೀರು ತರಿಸಿ ತಮ್ಮ ಕನಸನ್ನ ನನಸಾಗಿಸುವ sadism  ಹೆಚ್ಚಿನವರಲ್ಲಿ... ನಾನು ಮೇಲೇಳಬೇಕಾದರೆ ಇನ್ನೊಬ್ಬರನ್ನ  ತುಳಿಯಬೇಕೆಂಬ ಆಶಯ ಇರುವುದು, ತನ್ನದಾದ ಯಾವುದೇ ವ್ಯಕ್ತಿತ್ವ ಇಲ್ಲದ ಪರಾವಲಂಬಿ ಜೀವಿಗಳಿಗೆ. ವ್ಯಕ್ತಿಯನ್ನ ವ್ಯಕ್ತಿಯ ಸಮಗ್ರತೆ.. ಆತನ ಕೌಶಲ್ಯ... ಆತನದೇ ವ್ಯಕ್ತಿತ್ವದ ಹೊರತಾಗಿ, ಕೇವಲ ಆತನ ಹೊರವಲಯದ ಪ್ರದರ್ಶನವನ್ನ.‌‌... ಆತನ ತೆಳುಪದರದ ಇವತ್ತನ್ನ....ಆತನ ಆರ್ಥಿಕ ಡಾಂಬಿಕತೆಯನ್ನ ಯಾವತ್ತು ಈ ಭೌತಿಕ ಸಮಾಜ ದೊಡ್ಡದೆಂದು ಗಮನಿಸಿತೋ, ಅಂದೇ "ಕದಿಯುವಿಕೆ" ಹೊಂದುವಿಕೆಯಾಗಿ ಬದಲಾವಣೆಗೊಂಡಿತು. ಕಳ್ಳತನ....ಸ್ಮಾರ್ಟ್ ವ್ಯಕ್ತಿತ್ವವಾಗಿ ಬದಲಾದ್ದದ್ದು ಇವತ್ತಿಗೆ ಚರಿತ್ರೆ.
    "ಗುರುತಿನ ಬಿಕ್ಕಟ್ಟು"..... ಇದೊಂದು ವ್ಯವಸ್ಥಿತ ರೋಗವಾಗಿ ಸಮಾಜದೆಲ್ಲೆಡೆ ಮುಂದುವರಿಯುತ್ತಿದೆ. ತನ್ನನ್ನ ಪ್ರತಿಯೊಬ್ಬರೂ, ಪ್ರತಿ ಸಂದರ್ಭದಲ್ಲಿ ಗುರುತಿಸಲಿ ಎಂಬ ಹುಚ್ಚು ಹಂಬಲವೇ ಈ ಗುರುತಿನ ಬಿಕ್ಕಟ್ಟು ಕಾಯಿಲೆಯ ಲಕ್ಷಣಗಳು. ಇದೇ "ಬ್ಲೂ ವೇಲ್ " ಅಂತ ಭಯಾನಕ ಜಾಲತಾಣದ ಆಟಕ್ಕೂ ಮುನ್ನುಡಿ..ನಮ್ಮಲ್ಲಿಲ್ಲದ ನಮ್ಮನ್ನ ಬಯಸುವುದು ಅತೀ ಆಸೆಯಲ್ಲವೇ
      Sadism, ಗುರುತಿನ ಬಿಕ್ಕಟ್ಟು, ಟೊಳ್ಳಾದ ವ್ಯಕ್ತಿತ್ವ, ಕನಸನ್ನ ಕದಿಯುವುದು ಇದೆಲ್ಲಾ ನಮ್ಮೊಳಗಿನ ಸಮಗ್ರತೆ ಕಳೆದುಕೊಂಡ ದಿನವೇ ನಾವು ಹುಟ್ಟುಹಾಕಿದ ರಾಕ್ಷಸರು. ಬೇಕುಗಳೇ ದೊಡ್ಡದಾಗಿ, ಢಾಂಬಿಕತೆಗೆ ಕನಸನ್ನ ಮಾರಿದ ಸಾಮಾಜದ ಅಡ್ಡ ಪರಿಣಾಮಗಳು. ಭೌತಿಕತೆ, ಕೌಶಲ್ಯವನ್ನ ಮೆಟ್ಟಿ ನಿಂತ ದಿನ ನಾವೆಲ್ಲ ವ್ಯವಸ್ಥಿತವಾಗಿ "ಗುರುತಿನ ಬಿಕ್ಕಟ್ಟು" ಕಾಯಿಲೆಗೆ ನಮ್ಮ ಮನ,ಮನೆಗಳಲ್ಲಿ ಜಾಗ ಮಾಡಿಕೊಟ್ಟೆವು...‌‌‌..
      ಬದುಕನ್ನ.. ನಮ್ಮವರನ್ನ ಉತ್ಕಟವಾಗಿ ಪ್ರೀತಿಸುವ ನಮ್ಮ ಒಳಗಿರುವ ಸಂತೋಷವನ್ನ ನಮ್ಮದಾಗಿಸಿದರೆ ಸ್ಥಿತಪ್ರಜ್ಞೆ ತಾನೇ ತಾನಾಗಿ ನಮ್ಮದಾದೀತು....
     ನಮ್ಮ ಬದುಕನ್ನ .‌..ನಮ್ಮ ಕನಸನ್ನ ಪ್ರೀತಿಸುವ ಸಂತೋಷ ನಮ್ಮದಾಗಲಿ....

Friday, 11 August 2017

Malae...... Sidileragida kanasugala naduve (ಮಳೆ...ಸಿಡಿಲೆರಗಿದ ಕನಸುಗಳ ನಡುವೆ)

ಬೋರೆಂಬ ಮಳೆ ಮನೆಯ ಸುತ್ತ....
ಮನದ ತುಂಬಾ ಕವಿದ ಮೋಡ ..ಬೋರೆಂದು
ಸುರಿಯುತ್ತತ್ತು ಹೃದಯದ ತುಂಬೆಲ್ಲ
...,.........
ಕಣ್ಣಿನಿಂದ ಇಳಿದ ಮಳೆ ಮಡಿಲ ತುಂಬಾ
ಮೋಡ ಸಿಡಿಲು ಊರಲ್ಲೆಲ್ಲ...........
ಕನಸು ಕೊಂದ ಸಿಡಿಲ ..ನೆನೆಯುತ್ತಾ
ಇಳಿದಿತ್ತು ಮಳೆ ಕಣ್ಣಿನಿಂದ‌.....

ಆ ಒಂದು ಕ್ಷಣ....ಒಂದೇ ಕ್ಷಣ....
ಎಲ್ಲಾ ನೆಡೆ ಹುಸಿಯಾಗುತ್ತು...
ಭವಿಷ್ಯದ ಆಸೆ, ಕನಸುಗಳ...ಹೊತ್ತ
ಧೃಡ ನಡೆಗೆ ಗರ ಬಡಿದಿತ್ತು....
ಸ್ವಾವಲಂಬನೆಯ ನೆಡೆ ಚೂರಾಗಿತ್ತ...
ವ್ಯಾಘ್ರದ ಕಣ್ಣಲ್ಲಿ........
"ಹುಡುಗಿ" ಕಾಣಬಾರದೇ ಕನಸನ್ನೂ...

ದೇಹಕ್ಕಾ ದುರಾಸೆ?!?!  ಮನಸ್ಸಿಗಾ ವ್ಯಾಘ್ರತನ??
ಗಂಡೆಂಬ ಅಹಂಕಾರವಾ!?? ಹೆಣ್ಣೆಂಬ ತಾತ್ಸಾರವಾ?
ಒಂದು ಕ್ಷಣದ ಭಿಭಿತ್ಸ ಆಸೆಗಾ...
ವರ್ಷಗಳಿಂದ ಮನದೊಳಗೇ...ಕೂಡಿಟ್ಟ
ಕಾಮನಬಿಲ್ಲಂತ ಆಸೆಗಾ ಕೊಡಲಿ ಏಟು?!?

ಅತ್ಯಾಚಾರ...ಕಾಮನೆ..ಇಲ್ಲ ಭಿಭಿತ್ಸ ಪ್ರೀತಿ‌...
ಹೆಸರೇನೇ ಇರಲಿ......
ಹುಡುಗಿಯ ಮನದ ಕನಸೆ ಚದುರಿ ಹೋಯಿತಲ್ಲ
ಭಯದ ಕಾರ್ಮೋಡ ಎಲ್ಲೆಲ್ಲೂ......
ಇನ್ನಿರುವುದು ಬರೀ ಕತ್ತಲಿನ ಭಯ!!!
ಸಿಡಿಲಿನ ಆರ್ಭಟ, ಮಳೆಯ ನೋವು....

ಮೊದಲಿಂದಲೂ ಆಕೆಗೆ ಮಳೆ..ಉತ್ಸಾಹ ಪ್ರೀತಿ
ಕನಸು ಕಟ್ಟುವ..ಪುಳಕಗಳನ್ನ ತನ್ನ ಸುತ್ತೆಲ್ಲ ಸುರಿಸುವ
ಹೆಣ್ಣು....ಹೆಣ್ಣಾದ ಒಂದೇ ಕಾರಣಕ್ಕೆ ...
ಮಳೆ ಇಂದು ನೋವು...ದುಃಖದ ಪ್ರತೀಕ...
ಕಣ್ಣು, ಮನೆ, ಮನ ಎಲ್ಲಾ ಬರೀ ಮಳೆ...
ಮಳೆಯೇ ಅದು ಎಲ್ಲೆಲ್ಲೂ.....
ಸಿಡಿಲೆರಗಿದ ಕನಸುಗಳ ನಡುವೆ....

ಇವತ್ಯಾಕೋ ಕವಿತೇನೇ ಬರೀಬೇಕು ಅನ್ನಿಸಿತ್ತು... ಓದಿಕೊಳ್ಳುತ್ತಿರಲ್ಲ‌........
ಇನ್ನೆರಡು ವಾರ ಕವಿತೆ ಬರೆಯುವ ಹಂಬಲ..

Thursday, 27 July 2017

Baduka mithi sakenisida krishne.... Baduka nadesuva krishnanondige (ಬದುಕ ಮಿತಿ ಸಾಕೆನಿಸಿದ ಕೃಷ್ಣೆ... ಬದುಕ ನಡೆಸುವ ಕೃಷ್ಣ ನೊಂದಿಗೆ)

ಕನಸುಗಳು ಕರಕಲಾಗಿದೆ ಗೆಳೆಯ, ಈಗ ಬೇಕೆನಿಸುವುದು...ಪಕ್ಕದಲ್ಲಿದ್ದವರ ಆಹಾ ಕಾರ ಮಾತ್ರ ಎಂದಳು ಇಂದಿನ ದ್ರೌಪದಿ.

 ಸಂವೇದನೆಗಳನ್ನು ಹೆಣ್ಣಾಗಿ ನೀನೇ ಕಳೆದುಕೊಂಡರೆಂತು? ಜಡವಾಗಬೇಡ. ಜಗದ ಗೊಡವೆಗೆ ಬೆನ್ನು ಹಾಕಿದರೆ ನಾವು ಜೊತೆಯಾದ ಸಂಭ್ರಮಕ್ಕೇನು ಸುಖವಿದೆ? ಎಂಬುದು ಆಕೆಯ ಯಾವತ್ತೂ ಸ್ನೇಹಿತ ಕೃಷ್ಣ ಉವಾಚ.

ಸಂವೇದನೆಗಳಿಗೂ ಹೆಣ್ಣು ಗಂಡೆಂಬ ಭೇದವೇ ಕೃಷ್ಣ??

"ಸಹಜ ಕಣೇ..ನಿನಗೆ ಬೇಸರವಾಗಿದೆ ನಿಜ... ಆದರೆ, ಮಗುವಿನ ನವಿರು ಹೆಣ್ಣು ಅನುಭವಿಸಿದಷ್ಟು ಉತ್ಕಟವಾಗಿ ಗಂಡನ್ನು ಸೋಂಕೀತೆ? ಸ್ಪಲ್ಪ ಯೋಚಿಸು... ನೀನು ಬೆನ್ನು ಹಾಕಿ ನಡೆದರೆ ಸೃಷ್ಟಿಗೆಲ್ಲಿ ಕನಸಿದೆ ಗೆಳತಿ???!!" ಕೃಷ್ಣನಿಗೆ ಜಗ ನಡೆಸಬೇಕು.. ದ್ರೌಪದಿ ಇಲ್ಲದ ಮನುಕುಲ ಆತನ ಮನಸ್ಸಿಗೆ ಬಾರದು.

ಮಗುವಿನ ನವಿರು ಅನುಭವಿಸುವ ಅನಿವಾರ್ಯತೆ ಹೆಣ್ಣಿಗಲ್ಲವೇ..ನೀನದನ್ನ ಬೇಕೆಂದೇ ನನ್ನ ಮೇಲೆ ಹೇರಿರುವೆಯಾ ಜಗದೊಡೆಯಾ?? ದ್ರೌಪದಿಯ ಪ್ರಶ್ನೆ ಸಮಯೋಚಿತ

ಇಲ್ಲ ದ್ರುಪದ ಕುವರಿ ನಿನ್ನದು ಬಹಳ ದೊಡ್ಡ ಸ್ಥಿತಿ.... ಗುಣಮಟ್ಟದ ಮನುಷ್ಯರ ಯಾದಿಯಲ್ಲಿ ನಿನ್ನ ಹೆಸರಿದೆ. ಸ್ವಹಿತವನ್ನು ಮೀರಿ ನೆರೆಹೊರೆ ನಿನ್ನಿರವನ್ನು ಬೇಡುತ್ತದೆ. ನಿನ್ನ ಸಂವೇದನವಿಲ್ಲದೆ ನಾವು ಉಸಿರಾಡಲೂ ಸಾಧ್ಯವಿಲ್ಲ ಕಣೇ... ಕೃಷ್ಣನಿಗೆ ಪ್ರೇಯಸಿಯರ ಸಾಲೇ ಇದ್ದರೂ ಕೃಷ್ಣೆ ಇಲ್ಲದೆ ಆತ ಯೋಜನೆಗಳ ಯೋಚಿಸಲಾರ.

ತಾನಿನ್ನೂ ಬದುಕ್ಕಿದ್ದೇನೆ ಎಂದು ನೀರೂಪಿಸಲು ಬೇಕು ಹೆಣ್ಣಾದ ನನಗೆ ಮಗುವೆಂಬ ಕವಚ....ಅದ್ದಕ್ಕಲ್ಲವೇ ಪ್ರತಿ ಹೆಣ್ಣು ಮಗುವನ್ನ ಪುರ್ಣ ನವಿರಾಗಿ ಅನುಭವಿಸುವುದು

ಕೃಷ್ಣ ಬಹಳ ಬುದ್ದಿವಂತ..ಅದಕ್ಕೆ ಅವನು ಸೋಲುತ್ತಾನೆ.... "ಹೋಗಲಿ ಬಿಡು. ನಾನೇ ಪಟ್ಟು ಸಡಿಲುಸುತ್ತೇನೆ ಅಥವಾ ನೀನೆ ಸಡಿಲಿಸಿದೆ ಎಂದು ಬೀಗು. ನಾಳೆ ತರಾತುರಿಯಲ್ಲಿ ಸೀರೆ ನೆರಿಗೆ ಸಿಕ್ಕಿಸಿಕೊಳ್ಳುವಾಗ ನನ್ನನೊಂಚೂರು ನೆನಪಿಸಿಕೊಳ್ಳೆಯಾ? ನಿನ್ನ ಸೀರೆಗೂ ನನಗೂ ನಂಟುಂಟು ಗೆಳತಿ..‌"

ಸೀರೆಗೆ ನೆರಿಗೆ ಹಾಕುವಾಗ ನೆನಪಾಗುವುದು, ಸೀರೆ ಜಗ್ಗಿ ತನ್ನಡೆ ಸೆಳೆದ ಪುಟ್ಟ ಕಂದಮ್ಮ...ನಾನೂ ಎಲ್ಲರಂತೆ...ದೇವರಾಗಬಯಸುತ್ತೇನೆ... ಅದಕ್ಕೆ ಎಡೆ ಮಾಡಿದ್ದು ನನ್ನ ಆ ಕಂದಮ್ಮ ನೀನಲ್ಲ... ನೀನು ನನ್ನ ದೀನಳಾಗಿಸಿದೆ ಜಗದೊಡೆಯ.. ಅದಕ್ಕೇ ನನ್ನ ಮನಸ್ಸ ತುಂಬಾ ನನ್ನ ದೇವರಾಗಿಸಿದ ಕಂದಮ್ಮ ತುಂಬಿರುತ್ತದೆ ..‌ ಅನ್ನುತ್ತಾಳೆ ಇಂದಿನ ದ್ರೌಪದಿ. ಗಂಡಸು ಯಾರೇ ಆದರೂ, ಯಾಕೇ ಆದರೂ,  ಪಟ್ಟು ಸಡಲಿಸಿದಾಗ ಸಿಗುವುದು .. ಇನ್ನೂ ಬದುಕಬೇಕೆಂಬ ತುಡಿತವಲ್ಲ.‌..ಮುಗಿದು ಹೋಗಲಿ ಎಂಬ ಹತಾಶೆ..

 ದ್ರೌಪದಿಯ ಹತಾಶೆ ಸಹಿಸದಾದ ಜಗದೊಡೆಯ‌.‌‌ ಅನ್ನುತ್ತಾನೆ ಆತ, ನಾನೂ ಮಗುವಾಗುತ್ತೇನೆ. ನೀನು ಹೊರದೆ, ಹೆರದೆ. ಆದರೆ ನೀನು ನನ್ನ ತೊದಲನ್ನೇ ‌‌ಅರ್ಥೈಸಿಕೊಳ್ಳುತ್ತಿಲ್ಲವಲ್ಲ ಗೆಳತಿ...

"ಇದೇ ನೋಡು..ಹೆಣ್ಣಿನ ಸಂಕಟ, ಪ್ರತಿಯೊಬ್ಬರೂ ಆಕೆಯಲ್ಲಿ ಮಗುವಾಗ ಬಯಸುತ್ತಾರೆ...ಆದರೆ..ನನ್ನ ಕಂದಮ್ಮನಂತೆ..ನನ್ನಲ್ಲಿ ಬೆಳೆದು...ನನ್ನ ಬೆಳೆಸುವುದಿಲ್ಲ...ತೊದಲ ಆಡುತ್ತಾ ನನ್ನ ಮಾತನ್ನ ಕಸಿಯಲಷ್ಟಕ್ಕೇ ಗಂಡಸರ ಮಗುತನ ಮೀಸಲು. ನಾನು ಎತ್ತಹೋದರೇನು!! ಸಾಕಾಗಿದೆ ಕೃಷ್ಣ, ನನ್ಯಾಕೆ ಬದುಕಾದೆ..ನಾನ್ಯಾಕೆ ಹೆಣ್ಣಾದೆ ಅನ್ನಿಸುವಷ್ಟು....ಕಾಡುತ್ತವೆ ಈ ತೊದಲುಗಳು ನನ್ನ.. ಬಿಡಿಸಯ್ಯ ನನ್ನ ಬಂಧ" ದ್ರೌಪದಿ ಕನಲಿ ಕೇಳುತ್ತಾಳೆ ಕೃಷ್ಣನನ್ನ.

ಏನು ಮಾಡೋಣ ಹೇಳು. ಅದು ಗಂಡಿನ ಮಿತಿ ಗೆಳತಿ. ಇವತ್ತೂ ನೀನಲಿಯುವ ಲಕ್ಷಣಗಳಿಲ್ಲ. ಹೋದ ಜೀವಗಳ ಅರೆಕ್ಷಣ ನೆನೆದು ಮನುಕುಲವನ್ನೊಮ್ಮೆ ಪ್ರಾರ್ಥಿಸೋಣ: ಸಾಯಬೇಡಿ, ಸಾವು ತಾನಾಗಿ ಬರುವವರೆಗೂ. ಕೃಷ್ಣನಿಗೆ ಬದುಕನ್ನ ಬೆಳೆಸುವ ಯೋಚನೆ ಮಾತ್ರ...‌

ಮಿತಿಗಳಿಗೆ ಮೀರಿದ ಬದುಕಿದೆ ಎಂದಾದರೆ ಮಾತ್ರ ಸಾಯಲು ಓಡಬಾರದೆಂಬ ತುಡಿತ ಸಾಧ್ಯ, ಗೆಳೆಯ...ಇಲ್ಲವಾದರೆ, ಬದುಕಿನಾಚೆಯ ಮಿತಿಯಿಲ್ಲದ ಬದುಕಿಗೇ ತುಡಿತ..ಆಗಲೆಲ್ಲ ಸಾವು ಅಪಮಾನ್ಯ. ಸಾವು ತಾನಾಗಿಯೇ ಬರುವವರೆಗಿನ ಮಿತಿಯ ಜೀವನಕ್ಕೆಲ್ಲಿ ಅರ್ಥ??. ಸಾವಲ್ಲಾದರೂ ನನ್ನತನವಿರಲಿ, ಮಿತಿ ಇಲ್ಲದಿರಲಿ ಎಂಬ ತುಡಿತ ತಪ್ಪೇ.. ದ್ರೌಪದಿ ಸೆಟೆದು ಕೇಳುತ್ತಾಳೆ ಜಗದೊಡೆಯನ್ನನ್ನ.

ಇಲ್ಲ ಕೃಷ್ಣೆ ಗಂಡಸರಲ್ಲಿ ಹೆಚ್ಚಿನವರು ಬದುಕಿಗೆ ಬೆನ್ನು ಹಾಕಿದವರು, ಬದುಕ ಓಟ್ಟಕ್ಕೆ ಹೆದರಿ ನಿನ್ನಲ್ಲಿ ಮಗುವಾಗ ಬಯಸಿದವರು. ನಾನು ಮಾತ್ರ ನೀನು ಎಂದಿಗೂ ಬೆನ್ನು ಹಾಕಿದರೂ ಅದರಲ್ಲೂ ನನಗೇನೊ ತೋರಿಸಹೊರಟಿರಬೇಕಿವಳು ಎಂದು ನಂಬಿರುವ ಆಶಾವಾದಿ. ಬದುಕ ಮನ್ನಿಸು ಹುಡುಗಿ...ನಡೆ ಮುಂದೆ..ನಡೆ ಜಗದೊಡೆಯನ ಜೊತೆ... ನೀನಲ್ಲದೆ ಇನ್ಯಾರು ಬದುಕ ಪ್ರೀತಿಸ ಬಲ್ಲರು ಕೃಷ್ಣೆ... ಬಾ ನನ್ನೊಡನೆ ಇದೆ ಆಸೆ..

ಎಳೆದು ನಡೆಯುತ್ತಾನೆ ಜಗದೊಡೆಯ....ಕೃಷ್ಣ ನಲ್ಲದೆ ಇನ್ಯಾರು ಪ್ರಿಯ ಸ್ನೇಹಿತರಿದ್ದಾರೆ?! ಹೆಣ್ಣು ಮಗಳು ಆಕೆ ದ್ರೌಪದಿ.. ಕರೆದಾಗೆಲ್ಲ ಓಗೊಟ್ಟ ಆತನ್ನನ್ನ ಬಿಟ್ಟು ನಡೆಯಲಾದೀತೆ?! ಜಗದೊಡೆಯನೊಂದಿಗೆ ಜಗಳ ಸಾಧ್ಯ.. ಆದರೆ ಕೈ ದೂಡಿ ನಡೆದರೆ ಇನ್ಯಾರು ಇರುವರು ಆಕೆಗೆ??? ನಿಟ್ಟುಸಿರಿನೊಂದಿಗೆ ಆಸೆಯ ಕನಸನ್ನ ಪುನಃ ಒಗ್ಗೂಡಿಸುತ್ತಾ ನಡೆಯುತ್ತಾಳೆ ಕೃಷ್ಣೆ, ಜಗದೊಡೆಯ ಕೃಷ್ಣ ನೊಂದಿಗೆ...‌

Tuesday, 18 July 2017

ಆಶಾವಾದವೆಂಬ ಹಮ್ಮು...

ಈ ವಾರ ಬದುಕಿನ ಬಗ್ಗೆ...ಹೊರಾಟದ ಬಗ್ಗೆ ಬರೆಯೋಣ ಅಂದುಕೊಳ್ಳುತ್ತಿರುವಾಗಲೇ... ಸ್ನೇಹಿತರೊಬ್ಬರ SMS ಬಂತು "ನನ್ನ ನೆರೆಯೂರಲ್ಲಿ ಕುಟುಂಬಕ್ಕೆ ಕುಟುಂಬವೇ ತನ್ನನ್ನು ತಾನು ಕೊಂದುಕೊಂಡಿದ್ದರ ವಿಷಾದ ನನ್ನೆದೆಯಲ್ಲಿನ್ನೂ ಪಸೆಯಾರದೆ ಉಳಿದಿದೆ. ಯಾರ ಬದುಕಾದರೂ ಬದುಕಲಾರದಷ್ಟು ಕಷ್ಟವೇನೇ ಗೆಳತಿ?"
     ನನ್ನೊಳಗಿನ ಲಾವಾರಸ ಉಕ್ಕ ತೊಡಗಿತು...
     ನೆಲೆ ಸಿಗದ ಹೋರಾಟ...ಅದರ ವಿಷವೇ ಹೆಚ್ಚು ಎಲ್ಲರ ಜೀವನದಲ್ಲಿ...  ಬದುಕಲು ಬೇಕು ಎಲ್ಲರಿಗೂ ಒಂದು ಕನಸು..ಅದೇ ಗೋಜಲಾದರೆ!!!??!
      ಇತ್ತೀಚಿಗಂತೂ ಜೀವನಕ್ಕೇನು ಬೇಕು ತಿಳಿಯದ ದಡ್ಡತನ ಎಲ್ಲರಲ್ಲೂ.. ಸುಮ್ಮನೆ ಕಾಣದ ಜಿಂಕೆಯ ಹಿಂದೆ ಎಲ್ಲರ ಓಟ, ಯಾವ ಸೀತೆಯ ಆಸೆಗೆ ಯಾವ ರಾಮನ ಹೋರಾಟವೋ ಒಂದೂ ತಿಳಿಯದು ??
      ಬದುಕಿನ ಸಿಕ್ಕು ಸಿಕ್ಕಾದ ದಾರದುಂಡೆಗೆ ಬೇಕು ಸಂತೋಷವೆಂಬ ಬೆರಳುಗಳ ಮಾಂತ್ರಿಕ ಸ್ಪರ್ಶ ಹಾಗು ಅದರಿಂದ ಒಂದು ಸುಂದರ ಕಸೂತಿಯಾಗಬೇಕು...ಇವೆಲ್ಲ ಬೆಳಗು ಹರಿಯುವುದರೊಳಗೆ ಆದೀತೆ‌??....ಖಂಡಿತ ಇಲ್ಲ... ಕಸೂತಿ ಆಗಲು ಕಾದಂತೆ ಕಾಯಬೇಕು ನಾಳೆಗಳ ಸೌಂದರ್ಯದ ನಿರೀಕ್ಷೆಯಲ್ಲಿ....
         ಆದರೆ ನಾವೀಗ ಜಡವಾಗಿದ್ದೇವೆ ಯಾರ ಸಾವೂ ಕಲಕಲಾರದಷ್ಟು..... ಯಾರ ಕೂಗೂ ಯಾರಿಗೂ ಕೇಳದು... ಅದೆಲ್ಲೋ ಪರ..ಪರ, ಶಬ್ದದ ನಡುವೆ ಹಸಿ ಬಿಸಿ ನೋಟುಗಳದೇ ಅಟ್ಟಹಾಸ. ಪ್ರತಿಯೊಬ್ಬರಿಗೂ ಬರೀ ನಾನು, ನಾನೆಂಬ ತುಡಿತ....ಬೇಕು ಬೇಕೆಂಬ ಕಾಮನೆಗಳು
        ಇವೆಲ್ಲದರ ಮಧ್ಯೆ ಕಾಣದಾದದ್ದು.. ಕೇಳದಾದದ್ದು..ಮಾತ್ರ ನಮ್ಮವರ ಕನಸುಗಳು, ಕರಕಲಾದ ನೋಟ..ನೋವು.‌ ಹೊಸ ಕನಸಿನ ಆಸೆಗೆ, ಕೇಳಿಸಿದ್ದು ಪಕ್ಕದಲ್ಲಿದ್ದವರ ಆಹಾಕಾರಗಳು ಮಾತ್ರ... ನಾಳೆಗಳ ಸೌಂದರ್ಯ ಇವತ್ತಿನ ಬೇಕುಗಳ ಮಧ್ಯೆ ಕಾಣೆಯಾಗಿದೆ
         ಜಗದ ಗೊಡವೆಗಳೆಲ್ಲ ಮನುಷ್ಯನ ಸ್ವಂತ ವಿಕೃತಿಗಳಿಂದಲ್ಲವೇ...ಪ್ರತಿ ಮನೆ ಸರಿಯಾದರೆ, ಜಗದ ಗೊಡವೆ ಯಾರಿಗೆ ಬೇಕು?? ನನ್ನ ಮನೆಯ ಗೋಜಲಗಳಿಗೆ ಉತ್ತರ ಹುಡುಕಲು ಸಮಯವಿಲ್ಲ....ಸಮಾಜಕ್ಕೆ ಮುಖ ಮಾಡಿ ದೊಡ್ಡವರೆನಿಸಿಕೊಳ್ಳುವ ಹಂಬಲ...
           ಸ್ವಹಿತ ಮರೆತ ರಾಕ್ಷಸರೊಂದಿಗಲ್ಲವೇ ಇಂದು ಜಗದೊಡೆಯ ಜಗಳಕ್ಕಿಳಿಯಬೆಕ್ಕಾದ್ದು. ಮನುಷ್ಯ ತನ್ನಲ್ಲಿ ಕಾಣದ ಸುಖ ಬೇರೆಯವರಲ್ಲೂ ಇರಬಾರದೆಂದಲ್ಲವೇ ರಾಕ್ಷಸನಾಗ ತೊಡಗಿದ್ದು...
           ‌ಅಲ್ಲೆಲ್ಲೋ ದೂರದ ಊರಿನ ರಾಜಕೀಯಕ್ಕೆ ತನ್ನ ಮನೆ ಬಿಟ್ಟು, ತನ್ನ ಕನಸನ್ನ ಮಾರಿ ಹೊರಟ ಜನರಿರುವ,....ಬರೀ "ನಾನೇ ನಾನು" ಎಂದೆಣಸಿಕೊಳ್ಳಲು, ಇಸಂಗಳ ದಾಸರಾದ ಜಂಗುಳಿಯಲ್ಲಿ...ಬದುಕು ಸಹ್ಯವಾಗುವುದೆಂತು??...ನಿಜ ಪ್ರೀತಿ, ಕನಸು, ಸಂತೋಷ ಹುಟ್ಟುವುದೆಂತು???..ಅದಕ್ಕಲ್ಲವೇ ಇಂದಿನ ಪ್ರತಿಯೊಬ್ಬರಿಗೂ ಬದುಕು ಸಲಭವಾಗದೆ, ಖಷಿಯಾಗದೆ..ಬದುಕಬೇಕಾದ ದುಸ್ತರವಾಗಿರುವುದು...
           "ನನಗೆ ಯಾವೂರ ದಾಸಯ್ಯನೂ ಬೇಡ...ನನ್ನ ಮಗುವಿಗೆ ಹೊಟ್ಟೆ ತುಂಬಲು ಒಂದಿಷ್ಟು ಧಾನ್ಯ... ನನ್ನ ಕನಸಿಗೆ ಖುಷಿ ಕೊಡಲು ಒಂದಷ್ಟು ಹಾಡು....ಇಷ್ಟು ಕೊಡು ದೇವ‌ ನಿನ್ನೂರಿನಲ್ಲಿ...‌ ಆದರೆ ಇವ್ಯಾವವೂ ಬೇಡವೆಂಬಂತೆ ಕೆಂಪು, ಕೇಸರಿ, ಹಸಿರೆಂಬ ಬಣ್ಣಗಳಿಗೆ ಜಗಳವಾಡುವ ನನ್ನೂರಿನ ಈ ಜಂಗುಳಿಗಿಂತ... ಕಾಣದ ಕತ್ತಲೆಯೇ ಒಳಿತು ದೇವ" ಎಂದು ಪ್ರಾರ್ಥಿಸಿರಬಹುದೇ ಸಾವಿನಂಚಿಗೆ ನಡೆದ ನೆರೆಯೂರ ಕುಟುಂಬ.
      ಆಸೆಗೂ ಆಶಾವಾದಕ್ಕೂ ಅಜಗಜಾಂತರ ವತ್ಯಾಸ ....ಚೆಂದದ ಬದುಕಿಗೆ ಇರಬೇಕ್ಕಾದ್ದು  ಹಾಡುವಾಸೆ...ಆದರೆ ಇಂದಿನ ಜನರಿಗಿರುವುದು....ಆಶಾವಾದ ಎಂಬ  ಹಮ್ಮು.!!!!

ಬರೆಯಲು ವಸ್ತು ಸಿತ್ಥಿಯನ್ನ ನನ್ನೊಳಗೆ ಪರಿಚಯಿಸಿದ ಸ್ನೇಹಿತರಿಗೆ ಅರ್ಪಣೆ.

Wednesday, 12 July 2017

Brangada Asege Akeya Gojala (ಭೃಂಗದ ಆಸೆಗೆ ಆಕೆಯ ಗೋಜಲ)

ಕನಸುಗಳು, ಹಾರಿ ಹೋದಾವು ಅಂತ ಆಕೆಗೆ ಭಯ..ಕಣ್ಣು ತಾಕಿತೆಂದು ತಡೆ,ತಡೆದರೂ ಮುಗುಳು ನಗೆ ಉಕ್ಕಿ ಹರಿಯುತ್ತಿತ್ತು. ಸತ್ಯವೇ, ಕಣ್ಣ ತುಂಬ ಆತನೇ .‌‌‌..ವಯಸ್ಸಾದ ಹೆಣ್ಣಾದರೇನಂತೆ, ಮಕ್ಕಳಿದ್ದರೇನಂತೆ, ಮನಸ್ಸು ಮರ್ಕಟವೇ ತಾನೇ.... ಆಶ್ಚರ್ಯವಾಗಿತ್ತು ಆಕೆಗೆ, ಎಲ್ಲಿಂದ ಬಂತೀ ಭೃಂಗ? ಕಪ್ಪು ಬಿಳುಪಾಗಿದ್ದ ಜೀವನ...ಬಣ್ಣ ಬಣ್ಣದ ಚಿಟ್ಟೆಯಾಗಿತ್ತು...‌.ಬದುಕ ಬಯಲಲ್ಲಿ, ಚಿಮ್ಮಿತ್ತು ಹೊಸತನ, ಹೊಸತನದ ಆಸೆ ತನಗಿತ್ತೋ ಇಲ್ಲ ಬದುಕೇ ಹೊಸತನ ನೀಡಿತ್ತೋ ಆಕೆ ತಿಳಿಯದಾದಳು. ಮನದ ಕನಸುಗಳಿಗೀಗ ಕಸುವು...ಇದು ಕೇವಲ ಎರಡು ದಿನದ ಮಾತು.. ಮಾತುಕತೆಗಳು ಕವಿತೆಗಳಾದವು.. ಹುಚ್ಚುಕೋಡಿಯಾಗಿತ್ತು ಮನ...ಏನು ಕೇಳಿದರೂ ಮಾಡುವ ಆಸೆ. ಮಾಡುವ ಕೆಲಸದಲ್ಲಿ ಹೊಸ ಹುರುಪು. ಏನಿತ್ತಲ್ಲಿ ತಿಳಿಯದು ಆದರೆ ಆ ಎಲ್ಲಾ ಕನಸುಗಳು ಬೇಕಿತ್ತವಳಿಗೆ....ಆಕೆಯ ಕನಸು ಹಾರಡುತ್ತಿದ್ದಾಗಲೇ ಬಂತು ಭೃಂಗದ ಆಸೆಯ ಇಂಗಿತ...
ಆಕೆಗೋ ಇನ್ನಿಲ್ಲದ ತಳಮಳ ರಾತ್ರಿ ಹಗಲು ಪ್ರಶ್ನೆಗಳ ಗೋಜಲ...
 ವ್ಯಕ್ತಿಯ ಬಗ್ಗಿನ ಆಸಕ್ತಿ ಅತನ್ನನ್ನು/ ಅಕೆಯನ್ನ ಒಂದೆರಡು ನಿಮಿಷದ ಬಿಸುಪಿಗೇ ಸ್ಥೀಮಿತವಾಗಿಸಬೇಕೆ?
 ಗಂಡು ಹೆಣ್ಣಿನ ಸಂಬಂಧ ಹಾಸಿಗೆಯ ಎರಡು ನಿಮಿಷಕ್ಕೆ ಸ್ಥೀಮಿತವಷ್ಟೇಯಾ?
ಆಸಕ್ತಿಗಳೆಲ್ಲ ಬಯಕೆಗಳೇ.. ವ್ಯಕ್ತಿ ಬಯಕೆ ಅಗಬೇಕಾದರೆ... ಆತ/ಆಕೆ ನಮ್ಮನ್ನ ಪೂರ್ಣವಾಗಿ ಆವರಿಸುವ ಅಗತ್ಯತೆ ಇಲ್ಲವೇ?
ಕನಸುಗಳಿಗೆ ಕಾಲಿದೆ ಅದು ಓಡುತ್ತದೆ... ಬಿಸಿ ನಿಂತ ಮೇಲೆ ಅಲ್ಲೇನಿರುತ್ತೆ ಬರೀ ಬೂದಿ...
 ಬದುಕಿನ ತೋಟದಲ್ಲಿರುವ ಸೌಂದರ್ಯವನ್ನ ಪ್ರೀತಿಸಿದರೆ ಅದು ಒಂಟಿತನದ ಹಪಹಪಿಯೇ?
            ಕನಸುಗಳು ಇನ್ನೂ ಬಣ್ಣ ಬಣ್ಣದ್ದಾಗೇ ಇದೆ, ಪ್ರಶ್ನೆಯ ಗೋಜಲಗಳೂ ಅಲ್ಲೇ ಇವೆ... ಆಸೆಗಳಿಲ್ಲದ ಬದುಕಿಲ್ಲ ನಿಜ ಆದರೆ ಕನಸುಗಳು ಆಸೆಗಳಾಗಬೇಕಾದರೆ ಹೆಣ್ಣಿಗದು ಜೀವನವಾಗಬೇಕಾದ ಅನಿವಾರ್ಯತೆ, ಗಂಡಿನ ಕನಸುಗಳೆಲ್ಲ ಅದ್ಹೇಗೆ ಆಸೆಗಳಾಗಿ ಹರಿದಾಡಿಬಿಡುತ್ತೆ, ಅಂತ ಆಕೆಗೆ ಸೋಜಿಗ.




     ‌  ಹೆಣ್ಣು ನದಿಯಾಗಿ ಹರಿಯಬೇಕು.... ಉಬ್ಬು ತಗ್ಗುಗಳಲ್ಲಿ ಬೊರ್ಗೆರದು...ಅಡೆತಡೆಗಳನ್ನು ಕೊಚ್ಚಿ ಹರಿಯಬೇಕು ಆಗಲೇ ತಂಪು... ನದಿಯಾಗಿ ಹರಿಯಲು ಬೇಕು ಉಗಮದ ಉನ್ಮಾದ.... ಅಲ್ಲಿ ಬಂಡೆಯಾಗಿ ನಿಲ್ಲಬೇಕವನು...ಆಗಲೇ ಕನಸು ಆಸೆ ಅದೀತು.

Tuesday, 4 July 2017

Manasemba markatadalli kasemba hucchu kodi....... (ಮನಸೆಂಬ ಮಾರ್ಕಟದಲ್ಲಿ ಕನಸೆಂಬ ಹುಚ್ಚುಖೋಡಿ.......)....


ಮನಸುಗಳು ಮುಖ್ಯವಾದವೋ, ಕನಸುಗಳು ಮುಖ್ಯವಾದವೋ?!?! ಈ ಪ್ರಶ್ನೆ ಬಂದದ್ದು ಜೀವನ ಈಗಿನ್ನು ಶುರುಮಾಡಿದ ಜೋಡಿಗಳಿಂದ.. ಕನಸುಗಳು ಮನಸ್ಸ ಮುಖ ಮಾಡಿ ನಡೆಯುತ್ತದೋ... ಮನಸ್ಸು ಕನಸ ಬೆನ್ನೇರಿ ನಡೆಯುತ್ತದೋ ಬಲ್ಲವರು ಯಾರು?!?!
      ಪ್ರತಿಯೊಬ್ಬರೂ ಕನಸ ಬಗ್ಗೆ ಮಾತನಾಡುತ್ತಾರೆ, ಅವರವರ ಕನಸು ಅವರವರಿಗೆ ಮುಖ್ಯವಾದರೆ, ಸಂಸಾರದ ಸಾಮರಸ್ಯವೆಂತಯ್ಯ ಅನ್ನುತ್ತಾರೆ ಹಿರಿಯರು... ಬದುಕಿ ಬೆಳೆಯಲು ಮನಸ್ಸು ಕೂಡಬೇಕು, ಮನಸ್ಸು ಕೂಡಿದರಷ್ಟೇ ಬದುಕು ಬಂಗಾರ...ಇದು ನಮಗೆಲ್ಲ ತಿಳಿದಿದೆ... ಹಾಗಾದರೆ ಕನಸು ಕಟ್ಟು, ಕನಸ ನನಸಾಗಿಸಲು ದುಡಿ ಅನ್ನುವಿರೇಕೆ?!?!
       ಚಿನ್ನದ ಜಿಂಕೆ ಬಯಸಿದ ಸೀತೆಗೆ, ರಾಮನೇ ಮನದ ತುಂಬೆಲ್ಲಾ..ರಾಮನಿಲ್ಲದ ಬದುಕೇ ಕಾಣದ ಆಕೆ, ಹುಚ್ಚುತನ ಎಂದು ತಿಳಿದು ಕೂಡ, ಕನಸ ಬೆನ್ನೆತ್ತಿದಳಾಕೆ, ಮನ ಕೂಡಿದಾಕ್ಷಣ ಒಂದೇ ಕನಸು ಚಿಗುರೊಡೆಯಬೇಕಂಥೇನಿಲ್ಲ.... ಆದರ್ಶದ ಸಂಸಾರದಲ್ಲೂ ಕನಸುಗಳು ಬೇರೆ ಬೇರೆ ಆಗಿ ಚಿಗುರೊಡೆದೀತು...
      ಮನಸ್ಸೆಂಬ ಮರ್ಕಟದಲ್ಲಿ ಕನಸ್ಸೆಂಬ ಹುಚ್ಚು ಖೊಡಿಯೋ ಇಲ್ಲ ಕನಸ ಹುಚ್ಚಿನಲ್ಲಿ ಮನಸ್ಸು ಮಾರ್ಕಟವಾಯಿತೋ....ಬಲ್ಲವರು ಯಾರಯ್ಯ?!?
   ಇನ್ನು ಕನಸು ಹೇಗೆದ್ದೀತು ಯಾರಿಗೇನು ತಿಳಿದೀತು? ಕನಸ ಕಂಡ ಮನಸ್ಸಿಗೆ ಬಿಟ್ಟು.... ಆಕಾಶದ್ದೆತ್ತೆರದ ಕನಸೋ, ಇಲ್ಲ ಬೇಲಿಯಾಚೆಯ ಕನಸೋ.. ಯಾರು ಹೇಳಿಯಾರು?? ಬೇಲಿಕಟ್ಟಿದವರೇ ಇಲ್ಲ ಆಕಾಶದ ಅಳತೆ ಅಳೆದವರೇ?!?! ಕನಸು, ಕನಸೇ.... ಮನಸ್ಸುಗಳ ಒಳಗೆಲ್ಲ ಹೊಸ ಒರೆತ, ಹೊಸ ಉತ್ಸಾಹ, ಕನಸುಗಳ ಹರಿಯುವುಕೆಯಿಂದ ತಾನೇ!!
       ಮನಸುಗಳ ಒಡಂಬಡಿಕೆಯೊಂದಿಗೆ, ಕನಸುಗಳು ಜೊತೆಗೇ ಉಕ್ಕಿ ಹರಿಯಬೇಕೆಂಬ ಹಠವೇಕೆ? ಇನ್ನೊಬ್ಬರ ಕನಸುಗಳೆಡೆಗೊಂದು ಕೌತುಕ, ಪ್ರೀತಿ, ಗೌರವ ಇಷ್ಟು ಸಾಕಲ್ಲವೇ ಮನಸ್ಸು ಕೂಡಲು.....
         ಬೇಡವೆನಿಸಿದರೂ, ಸಾಗಲ್ಲಿಲ್ಲವೆ ರಾಮ ಬಂಗಾರದ ಜಿಂಕೆ ತರಲು ಸೀತೆಯ ಕನಸನ್ನ ಗೌರವಿಸಿ...ರಾಮನ ವಚನಗಳು ಸೀತೆಯ ಕೌತುಕವಾದಂತೆ...ಇಲ್ಲೆಲ್ಲೂ ಬೇಲಿಯಾಚೆಯ ಬಯಕಗಳೆಂದು ಹೀಗಳಿಸಿಲ್ಲ...ಆಕಾಶದೆತ್ತರ ಕನಸೆಂದು ಉದ್ಧರಿಸಿಲ್ಲ...ಕನಸುಗಳಿಗೆ ರೆಕ್ಕೆ ಕೊಟ್ಟ ಮನಸುಗಳು ಸದಾ ಒಂದಾಗಿ ನಡೆದವಷ್ಟೇ....
          ಕನಸು ಮನಸುಗಳು ಒಂದರೊಳಗೊಂದು ಸೇರಬೇಕು... ಕನಸುಗಳಾಗಲಿ ಮನಸುಗಳಾಗಲಿ ಒಂದಾಗಲೇಬೇಕಿಲ್ಲ.. ಹೊಸ ಕನಸು, ಕನಸ ಕಟ್ಟಲು ಹೊಸ ಹೊಸ ಒರೆತಗಳು ಮನದಲ್ಲಿ ಮೂಡದ್ದಿದ್ದರೆ ಅದೆಂತಹ ಜೇವನ‌.‌..ಕನಸು ನನಸಾಗಲು ಇರುವ ತುಡಿತವೇ ಜೀವನ..  ಪ್ರತಿ ಜೀವನ ಹೊಸದಾಗಬೇಕಾದರೆ ಕನಸುಗಳ ಸಾಲುಗಳು ನಿರಂತರವಾಗಿರಬೇಕು... ಅದಕ್ಕೇ ಗೌರವ, ಸೋಜಿಗ, ಸೌಹಾರ್ದ, ಇಬ್ಬರ ಕನಸು, ಮನಸುಗಳ ಬಗ್ಗೆ ಮೂಡಿ.... ಪ್ರೀತಿ ಅನ್ನೋ ಹಠ, ಹೃದಯದಲ್ಲಿ ಮುಖ್ಯವಾಗಬೇಕು...ಅಷ್ಟೇ...

Thursday, 29 June 2017

Yendu nannavaladeyo kanase!! ಎಂದು ನನ್ನವಳಾದೆಯೋ ಕನಸೇ!!

 ನಾ ಹಾಡಲು ನೀ ಆಡಬೇಕು.... ತೂಗಾಡುತಾ ತಾಳ ಹಾಕಬೇಕು....ಆತನ ಬಯಕೆ ತುಂಬಾ ಚಿಕ್ಕದ್ದು.

 ನೀ ಹಾಡಲು, ಮನ ತುಂಬಿ ಮಿಡಿಯಲು.. .
ಮನದಲ್ಲಿ ಮೌನ, ಅದರೆ ಕನಸಲ್ಲಿ ಸಂಚಲನ...
 ಹಾಡಿನ ಪರಿಯೋ.... ಪರಿಸರದ ಅನುಭೂತಿಯೋ..
ನಾನಾಗಬೇಕು ಕನಸ ಮೈದುಂಬಿ.. ತೂಗ್ಯಾಲೆ...ತುಂಬೆಲ್ಲ ಪಸರಿಸಿ.....
 ಹಾಡು ಗೆಳೆಯ ಅಂತಹ ಹಾಡನ್ನ....ಗೆಳತಿಯ ಹಾಡು ಮುಂದುವರಿಯಿತು..

 ಎಂತಹ ಮಾತಂದೆ ಗೆಳತಿ, ನನ್ನ ತುಂಬೆಲ್ಲ ನೀನೆ....ಆತ ಬಿಟ್ಟೂಬಿಡ

 ನಾನೆಷ್ಟರವಳು...ಆಕೆ ಚಿಪ್ಪಿನಿಂದ ಹೊರಬರಳು.

 ನಾನೆಷ್ಟರವಳು?!?! .........ಗೊತ್ತಗಾಲಿಲ್ಲ
 ನನ್ನ ಬದುಕಿನ ಬಂಡಿಯಲ್ಲಾ...ಆತನ ಆಸೆಯ ಕುದರೆಗೆ ಓಟದ ತೆವಲು

 ಅವರವರ ಬದುಕಿಗೆ, ಅದರದರದೇ ಓಟ....
 ಅಲ್ಲಲ್ಲೆ ಎಡತಾಕುವ ಬಳ್ಳಿ ‌...
ನಾನ್ಯವ ಎಡತಾಕುವಿಕೆಗೂ ಇಲ್ಲದವಳು..
 ನಿನ್ನ ಬದುಕಂತೂ ಕೇಳಲೇ ಬಾರದು
 ಅದು... ಹಾರುವ ಕುದುರೆ
 ಧೂಳಿನ ಮಧ್ಯದಲ್ಲಿ... ಅಲ್ಲೆಲ್ಲೋ...
ಎಡತಾಕುವಿಕೆಗೆ ನಾನಿಲ್ಲ, ಹಾರುವ ಕುದರೆ ನೀನು... ಓಡುವ ಬಂಡಿಗಳು ತಾಗುವುದಾದರೂ ಎಲ್ಲಿ ಹುಚ್ಚ..........
 ಗೆಳತಿಯ ಒರೆತ ಮುಂದುವರಿಯಿತು...

 ಅದು ಅವರವರ ಸ್ವಾತಂತ್ರ್ಯವು ಕೂಡ ಅಲ್ವೆ?
 ಬಯಸುವುದು ಸಹಜ..
ಪೃಕೃತಿಯನ್ನು ಬಯಸದ ಕವಿ, ಕವನ ಉಂಟೆ.... ಸ್ಪಂದಿಸುವುದು ಮಾತ್ರ ಅವರವರ ಆಯ್ಕೆ
ಪೃಕೃತಿಯನ್ನ ಒತ್ತಾಯಿಲಾದೀತೆ!! ಏನಂತೀಯಾ..ಆತ ಕೇಳಿಯೇ ಬಿಟ್ಟ

ಯಾರ ಬಯಕೆ.?? ನೀನೀಗ?😀😀... ನಗು ಗೆಳತಿಯದು

ನಿನ್ನ ಅಭಿಪ್ರಾಯ ಏನು? .ನಿನ್ನದೇ ವಿಷಯ ದಲ್ಲಿ...ಬಿಡಲೊಲ್ಲ ಆತ

 ನಾನ್ಯಾರ ಕನಸೂ ಕದಿಯಲಿಲ್ಲ ಗೆಳೆಯ...ಆಕೆಗೋ ಹೆದರಿಕೆ

 ನೀನಲ್ಲದೇ ಇನ್ಯಾರ ಮನ ಕಲಕಲಿ?!?
 ನನಗೋ ಪೃಕೃತಿಯ ಕನಸು, ನಿನ್ನ ಮನ ಬಿಟ್ಟು ಇನ್ಯಾವುದೂ ಕಚಗುಳಿ ನೀಡದೇ ಹುಡುಗಿ.‌..ಪುನಃ ಕನಲಿದ ಆತ

 ಬಯಕೆಯ ತೋಟದ ಹಣ್ಣುಗಳೆಲ್ಲ..ನಮ್ಮದಾಗದು...
ಆದರೆ ಬಯಸೋದು ತಪ್ಪಲ್ಲ ಅಲ್ಲವೇ ಅಲ್ಲ
ಬಯಕೆಯನ್ನು ಮೀರಿ ನಿಂತರೆ ಜೀವನೋತ್ಸಾಹ...ಎಲ್ಲಿದೆ ...ಪೃಕೃತಿ ಬಯಕೆಯಿಂದ ಬೇರಾದರೆ ವಸಂತ ಮೂಡೀತೆ?? ಬಿಸಿಲು, ಮಳೆಗಳಿಂದ ಜೀವಿಗಳ ಮುಗಳ್ನಗೆಗಳು ಉಳಿದಾವೇ?? ಬಯಕೆಯಿಂದ ಹುಡುಗಿ ಹೇಗೆ ಹೊರತಾದಳು.

 ವಾಹ್ಹ ಕ್ಯಾ ಬಾತ ಹೇ.. ಉದ್ಗಾರವದು...

 ಸರಿ...ಈಗೆಷ್ಟು ಬಯಕೆಗಳಿವೆ..ಸ್ಪಂದನಕ್ಕೆ ಕಾದು..ನಿನ್ನಲ್ಲಿ?.‌..ವಸಂತ ಬರಲು ಇನ್ನೂ ವರುಷ ಕಾಯಬೆಕಾದೀತು!! ಬಿಗುಮಾನದ ಗೆಳತಿ.

 ಇಷ್ಟು ಹೇಳಿದ ಮೇಲೆಯೂ ಮತ್ತೆ ಪ್ರಶ್ನೆ ಕೇಳಿದರೆ ಎನೆನ್ನಲಿಯೇ. ಹತಾಶನಾದ ಆತ....

ಕನಸು ಕಾಣುತ್ತಾ ಗೆಳತಿಯ ಮನ ಗೆಲ್ಲಲೇ... ಕಾಯುತ್ತಾಳಾಕೆ ಏನ್ನನ್ನ?!?! ಆತನಲ್ಲಿ ಗೊಂದಲ.. ಎಲ್ಲಾ ಗಂಡಿನಂತೆ...

ಪೃಕೃತಿ ಆಕೆ.. ಪುರಷ  ಆಕೆಯೊಳಗೆ ಲೀನವಾಗಿಸಿದಾಗ ಮಾತ್ರ ಅವನೊಳಗೆ ತಾನು ಇಳಿಯಬಲ್ಲಳು ...ತನ್ನತನದೊಂದಿಗೆ ಪೃಕೃತಿಯ ಸುವಾಸನೆ ಸೇರಿದಾಗಷ್ಟೇ ಪುರಷನ ಕನಸುಗಳನ್ನ ವಿಸ್ತರಿಸುವಳಾಕೆ....

ಪೃಕೃತಿ ಪುರುಷ ಒಂದಾಗಲು.. ಪುರಷನಲ್ಲಿರಬೇಕು ಬಯಕೆಯ ಹಪಹಪಿ.. ಕನಸುಗಳ  ಪೊಟ್ಟಣ..ಕರಗಿ ಒಂದಾಗುವ ಜೀವಂತಿಕೆ....

ಗೆಳತಿಗೆ ಆತ ಬೇಕು, ಪುರುಷನಿಲ್ಲದ ಪೃಕೃತಿ ಇದೆಯೇ... ಪೃಕೃತಿ ಆಕೆ ಆದರವನು ಸಂಪೂರ್ಣ ಪುರಷನಾದಾಗಷ್ಟೇ....ಆಕೆಯೊಳ ಸೇರಬಲ್ಲ‌‌‌....

Monday, 19 June 2017

Putta Prapanchada Prashnegalu (ಪುಟ್ಟ ಪ್ರಪಂಚದ ಪ್ರಶ್ನೆಗಳು..‌.)

ಸ್ವಲ್ಪ ಕಷ್ಟ ಕಣ್ರೀ..ನನ್ನಂತವರಿಗೆ..ಕರಾವಳಿಯ ವತಾವರಣದ ದೋಷವೋ..ಇಲ್ಲಾ ಹುಟ್ಟಿನಿಂದ ಬಂದ ದೋಷವೋ.. ಒಂದೋ ಮಳೆ ಇಲ್ಲಾ ಬಿಸಿಲು...ಇದು ಬಿಟ್ಟು ಇನ್ನೊಂದು ನನಗೆ ತಿಳಿದಿಲ್ಲ... ಮಳೆಯ ತಂಪಿನೊಂದಿಗೆ..ಕರಾವಳಿಯಲ್ಲಿ ಬಿಸಿಲು ಕಾಣಿಸಿದೆ...ಹಾಗೇ ಮನಸ್ಸಿನಲ್ಲೂ ಬಿಸಿಲು....

ಬಹಳ ದೊಡ್ಡ ವಿಷಯವೇನಲ್ಲ.. ನನ್ಯಾರು ದೇಶದ ಉದ್ಧಾರದ ಬಗ್ಗೆ ಮಾತಾಡಲು.. ನನ್ನದೆನಿದ್ದರೂ.‌‌‌.ಪುಟ್ಟ ಪ್ರಪಂಚ, ಇವತ್ತಿನ ಮಾತು..ಈ ಪುಟ್ಟ ಪ್ರಪಂಚದ್ದೇ.. ನನ್ನ ನಿಮ್ಮ ಮನೆಗಳಲ್ಲಿ ಓಡಾಡುವ ಈ ಪುಟ್ಟರದ್ದು....

ನಮಗೆಲ್ಲ"ನಾನು, ನನ್ನ ಮಗ/ಮಗಳು" ಬದ್ಧಿವಂತರು.. ಒಳ್ಳೆಯವರು.. ಆದರೆ ಈಗಿನ ಪ್ರಪಂಚ, ಸಮಾಜ ..‌ಅವಿವೇಕಿ ಸಮಾಜ,.. ನಾವುಗಳಿಲ್ಲದ ಸಮಾಜವುಂಟೇ?!?!?  ಇದ್ಯಾರನ್ನ ದೂಷಿಸ ಹೊರಟ್ಟಿದ್ದು ನಾವು??..

ಸಮಾಜೀಕರಣ, ನಾಗರೀಕರಣ, ಬದಲಾವಣೆಯ ಗಾಳಿ, ಬೆಳವಣಿಗೆ.‌‌...ಇವೆಲ್ಲ ನಮ್ಮ ಕಾಲದವರೆಗೂ ಬೇಕಿತ್ತು..‌ ಈಗ ನೋಡಿ..."ಎಂತಹ ಕೆಟ್ಟ ಬೆಳವಣಿಗೆ, ನಾಗರೀಕರಣ ನಮ್ಮ ಮಕ್ಕಳನ್ನು ತಿಂದು ಹಾಕುತ್ತಿದೆ"  ನಾವೆಲ್ಲ ಅಡುವ ಮಾತೇ ... ಹಾಗಾದರೆ ನಮ್ಮ ಮನಸ್ಸಿನ ಭೃಮೆಯ ಮೇಲಷ್ಟೆ ನಾಗರೀಕರಣ, ಸಮಾಜೀಕರಣ ಬೇಕೆ??!? ..ನಾವು ಯೋಚಿಸಲಾಗದ್ದೆಲ್ಲ ಕೆಟ್ಟದ್ದೇ???

ಕಳೆದು ಹೋಗುತ್ತಿರುವ ನಮ್ಮ ಮನಸ್ಸಿನಾದಾರದ ಸೃಜನಶೀಲತೆ ಬಗ್ಗೆ, ಕಳೆದು ಹೋಗುತ್ತಿರುವ ನಾವಂದುಕೊಂಡ ಶಿಸ್ತಿನ ಬಗ್ಗೆ‌..‌ ನಮಗೆ ನಾವೇ ಇಲ್ಲ ನಮ್ಮ ಹಿರಿಯರು ಹಾಕಿದ ಸಾಮಾಜಿಕ ಚೌಕಟ್ಟು ಮುರಿದು ಬೀಳುತ್ತಿರುವ ಬಗ್ಗೆ ನಮಗೆಲ್ಲ ವಿಪರೀತ ಆತಂಕ... ವಿಕಾಸ ವಾದದ ಪ್ರಕಾರ ವಿಕಸನ, ಬದಲಾವಣೆ ನಿರಂತರ... ಹಾಗಿದ್ದ ಮೇಲೆ, ನಾವಂದುಕೊಂಡಿದ್ದೇ ಸತ್ಯವಾ?? ನಮ್ಮ ಚೌಕಟ್ಟುಗಳೂ, ಹಿಂದಿನದರಂತೆ ಮುರಿಯಲೇಬೇಕಲ್ಲ... ನಮಗ್ಯಾಕೆ ಆತಂಕ?!?!?

ನವೆಂದೂ ತಿಂದು ನೋಡದ, ನಾವೆಂದೂ ಆ ವಯಸ್ಸಿನಲ್ಲಿ ಬದುಕಿ ನೋಡದ, ಆಡಿ ನೋಡದ, ತಿಂಡಿ, ಬದುಕು, ಆಟ ಇವುಗಳ ಬಗ್ಗೆ ನಮಗೇಕೆ ಮುನಿಸು?!?!.. ನಮಗಿಂತ ಹೆಚ್ಚು ಸಮಾಜೀಕರಣಗೊಂಡ ನಮ್ಮ ಚಿಣ್ಣರನ್ನ.. ನಮ್ಮ ಹಿರಿಯರಿಗಿಂತ ಹೆಚ್ಚು ನಾಗರೀಕರಣಗೊಂಡ ನಮ್ಮನ್ನ ಒಪ್ಪಿಕೊಂಡಂತೆ ಗೊಣಗದೆ ಒಪ್ಪಿಕೊಳ್ಳಲಾರೆವೇಕೆ??!?!

ಸಮಾಜ ಬದಲಾಗುತ್ತೆ... ಸಾಮಾಜಿಕ ಚಿಂತನೆಗಳೂ ಕೂಡ, ಇಂದಿನ ಕನಸು, ನಾಳೆಗೆ ಬರೀ ಗೋಳಾದೀತು... "ನಾನು, ನನ್ನದು" ಇವತ್ತಿಗಷ್ಟೇ... ನಾವ್ಯಾರು ನಾಳಿನ ನಮ್ಮ ಪುಟ್ಟ ಕಂದಮ್ಮಗಳಿಗೆ ಬದುಕ ಕಟ್ಟಿ ಕೊಡಲು, ನಾಳಿನ ಸಮಾಜ ಕಟ್ಟಿ ನಿಲ್ಲಿಸಲು?!?!?

ನಾವು ಹೇಳುವುದೆಲ್ಲ ಸರಿಯಾದರೆ... ಪ್ರಶ್ನಿಸಲು ಅಧಿಕಾರವೇ ಯಾರೀಗೂ ಇಲ್ಲ.. ಸನಾತನತೆಯೂ ಸರಿಯೇ... ಇಂದಿನ ಬದುಕನ್ನ ಒಪ್ಪಿಕೊಳ್ಳದೆ... ನನ್ನ ಬಾಲ್ಯವೇ ಅತ್ಯಬ್ಧುತ, ಅಷ್ಟೂ ಸಂತೋಷ ನಿನಗೆ ಕಟ್ಟಿಕೊಡುತ್ತೇನೆ...ನನ್ನಂತೆ ನಡಿ ಅನ್ನೋದು.. ಸನಾತನತೆಯಲ್ಲವೇ?!?!?

ನಮ್ಮ ಹಿಂದಿನ ಸಮಾಜಕ್ಕೆ ಸವಾಲೊಡ್ಡಿ ನಾವೆಲ್ಲ ಚಿಂತಕರು ಅನ್ನೋ ನಾವು, ನಮ್ಮ ಚಿಣ್ಣರನ್ನ ಮಾಹಾನ್ ಚಿಂತಕರನ್ನಬೇಕೆ?!?! (ಚಿಂತಕರ ಮಕ್ಕಳು).. ಹಾಗಾದರೆ ಮಾಹಾನ್ ಚಿಂತಕರ ಸಮಾಜವೇಕೆ ಹಳಸಲಾದೀತು?!?!?

ಪ್ರಶ್ನೆಗಳು ನೂರಾರು..ನಾನು ಹೀಗೇರೀ... ಕಡಿಮೆ ಯೋಚನೆಯವಳು... ಅದಕ್ಕೇ ನನ್ನಲ್ಲಿ ಬರೀ ಪ್ರಶ್ನೆಗಳೇ ಇವೆ ರೀ...ಆದರೆ ನನ್ನ ಬದುಕು ಸುಲಭಾ ರೀ...ಯಾಕೆ ಕೇಳಿದ್ರಾ?!?! ನಾನು ತಿರುಗುವ ಕಲ್ಲು...ಬದಲಾವಣೆ ಒಂದೇ ಸತ್ಯ ಅಂತ ನಂಬಿದೋಳು ಕಣ್ರೀ.... 

Sunday, 11 June 2017

Maleya munisu......ಮಳೆಯ ಮುನಿಸು

ಮಳೆ ಬಂತು, ಜೊತೆಗೆ ತಂತು ಅವರಿಬ್ಬರಲ್ಲಿ ಮುನಿಸು... ಹೆಣ್ಣು ಹೆಣ್ಣಾಗಿರಲು, ನಾನಿರಬೇಡವೇ? ಕೇಳಿದ ಆತ. ಯಾಕೋ ಅಲ್ಲೇ ಮುನಿಸಾದಳು ನಮ್ಮ ಪುಟ್ಟಿ...

ಎದೆ ಗಾಯದ ಮೇಲೆ ಸುರಿಯೆ ನೀ ಮಳೆಯಾಗಿ...ಆಕೆ ಇಲ್ಲದೆ ಅದ್ಹೇಗೆ ಆತ ಮಳೆಯನ್ನ ಬರಮಾಡಿಕೊಂಡಾನು!

ಆಕೆಗೋ ಮುನಿಸು ಮೂಗು ಕೆಂಪಾಗಿಸುವಷ್ಟು.... ಗಾಯಕ್ಕೆ ಸುರಿದ ಮಳೆ ಎದೆಯನ್ನೇ ಗೋರಿಯಾಗಿಸೀತು ಜೋಕೆ!!!!

ಮಳೆಗಾಲದಲ್ಲೂ ಚಿಗುರುವ ಮಾತಾಡದ ನೀನೆಷ್ಟು ನಿಷ್ಕರುಣಿ...ಆತನ ಮಾತು ತುಂಬಾ ಭಾರ...

ಚಿಗುರಲು ಬೇಕಾ ಹ್ಯೊಯುವ ಮಳೆ?!?!.. ಕಾದ ನೆಲದಲ್ಲೆಲ್ಲ..ಬರೀ ಮುಳ್ಳು... ..ಮುನಿಸಷ್ಟೇ ಅಲ್ಲ ಆಕೆಯ ಮನದಲ್ಲೇನೋ ಕೊರಗು, ತಿಳಿಯಲ್ಲೊಲ್ಲ ಯಾಕೆ ಅಂತ ಸಿಡಿಮಿಡಿ..

ಪಾಪ..ಆತನೇನು ಸರ್ವಜ್ಞನೇ?...ಆಕೆಯ ಕೊರಗು ಕಾಣಿಸಲ್ಲಿಲ್ಲ...‌ ಬರೀ ಸಿಡಿಮಿಡಿಗೆ, ತಮಾಷೆ ಆತನದು... "ಮುಳ್ಳು ಬೇಲಿಯ ತಬ್ಬಿ ಚಿಗುರು ಹಬ್ಬಿ ನಗಬಾರದೆ? ನೀನಂತೂ ನೀರು ಹನಿಸಲೊಲ್ಲೆ
ಮಳೆಯಾದರೂ ಮುಳ್ಳ ಚಿಗುರಿಸಲಿ ಬಿಡು".. ಇಲ್ಲ ಆತ ಆಕೆಯನ್ನ ಇನ್ನೇನೋ ಕೇಳುತ್ತಿದ್ದಾನೆ

ಪುಟ್ಟಿ ಬೆಳೆದು ಬಿಟ್ಟಿದ್ದಾಳೆ...ಮುಗ್ದತೆಯ ಮೀರಿ ವಾಸ್ತವತೆ ಅಕೆಯನ್ನ ಕಠೋರವಾಗಿಸಿದೆ...ಅನ್ನುತ್ತಾಳೆ " ಮಳೆಗೆ ಕರುಣೆ ಉಂಟೆ?!.. ಸಿಡಿಲಬ್ಬರ...ಗುಡುಗುಗಳ ಮಧ್ಯೆ... ಸುರಿವ ಮಳೆಗೆ ಮುಳ್ಳೊಂದು ಲೆಕ್ಕವೇ
ತನ್ನ ತಾನು ಕಾಪಾಡಿಕೊಂಡರೆ..ಮುಳ್ಳಿಗುಂಟು ಚಿಗುರುವ ಭಾಗ್ಯ"

ಪ್ರೀತಿ ಆತ್ಮ ಗೌರವವನ್ನು ಕೊಲ್ಲುತ್ತದೆ ಕಣೆ, ಹಸಿವಿನ ಹಾಗೆ:
ಸ್ವಭಾವತ ಮುಳ್ಳೇ ಆದರೂ ಆಸೆಯ ಬೆನ್ನು ಬಿದ್ದು ಸ್ವಭಾವ ಮರೆತಿದೆ..... ಈಗವನಿಗೆ ಅವಳ ನೋವು ಅರ್ಥವಾದಂದಂತಿದೆ, ಸಂತೈಸಲು ಬೆನ್ನ ಮೇಲೆ ಕೈ ..ಮಾತಿನಲ್ಲಿ ಅಕ್ಕರೆ

ಆಸೆಗೂ ಮಿತಿ.. ಮುಳ್ಳಿಗೂ ಹುಟ್ಟು ಗುಣ..ಮಳೆ ನಿರಂತರವಾದಾಗಲೇ ಎಲ್ಲಾ ಬದಲಾವಣೆ.... ಕರಗುತ್ತಿದೆಯೇ ಆಕೆಯ ಎದೆಯ ನೋವು..ಇಲ್ಲ ಎಲ್ಲಾ ಇನ್ನೂ ಗೋಜಲೇ??

ನೀನು ಬದಲಾಗಬಹುದೆಂಬ ನಿರೀಕ್ಷೆ ಈ ಮಳೆಗಾಲದಲ್ಲೂ ಚಿಗುರುತ್ತಿಲ್ಲ
ಬದಲಿಗೆ ಬೇರೆ ಯಾರನ್ನೊ ಹುಡುಕಿಕೊಳ್ಳೋಣವೆಂದರೆ ಈ ಮಳೆಯೂ ನಿಲ್ಲುತ್ತಿಲ್ಲ!.... ಆತನದು ತಮಾಷೆಯೋ, ಕುಹುಕವೋ ಇಲ್ಲ ತನ್ನವಳಾಗದ ಆಕೆಯ ಮೇಲೆ ಮುನಿಸೋ...ಆತನಿಗೇ ತಿಳಿಯದು

 ಬದಲಾವಣೆಗೆ... ಮಳೆ ನಿಲ್ಲುವ ಕಾಲ ಬರಬೇಕು... ಆಗ ಹಸಿರೆಲೆ ಒಣಗೀತು... ಮಳೆಗಾಲದಲ್ಲಿ ಇಡೀ ನೋಟ ಒಂದೇ..ನಾನು..ಅವಳು.. ಎಲ್ಲಾ ಧೋ ಅಂತ ಸುರಿಯುತ್ತಲೇ ಇರುವೆವು..... ಪುಟ್ಟಿ ಕಳೇದೇ ಹೋಗಿದ್ದಾಳೆ..ಇಲ್ಲ ಇದು ಬರೀದೆ ಮುನಿಸಲ್ಲ, ಕನಸೆಲ್ಲೋ ಒಡೆದು ಹೋಗಿದೆ..ಇಂತಹ ತತ್ವಜ್ಞಾನದ ಮಾತು, ಪುಟ್ಟಿಯ ಬರೀ ಪ್ರೀತಿಯಿಂದ ಹುಟ್ಟಲು ಸಾಧ್ಯವೇ

"ನೀನು ಹೇಳುವುದೂ ನಿಜ. ನೀವಿಬ್ಬರು ಸುರಿಯುವ ರಭಸಕ್ಕೆ ಒಡ್ಡಿದ ಬೊಗಸೆಗೂ ನೋವು. ಮಳೆ ನೋಯಿಸಬಾರದಲ್ಲ, ಹುಡುಗಿ
ಮಳೆ ಮತ್ತು ನೀನು ಸುರಿದರೆ ಖುಷಿ.......
ಸುರಿಯುತ್ತಲೇ ಇದ್ದರೆ ಆತಂಕ......
ಸ್ರಷ್ಟಿಸಬಹುದಾದ ಅನಾಹುತಗಳ ನೆನೆದು,"..... ಹುಡಗನಲ್ಲೀಗ ಆತಂಕ, ಪ್ರೀತಿಗೂ ಮೀರಿ ತಾನೇನು ಮಾಡಲಿ ಎಂದು, ಗೊತ್ತವನಿಗೆ... ಮುನಿಸಿನ ಹಿಂದೆ ಇದೆ ನೋವು...ಕೇಳಲು ಭಯ...ಹೆಣ್ಣು ಅರಗಿಸಿಕೊಂಡಂತೆ ಗಂಡಿಗೆ ಆದೀತೆ...ಗಟ್ಟಿ ಗುಂಡಿಗೆ ಆದರೂ ಅರಗಿಸಿಕೊಳ್ಳಲು ಬೇಕು ಹೆಣ್ತನ...

ಅವನ ಮೇಲ್ಲಲ್ಲ ಆಕೆಯ ಕೋಪ...ಆಕೆಗೋ ಹಣ್ತನದ ಭಾರ...ಅದಕ್ಕನ್ನುತ್ತಾಳೆ ಆಕೆ........" ಅದಕ್ಕಲ್ಲವೇ ಮುಂಗಾರಿಗೂ ಒಂದು ಲಯ...ಒಂದು ಮಿತಿ, ನನ್ನ ಓಘಕ್ಕೂ ಸಾಕಾಗುವ ಗುತ್ತು.. ನಾನು ಮುಖ ತಿರುಗಿಸಿ ನಡೆದರೆ...ಅದಕ್ಕೂ ಕಾರಣ ಮಿತಿ"

 ಮುಂಗಾರೆ ಈ ಋತುವಲ್ಲಿ ಮಿತಿಯಾಗಬೇಡ
ನಿನ್ನನ್ನೇ ನಂಬಿ ಕನಸುಗಳನ್ನು ಬಿತ್ತಿದ್ದೇನೆ.... ಆತ ಪುನಃ ಆತನಾಗ ಹೊರಟ... ಗೋಗರೆದರೆ ಕೇಳದ ಹೆಣ್ಣುಂಟೆ?!?

ಮುಂಗಾರಿಗೆ ಮಿತಿ ಇಲ್ಲ..ಓಘಕ್ಕೆ ಮಿತಿ ಇದೆ.. ಮುಂಗಾರು  ಮಿತಿಯಾದರೆ..ಕಾರಣ ನೀನಲ್ಲವೇ..ಕನಸು ಬಿತ್ತೀದ್ದಿಯಾ!... ನೆನಪುಗಳ ಕಡಿದ್ದದ್ದು ಮರೆತೇ ಹೋಯಿತೇ ನಿನಗೆ!!... ಆಕೆಯ ಕೋಪ ಈಗ ಹೊರ ಬಂತು..ಅದು ಬರೀ ಮುನಿಸಲ್ಲ

ಓ ನೀನಿನ್ನೂ ಅದನ್ನೆಲ್ಲ ಮರೆತಿಲ್ಲವೇ? ಇಷ್ಟೆಲ್ಲ ಮಳೆ ಸುರಿದರೂ ಅದ್ಯಾಕೆ ನೆನೆದು ಅಳಿಸಿ ಹೋಗಿಲ್ಲ?.. ಊಹುಃ ಆತ ಆದ್ರನಾಗಿರಲ್ಲಿಲ್ಲ.. ಈಗ ಬಂತವನ ಸೆಡವಿನ ಮಾತು.

ಪುಟ್ಟಿ ಹೆಣ್ಣಾಗಿ ಬೆಳದಾಯಿತು....ಅದರ ಮೇಲೆ ಮುಗ್ದತೆ ಹುಡುಕಲಾದೀತೆ??......." ಮಳೆಯ ಧೋ ನನ್ನ ಮನಸ ಹಸಿಯಾಗಿಸೀತು.. ಆ ಹಸಿಬಿಸಿಯಲ್ಲಿ..ಕಾರಣಗಳು ಮರೆತು ಹೋದಾವು.. ಆದರೆ ಹೃದಯಕ್ಕೆ ಹಸಿಯಾಗುವ, ನೆನೆವ ಪುಣ್ಯ ಎಲ್ಲಿ??...ಅದ್ಯವಾಗಲೂ ಬಿಸಿಯೇ.. ನೆನಪ ಬಿಸಿ..ಹೃದಯದಲ್ಲಿ‌.. ಕನಸ ಹಸಿ ಮನದಲ್ಲಿ"

ಇಷ್ಟೆಲ್ಲ ಮುನಿಸಿನ ಮಧ್ಯೆ..ಗಂಡಲ್ಲವೇ ಆತ.. ತುಂಟತನ ಸಹಜ ಆತನಿಗೆ...ಅನ್ನುತ್ತಾನೆ‌.." ಹಸಿ ಹಸಿ ಬಯಕೆಗಳು ಮಳೆಗೆ ಮೊಳೆಯುತ್ತಿವೆ ನನ್ನೊಳಗೂ. ನೀ ಸ್ಪಂದಿಸುವುದಿಲ್ಲವೆಂಬ ಖಾತರಿಯಿಂದ ಅದುಮಿಟ್ಟಿದ್ದೇನೆ ಒಳಗೇ"..

ಯಾಕದು?! ಸುರಿವ ಮಳೆಯ ಮಧ್ಯೆ ಕಳೆದು ಹೋದೀತೆಂಬ ಭಯವೇ?.. ಸ್ಪಂದನ ಬರೀ ಅರಿವಿನಿಂದಾದೀತೆ? ಅದಕ್ಕೆ ಬೇಕು...ಹುಚ್ಚು ಆವೇಶ.. ಕನಸ ಬಿತ್ತುವವರಲ್ಲೆಲ್ಲಿ ಅದು?!?!... ಆವೇಶ ಯಾವತ್ತೂ ಕನಸ ಹಾರಾಡಿಸುವ ಹೆಣ್ಣಿನಲ್ಲಿ...
ಅದಕ್ಕೇ ಅವಳು ಆವೇಶ...ಅವಳು ಪೃಕೃತಿ!!!!.......‌ ಪುಟ್ಟಿ ಗುಡುಗು ಸಿಡಿಲಿನೊಂದಿಗೆ ಭೋರ್ಗರೆಯುತ್ತಾಳೆ...ಕಣ್ಣು ಮೂಗೆಲ್ಲ ಕೆಂಪು.,..ಹನಿಗಳ ಆರ್ಭಟ...

ನಿನ್ನೊಲುಮೆಯಾಗಸದಲ್ಲಿ ಮಳೆ ಬಿಲ್ಲೊಂದನ್ನು ಮೂಡಿಸುವ ನನ್ನಾಸೆ ಕನಸಾಗಿಯೆ ಉಳಿಯಿತು. ಸೋಲುವುದರಲ್ಲೂ ಸುಖವಿದೆ.
ಮಳೆಗೊ ಹಲವು ಮುಖವಿದೆ...  ಎಷ್ಟಾದರೂ ಆತ ಪುರಷ, ಪೃಕೃತಿ ಎದುರು ನಿಲ್ಲಲ್ಲುಂಟೇ...ಎಷ್ಟೇ ಸೆಡವಿದ್ದರೂ, ಪುರುಷನದೇ ಸೋಲು, ಪೃಕೃತಿಯದೇ ಗೆಲುವು....

ಪುಟ್ಟಿ ಪೃಕೃತಿಯಾದರೇನು ...ಕನಸಾದರೇನು..ಚಿಟ್ಟೆಯಾದರೇನು...ಹುಟ್ಟಿನಿಂದ ಬಂದ ತಾಯ್ತನ ಬಿಟ್ಟು ಹೋದೀತಾ??!... ಎಲ್ಲದನ್ನ ಎಲ್ಲರನ್ನ ತನ್ನೊಳೆಗೇ ಒಯ್ದು ಕರಗುವ ಆಕೆ..‌ಅನ್ನುತ್ತಾಳೆ...... "ಬಿತ್ತಿದ ಕನಸು ಉತ್ತ ಮೇಲೆ ಮಳೆಬಿಲ್ಲು ತಾನಾಗಿಯೇ ಮೂಡೀತು... ಸೋಲು ಗೆಲುವು ಮಳೆಯ ಮುಖಗಳೇ".

ಹೊರಗೆ ಧೋ ಎಂದು ಸುರಿಯುವ ಮಳೆ... ಒಳಗಿನ ಮಳೆಯೂ ಸುರೀದೀತು.... ಮನಸ ದುಗುಡಗಳು ಮೋಡದಂತೆ ಕರಗಿ ಮಳೆಗಾಲ ಮುಗಿಯುವುದರ ಆಚೆ ಈಚೆ, ಹೃದಯ ಆಕಾಶದಂತೆ ತಿಳಿಯಾದೀತು.... ಪುಟ್ಟಿಯ ಕಣ್ಣಿನಲ್ಲೂ ನಗು ಕಂಡೀತು.... ಬಾ ಮಳೆ ಬಾ, ಪುಟ್ಟಿ ಮನದಲ್ಲಿ ಚಿಗುರು ಮೊಳೆಕೆಯೊಡಯಲಿ.... ಅವಳೇ ಪೃಕೃತಿ ಪುರುಷನಲ್ಲಿ ಚಿಗುರು... ಸಂಸಾರದಲ್ಲಿ ಚಿಗುರು ಅವಳಿಂದಲೇ... ಬಾ ಮಳೆ ಬಾ

Sunday, 4 June 2017

Samudra..... Kanasu ( ಸಮುದ್ರ ಕನಸು)

ನೀರೇ ನೀರು... ಸಮುದ್ರದ ತುಂಬಾ ನೀರು, ಕುಡಿಯಲಾಗದ ನೀರು ಆದರೂ ಜೀವರಾಶಿಗಳಿಗೆ ಜನುಮ ಕೊಡುವ ಜಲರಾಶಿ... ಜಲರಾಶಿಯ ಅನುಭೂತಿಯೇ ಅದ್ಭುತ....ಹೆಣ್ಣಿನ ಕನಸಿನಂತೆ.. ಕನಸಿನ ಅನುಭೂತಿಗಾಗಿಯೇ ಬದುಕುವ ಬಯಕೆ.
ಕನಸು ನನಸಾಗುವ  ಬಯಕೆ.. ಸಮುದ್ರದ ನೀರನ್ನ ಕುಡಿಯಲು ಪ್ರಯತ್ನಸಿದಷ್ಟು ಕಷ್ಟ..

ಸಮುದ್ರ ಅದು ಬರೀ ಶಬ್ದವಲ್ಲ... ಆಗಾಧತೆ, ಸಂತಸ...ಆಟ,ಸ್ಪೂರ್ತಿ,ಸ್ಪರ್ಧೆ... ಇನ್ನೇನು..??.. ಸಮುದ್ರವೇ ಜೀವನ .. ನಮ್ಮ ಮೀನುಗಾರರಿಗೆ, ಸಮುದ್ರ ತಾಯಿ, ಸಮುದ್ರ ಬದುಕು, ಅಂತೆಯೇ ಸಮುದ್ರ ಜೀವರಾಶಿ ಎಷ್ಟೋ ಕನಸುಗಳಿಗೆ..ಇನ್ನೆಷ್ಟೋ ಕೌತುಕಗಳಿಗೆ..ಮತ್ತೇಷ್ಟೋ ಚಪಲಗಳಿಗೆ... ಸಮುದ್ರವೇ..ಸಮುದ್ರ

ಹೆಣ್ಣಿನ ಕನಸೂ ಅಂತೆಯೇ... ಅದು ಬರೀ ಆಶಯವಲ್ಲ.. ಅದೊಂದು ಹರಹು, ಸಮಾಧಾನ... ಅದು ಇಡೀ ಕುಟುಂಬಕ್ಕೆ ಸ್ಪೂರ್ತಿ..ಅದಿಲ್ಲದೆ ಆಟವಿಲ್ಲ, ಸ್ಪರ್ಧೆಯೂ ಇಲ್ಲ.. ಅದರೊಳಗೇ ಅಡಗಿದೆ ಬಂಡಾಯ. ಅದರಲ್ಲಿದೆ ಜೀವ ಪ್ರೀತಿ...ಇಡೀ ಜೀವಮಾನದ ಇನ್ನೇಷ್ಟೋ ಕೌತುಕಗಳು.. ಹೆಣ್ಣಿನ ಚಪಲಗಳಿಗೆ ಕನಸೇ ಆಧಾರ..

ಸಮುದ್ರದ ಆಳ.. ಅದರ ಅಳತೆ ಸಧ್ಯಕ್ಕೆ ಸಾಧ್ಯವಾಗದ ಮಾತು.‌ ಇಲ್ಲೆಲ್ಲೋ ಕಾಲಿಕ್ಕಬಹುದು ಅನ್ನಿಸಿದರೆ ಇನ್ನೆಲ್ಲೋ ಮುಳುಗಿಯೇ ಹೋದೆ ಅನ್ನಿಸುತ್ತೆ... ಸಮುದ್ರ ತಟದಲ್ಲಿ ನಿಂತರೆ ಕಣ್ಣ ಹಾಯಿಸಿದಷ್ಟೂ ನೀರೇನೀರು... ತನ್ನೊಳಗೆ, ಬದುಕು ಹೋರಾಟ ಇಷ್ಟಕ್ಕೆ ಮಾತ್ರ ಜಾಗ ಅನ್ನುತ್ತೆ... ಒಣಗಿದ ಪ್ರತಿ ಸರಕೂ ತಟಕ್ಕೇ...

ಹೆಣ್ಣಿನ ಕನಸಿಗೊಂದು ಅಡೆಯೇ...ಅದಕ್ಕೊಂದು ಅಂತ್ಯವೇ?!?!.. ಮನಸ್ಸ ತುಂಬಾ ಇರುವ ಪ್ರೀತಿ, ಕನಸತುಂಬಾ ಪಸರಿಸುತ್ತೆ. ಕಣ್ಣೀರಿನ ಓಗಕ್ಕೆ..ಕನಸಲ್ಲಿ ಮುಳುಗೆದ್ದ ಕರುಣೆ, ಪ್ರೀತಿ ಕಾರಣ.. ಕನಸು ನಿಂತದ್ದು, ಕೈಗೆ ಸಿಕ್ಕಿದ್ದು ನೋಡಿದ್ದೀರ?? ಅದಕ್ಕೊಂದು ಗಡುವೂ ಇಲ್ಲ..ಅದು ಓಡುತ್ತೆ, ಅದೇ ಜನುಮ ನೀಡುತ್ತೆ ಹೊಸ ಕನಸಿಗೆ, ನನಸಾಗುವ ಕನಸೇ ಹೆಣ್ಣಿಗಿಲ್ಲ...

ನೊರೆನೊರೆಯ ನೀರು... ಎದ್ದೆದ್ದು ಅಬ್ಬರದ ತೆರೆ...ತೊರೆಗಳ್ಳೆಲ್ಲ ಬಂದು ಸೇರಿ ಸಮುದ್ರ ನಗುತ್ತೆ, ಸಮುದ್ರದಂತೆ ಎಲ್ಲೆಲ್ಲೂ ಪಸರಿಸುವ ಕನಸು. ಹೆಣ್ಣ ಮಕ್ಕಳ ಕನಸೇ ಹಾಗೆ, ಸಮುದ್ರದಂತೆ ಅಬ್ಬರಿಸುವ, ಪ್ರೀತಿಸುವ ಆಗಾಧತೆ. ನಿಂತಲ್ಲಿ ನಿಲ್ಲದೆ... ಅದಕ್ಕೊಂದು ಸಮಯದ ಕೊನೆಯೂ ಇಲ್ಲದೆ, ಆದಿ, ಅಂತ್ಯಗಳಿಲ್ಲದ ಬರೀ ತನ್ನದಾಗಿಸಿಕೊಳ್ಳುವ ಕನಸುಗಳು... ಹೆಣ್ಣಿನ ಕನಸುಗಳು, ಸ್ಪೂರ್ತಿ, ನಿಜ....ಅವುಗಳೇ ಅವಳ ಜೀವನಾಡಿ.... ಆದರೆ ಆಕೆಗೊಂದು ಕುಡಿ ಆಸೆ... ಕನಸು ನನಸಾದೀತೆ? !?!.. ಸಮುದ್ರದ ನೀರು ಕುಡಿಯುವಂತಾದೀತೇ!?!?....

Sunday, 28 May 2017

Mungaru Male...Hennu...Kanasu ( ಮುಂಗಾರು ಮಳೆ... ಹೆಣ್ಣು...ಕನಸು)

ಮಳೆ..ಮುಂಗಾರು ಮಳೆ..ನನ್ನ ಹುಟ್ಟು ಕರಾವಳಿ ಆದದ್ದಕೋ...ಇಲ್ಲ ಮಳೆಯಲ್ಲೇ ಎಲ್ಲರ ಬದುಕಿನ ಮುನ್ನುಡಿ ಇದೆಯೋ..ಅಂತೂ ಮುಂಗಾರು ಮಳೆಗೂ ನನಗೂ ಇನ್ನಿಲ್ಲದ ನಂಟು... ಅದನ್ನೇ ಬರೆಯೋಣ ಅಂತ ಹೊರಟೆ...ಮೊನ್ನೆ ನನಗೊಂದು SMS ಬಂತು: ಮುಂಗಾರು ಮುನ್ನುಡಿ ಬರೆಯುವಂತಿದೆ ಗೆಳತಿ. ಮನ್ನಸ್ಸಿನ ಮೂಲೆಯಲ್ಲಿದ್ದ ಬರವಣಿಗೆ ಗೂಡು ಕಟ್ಟ ತೊಡಗಿತು.

ಮುಂಗಾರು ಮಳೆ..ಹೆಣ್ಣು ಎರಡೂ ಒಂದೇ.. ಮೊದಲು ಬಂದಾಗೊಂದು ಹೊಸ ಪರಿಮಳ... ಅಲ್ಲೇ ನೆಲೆ ನಿಂತ ಮಣ್ಣಿಗೂ ಹೊಸ ಗಮಗಮ... ಅದನ್ನ ಅಸ್ವಾದಿಸಲು, ಪ್ರತಿಯೊಬ್ಬರಿಗೂ ಆಸೆ... ಬಿಸಿಲ ಬೇಗೆಗೆ ಕಾದು ನಿಂತ ನೆಲ.. ಬಯಸುವುದು ಧೋ ಎಂದು ಸುರಿಯುವ ಮುಂಗಾರನ್ನ. ಪ್ರೀತಿಯೆಂಬ ಕನಸನ್ನ ತನ್ನೊಳಗೇ ಬೇಯಿಸಿದ ಹಡುಗನಿಗೂ ಧೋ ಎಂದು ತನ್ನೊಳೆಗೆ ಸುರಿದು ಬರುವ ರಾಧೆಯ ಆಸೆ...

ಕಪ್ಪು ಮೋಡವನ್ನೆಲ್ಲ ಸರಸಿ ಪೃಕೃತಿಗೊಂದು ಹೊಸ ಹುಟ್ಟು ಮುಂಗಾರಿನಿಂದ...ಎಲ್ಲೆಲ್ಲೂ ಹಸಿರು, ಹೊಸ ಹುರುಪು, ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿ ಕೂಡ ನೀರು. ಜೀವ ಸೆಲೆಗೆ ಆಸರೆ ಮುಂಗಾರು...ಹೆಣ್ಣೂ ಪೃಕೃತಿ ತಾನೆ, ಆಕೆಯ ಗೆಜ್ಜೆ ಕಾಲುಗಳು ಹೃದಯ ಜಲ್ಲೆನಿಸುತ್ತೆ.. ಜೀವಗಳು ಸೆಲೆಯಾಗಿ ಹರಿಯಲು ಬೇಕವಳ ತಂಪು, ಹೊಸ ಹುಟ್ಟಿಗೆ ಅವಳೇ ಸಾಕ್ಷಿ..ಅವಳೇ ಮಾದರಿ.. ಅವಳಿದ್ದಲ್ಲೆಲ್ಲ ಹಸಿರು, ಕೆಂಪುಗಳ ಆಟ...ಅವಳಾಗಮನವೇ ತುಂಬುವಿಕೆ... ನೀರೇನೀರು...

ಪೃಕೃತಿ, ಬೆಚ್ಚಗಿನ  ಕನಸು, ರೈತನ ಬೆವರು... ಜೀವಗಳ ಹೋರಾಟ, ಇನ್ನೊಂದು ಹುಟ್ಟು... ಎಲ್ಲಾ ಮುಂಗಾರಿಗೆ.. ಜೊತೆಗಿಹಳು ಅವಳು, ಅವಳ ಕನಸು..ಅಲ್ಲಿಂದಲೇ ಇನ್ನೊಂದು ಜೀವ..ಮತ್ತೊಂದು ಜೀವನ..

ಹೆಣ್ಣಿನ ಬದುಕು ಹಣ್ಣಾಗುತ್ತೆ... ಕನಸುಗಳು ಬಣ್ಣ ಕಳೆದುಕ್ಕೊಳ್ಳುತ್ತೆ.. ಕಣ್ಣು ಮಂಜಾಗೋಕು ಮುಂಚೆ, ಟಿಪ್ಪ್..ಟಿಪ್ಪ್ ಅಂತ ನಂತರ ಧೋ..ಧೋ ಬರುವ ಮಳೆಯಲ್ಲಿ ನೆನಪುಗಳು ಹುಟ್ಟುತ್ತವೆ.. ಹಣ್ಣಾದ ಬದುಕಿನಲ್ಲಿ ಪುನಃ ಬಣ್ಣಗಳ ಕೊಡೆ ಹೊಸ ಕನಸ ಹುಟ್ಟಿಸುತ್ತೆ... ಆಗಲೇ.. ಅಂಗಳದ ಚಿಕ್ಕ ದೊಡ್ಡ ಹೊಂಡಗಳಲ್ಲಿನ ನೀರಿಗೆ ಆಕೆಯ ಗೆಜ್ಜೆ ಕಾಲ್ಗಳ ಹಿತಾನುಭೂತಿ..ನೀರಿನಾಸೆ ಎಂದಾದರೂ ಪೂರೈಸುವೆಯಾ ಗೆಳತಿ, ಕೇಳಿದ ಗೆಳಯ ಈಗಿಲ್ಲ ... ಆದರೆ ಅನುಭೂತಿ ಜೀವಂತ...

ಮುಂಗಾರು ನಿರಂತರ.. ಹೆಣ್ಣು, ಪ್ರೀತಿ ನಿಲ್ಲದ ಮಳೆ.. ಮಳೆಯಲ್ಲೇ ಬದುಕು, ಆಕೆ ತಾಯಿ..ಬದುಕು ತುಂಬುತ್ತಾಳೆ..

ಇನ್ನು ಮುಗಿಯಲ್ಲಿಲ್ಲ ನನ್ನ ಮಳೆಯ ಹಂಬಲ... ಇನ್ನೂ ಇದೆ ಬರೆಯಲು ಮಳೆಯ ಹಾಗೆ..ಮಳೆಯ ಬಗ್ಗೆ.... ಆದರೀಗ ಹೆಣ್ಣಾಗಿ ಕಾಯುತ್ತಿರವೆ ಮುಂಗಾರು ಹ್ಯೊಯಲು.... ಬರಲಿ ಬರಲಿ ಮಳೆ..ಮುಂಗಾರು‌ ಬರಲಿ..ಕನಸ ಅಂತ್ಯದಲ್ಲೇ ಹುಟ್ಟಲಿ ನೆನಪು..

Monday, 22 May 2017

Vivaha....Preeti....Vodethana (ವಿವಾಹ....ಪ್ರೀತಿ...ಒಡೆತನ)

ಕನಸಿನ ನಂತರ ಇನ್ನು ನಾನು ಬದುಕಿನ ನೋಟದಿಂದ ಮಾತನಾಡಲು ಶರುವಿಟ್ಟು ಕೊಳ್ಳುವ ಅಂತ.... ಇದೀಗ ವಿವಾಹ ಕಾಲ... ಅದನ್ನೇ ಮಾತನಾಡೋಣವೇ

ಸರಳ ವಿವಾಹ ಅದ್ದೂರಿ ವಿವಾಹ...ಇದೆರಡೂ ಇವತ್ತಿನ fashion....  ಬುದ್ದಿಜೀವಿ ಅನ್ನಿಸಿಕೊಂಡವರದು ಸರಳ ವಿವಾಹ.. . ಸಮಾಜದ ಪ್ರಮುಖ ವ್ಯಕ್ತಿ ಅನ್ನಿಸಿಕೊಂಡವರದು ಅದ್ದೂರಿ ವಿವಾಹ...

ವಿವಾಹದ ಸಂಪ್ರದಾಯದಲ್ಲೇನಾದರೂ ಬದಲಾವಣೆ? ಊಹಂ.. ಎರಡೂ ಪದ್ದತಿ ಒಂದೇ, ಹೆಣ್ಣಿಗೆ ತಾಳಿ ಕಟ್ಟು, ಆಕೆಯನ್ನ ತನ್ನ ಒಡೆತನಕ್ಕೆ ಒಪ್ಪಿಸಿಕೋ.. ಮನುಷ್ಯನ ಒಡೆತನಕ್ಕೆ ಅಂತ ಇರುವುದು...ಮನೆ,ದುಡ್ಡು, ಹೆಂಡತಿ, ಮಕ್ಕಳು...

ಅಲ್ಲಾ ಒಡೆತನ ಹೊಂದುವಿಕೆ ಇವುಗಳಿಲ್ಲದೇ ಪ್ರೀತಿ, ಬದುಕು ಸಾಧ್ಯವಿಲ್ಲವೇ??.. ನಾನು ನೀವು ಎಲ್ಲಾ ಒಪ್ಪುತ್ತೇವೆ, ಪ್ರೀತಿಗೆ ಚೌಕಟ್ಟಿಲ್ಲ ಅಂತ, ಹಾಗೆಂದಮೇಲೆ ಅದಕ್ಕೆ ಒಡೆತನವೂ ಇರಬಾರದಲ್ಲ... ವಿವಾಹ ಅನ್ನೋದು ಪ್ರೀತಿಯೆಂಬ ಕನಸಿನ ತೇರು ತಾನೇ, ಇಲ್ಲೇಕೆ ಒಡೆತನ? ಇಲ್ಲೇಕೆ ತಾಳಿ?? ತಾನು ಒಡೆತನಕ್ಕೆ ಒಪ್ಪಿಸಲ್ಪಟ್ಟವಳು ಅನ್ನೋ ಕುರುಹು??ಕೈಯ ಹಿಡಿದು ಜೊತೆ ನಡೆಯುವ ಪ್ರೀತಿಗೆಂತಹ ಪ್ರಮಾಣ?

ಹಣೆಯ ಕುಂಕುಮ, ಕಾಲಂದುಗೆ,ಕತ್ತಿನ ಸರ... ಅಲಂಕಾರಕ್ಕಲ್ವೇ... ಕೃಷ್ಣ ಹಾಕಿ ನಡೆದಾಗ, ಓಡಿ ಬಂದ ಗೋಪಿಯರಿಗೆ, ಕೃಷ್ಣ ಮುಖ್ಯವಾದ ಅವನ ಅಂದ ಮೋಡಿ ಆಯಿತು.... ಅದೇ ರುಕ್ಮಿಣಿಯ ಹಣೆಯ ಕುಂಕುಮ, ಕಾಲಂದುಗೆ, ಕತ್ತಲ್ಲಿನ ತಾಳಿಗೆ ಕೃಷ್ಣನ ಒಡೆತನ ಯಾಕೆ??.. ಅವಳಂದಕ್ಕದು ಮೋಡಿ ಅನಿಸಬಾರದೇಕೆ??

ಪ್ರೀತಿಯ ಕನಸು, ವಿವಾಹದ ಬಂಧ..ಇಲ್ಲೆಲ್ಲ ಮನಸ್ಸು ಖಷಿ ಅನ್ನಿಸುವ ಒಬ್ಬರಿಗೊಬ್ಬರು ಅನ್ನೋ ಸಮಾನತೆಯ ಸಮನ್ವಯದ ಮಾತು..... ಜಗತ್ತಿಗೆ ಪರಿಚಯಿಸುವಾಗ ಹೆಣ್ಣಿಗೆ ಮಾತ್ರ ಒಡೆತನದ ಕುರುಹಗಳು.. ತಾಳಿ, ಕಾಲುಂಗುರ, ಹಣೆಯ ಕುಂಕುಮ...

ಬಂಧ..ಎಂದು ಬಂಧನವಾಯ್ತೋ ತಿಳಿಯಲಿಲ್ಲ. ಹೆಂಡತಿ ಒದೆಯಬೇಕಾಗಿರುವುದು ಹೊಸ್ತಿಲ ಸೇರಕ್ಕಿಯನ್ನಲ್ಲ: ಪರಂಪರೆ, ಸಂಪ್ರದಾಯಗಳ 'ಸುರಕ್ಷಿತ ಗುರಾಣಿ'ಯ ಹಿಂದಿರುವ ಪುರುಷಾಹಂಕಾರಕ್ಕೆ... ಒಡೆತನದ ಸಂಕುಚಿತೆಯ ಆಚೆಯೂ ಬದುಕಿದೆ..ಕನಸಿದೆ..

ಅಯ್ಯೋ ಈ ಸ್ತ್ರೀವಾದಿಗಳ ಗೋಳು ಅಂತ ಮೂಗು ಮುರಿಬೇಡಿ, ಎಡಪಂಥೀಯ ಅಂದುಕೊಂಡವರೆ ಒಮ್ಮೆ ನಿಮ್ಮೊಳಗೆ ಇಣುಕಿ ನೋಡಿ...ಪದ್ದತಿ ಏನಾದರೂ ಬದಲಾಯಿಸಿದ್ದೀರಾ??.. ಬುದ್ದಿಜೀವಿಗಳೇ... ವಿವಾಹ ಪದ್ದತಿಗಳಿಗೆ ಕಾರಣ ಕೊಡುವುದರ ಬಿಟ್ಟು ಬೇರೇನಾದರೂ ನಡೆದಿದೆಯಾ??.ಪ್ರತಿಷ್ಟರೇ... ಹೊಸತನ ಸಂಪ್ರದಾಯದಲ್ಲಿ ಬರಬೇಕು.. ತೋರಣಗಳಲ್ಲ...

ಜಾತಿ ಮತಗಳ ಕಟ್ಟೆ ಒಡೆದು ನಡೆವ ನಾವು ಒಡೆತನದ ಬಂಧನವನ್ನೂ ಒಡೆದು ನಡೆಯಬೇಕಲ್ಲವೇ??
    

Friday, 19 May 2017

Aatha...Aake....Kanasu (ಆತ ....ಆಕೆ ...ಕನಸು)

 ಕಡು ಕಪ್ಪಿಗೆ
ಬಂಗಾರದ ಅಂಚು
ಸೀರೆ ನೋಡಲೊ
ಸೀರೆಯೊಡತಿಯ ನೋಡಲೊ? ಆತನ ಕವನ

ತುಂಬಾ ಸುಂದರವಾಗಿದೆ..ಕನಸಿನ ಉತ್ತರ..

ನೀನು ತುಂಬಾ ಚಂದ  ಅದಕ್ಕೆ ನನಗೆ ಭಯ...ಆತನ ಹಂಬಲ

 ಅಯ್ಯೋ...ನಾನೇನು ಮಾಡಿದೆ
ನಾನೆಲ್ಲಿ ಚೆಂದ... ಸುಂದರತೆ ನೋಡುಗನ ಕಣ್ಣಲ್ಲಿ..ಕನಸಿನಲ್ಲೂ ಚಂಚಲತೆ..

ನೀನೇನೂ ಮಾಡಲಿಲ್ಲ
ನಾನೇ ಏನಾದರೂ ಹೇಳಿಬಿಟ್ಟರೆ ಅಂತ..ಆತನ ಹಿಂಜರಿಕೆ

ಅಂದೆಂತ ಹೇಳೋಣ.... ಕವಿಗಳು.. ಏನು ಹೇಳಿದರೂ ಚೆಂದ..ಕನಸಿಗೆ ಬಿನ್ನಾಣ

ಹೊನ್ನ ಸಂಜೆಯೊಂದು ಸುಮ್ಮನೆ ಸರಿದು ಹೋಯಿತಲ್ಲ!
ನಿನ್ನ ಬಿಸುಪಿಲ್ಲದೆ...ಆತನ ತಳಮಳ

ಸಂಜೆಗಳು ಹೊನ್ನವಾಗುವುದು....ನೆನಪಿನ ಅಂಗಳದಲ್ಲಿ..ಕನಸಿನ ತಿರುಗುತ್ತರ

ಕನಸು ಚೆಲ್ಲಾವೆ ಗೆಳತಿ
ಮನದಂಗಳದ ತುಂಬಾ...ಆತನ ಹಪಹಪಿ..

 ಕನಸುಗಳು ಜೀವಿತದ ಸಂಖ್ಯೆ..
ಮನಸ್ಸಿನ ಬಿಸುಪು..ಕನಸುಗಳಿಂದ..ಆಕೆಯ ಮುಗ್ದತೆ?!?!

ತೀರದಲಿ ಬಳುಕುವಲೆ
ಕಣ್ಣ ಚುಂಬಿಸಿ ಮತ್ತೆ..ಆತ ಕಂಡ ಕನಸು

ಕಣ್ಣ ತುಂಬಾ ಕನಸು..ಮುಚ್ಚಲೂ ಬಾರವಾಗುತಹ ಕನಸು... ಹಾರಿಹೋದೀತು ಜೋಕೆ.. ಎಚ್ಚರಿಕೆ ಆಕೆಯಿಂದ

ರೆಕ್ಕೆಗಳನು ನಿನ್ನ ಮಡಿಲಲಿ ಮರೆತಿರುವಾಗ
ಹಾರಿ ಹೋದೇನಾದರೂ ಹೇಗೆ?..ಆತನ ಬೇಡಿಕೆ..

 ಮಡಿಲು ಬರಿದಾಗಿ ವರ್ಷಗಳೇ ಆದವು.... ಕನಸುಗಳ ಹುಟ್ಟಿ ಮಡಿಲು ಬರಿದಾಗಿಸಿದವೋ ಗೆಳೆಯ...ಕನಸಿಗೊಂದು ಬಿಗಿಮಾನ

ಒರತೆಗಳ ಮೇಲಡರಿದ ಮಣ್ಣ ಸರಿಸಿ
ಜೀವ ಜಲವ ಸ್ಪುರಿಸಬೇಕು...ಪುನಃ ಒರೆತ

ಮಣ್ಣುಗಳ ಆ ಕಂಪಿಗೇ ಜೀವ ಜಲ ಸ್ಪುರಿಸುತ್ತದೆ....ಬಿಡಲ್ಲೊಳು ತನ್ನ ಬಿಗು

ಭಾವನೆಗಳಿಗೆ ಎಷ್ಟು ಚಂದ ಸ್ಪಂದಿಸುತ್ತೀಯಾ ನೀನು...ಕೊನೆಗೂ ಆತ ಸೋತ

 ಮಾತಿನಲ್ಲರಮನೆ... ಕನಸಿನಲ್ಲಿ ಸೂರ್ಯೋದಯ...ಇವೆರಡೂ ಸುಲಭ...ಸೋಲು ತನ್ನದಲ್ಲ ಅನ್ನುತ್ತಾಳೆ ಕನಸು....

ಆತ..ಮೌನ..ಕನಸಿನ ಕವನ ಹಾಡಾಗಿ ಹರಿಯಲು ಕಾಯುತ್ತಾ....

ಕತ್ತಲ ಪ್ರೀತಿ Kattala Preethi

ಮನಸ್ಸಿನ ದೀಪ ಹೊತ್ತಿ ಉರಿಯುತ್ತಿದೆ.. ಎದೆಯ ಕನಸು ಬತ್ತಿ ಹೋಗಿದೆ... ಮನೆಯ ತುಂಬಾ ದೀಪಗಳ ಸಾಲು... ದೀಪಾವಳಿಯ ಸಂಭ್ರಮ ಜಗಕ್ಕೆ ನನ್ನ ಕಳೆದು ಕೊಂಡ ದುಃಖದ ಮೊಗೆ ಆ...